ಹಳಿಯಾಳ: ಹೊನ್ನಾವರದ ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತ ಕೊಲೆ ಪ್ರಕರಣ ಹಾಗೂ ಅಲ್ಲಿ ನಡೆಯುತ್ತಿರುವ ಗಲಭೆಗಳಿಗೆ ನೇರವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರೇ ಹೊಣೆಯಾಗಿದ್ದು ಘಟನೆಯ ನೈತಿಕ ಹೊಣೆಹೊತ್ತು ಸಚಿವ ದೇಶಪಾಂಡೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಸುನೀಲ್ ಹೆಗಡೆ ಆಗ್ರಹಿಸಿದರು. ಪಟ್ಟಣದಲ್ಲಿ ಸೋಮವಾರ ಹಳಿಯಾಳ ಬಿಜೆಪಿಯವರು ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡುತ್ತಾ ಕೊಮು ಶಕ್ತಿಗಳು ಅಮಾಯಕ ಪರೇಶ್ನನ್ನು ಜಿಹಾದಿ, ಐಸಿಸ್ ಊಗ್ರರಿಗಿಂತಲೂ ಹೆಚ್ಚಿನ ದುಷ್ಕøತ್ಯ ಮೆರೆದು ಹಿನಾಯ ಹಾಗೂ ಬರ್ಬರವಾಗಿ ಕೊಲೆ ಮಾಡಿದ್ದು ಇದರಲ್ಲಿ ಸ್ಥಳೀಯ ಪೋಲಿಸ್ ಅಧಿಕಾರಿಯೂ ಶಾಮಿಲಾಗಿದ್ದು ಕೊಲೆ ಪ್ರಕರಣದ ಆರೋಪಿಗಳನ್ನು ರಕ್ಷಿಸಲು ಮುಂದಾಗಿರುವ ಬಗ್ಗೆ ಬಹಿರಂಗವಾಗಿದ್ದು ಆ ಅಧಿಕಾರಿಯನ್ನು ಕರ್ತವ್ಯದಿಂದ ವಜಾ ಮಾಡಬೇಕು ಪ್ರಕರಣದಲ್ಲಿ ಅಧಿಕಾರಿಯೂ ಇರುದರಿಂದ ಜಿಲ್ಲಾ ಪೋಲಿಸ್ ಇಲಾಖೆಯಿಂದ ನಿಷ್ಪಕ್ಷಪಾತ ತನಿಖೆ ನಡೆಯುವ ಬಗ್ಗೆ ವಿಶ್ವಾಸವಿಲ್ಲ ಕಾರಣ ಹಿನಾಯ ದುಷ್ಕøತ್ಯ ಮೆರೆದ ಪಾಪಿಗಳ ಮುಖವಾಡ ಸಮಾಜದಲ್ಲಿ ಕಳಚಬೇಕಾದರೇ ತನಿಖೆಯನ್ನು ಎಎನ್ಐ ಅಥವಾ ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಿದರು. ಸಿಎಂ ಸಿದ್ದರಾಮಯ್ಯ ಹೊನ್ನಾವರಕ್ಕೆ ಆಗಮಿಸಿದ ಸಂದರ್ಭದಲ್ಲೇ ಈ ಕೃತ್ಯ ನಡೆದಿದ್ದು ಪ್ರಕರಣ ಮುಚ್ಚಿ ಹಾಕಲು ಹಾಗೂ ಆರೋಪಿ ಆಜಾದ ಕಣ್ಣಿಗೇರಿ ಮತ್ತು ಆತನ ಸಹಚರರನ್ನು ರಕ್ಷಿಸಲು ಸ್ಥಳೀಯ ಪೋಲಿಸ್ ಅಧಿಕಾರಿ ಸಹಾಯ ಮಾಡಿದ್ದು ಬೇರೆ ಪ್ರಕರಣದಲ್ಲಿ ಅವರನ್ನು ಬಂಧಿಸಿ ಪರೋಕ್ಷವಾಗಿ ಈ ಪ್ರಕರಣದಿಂದ ಅವರನ್ನು ಬಚಾವ್ ಮಾಡುವ ವ್ಯವಸ್ಥಿತ ಷಡ್ಯಂತ್ರ ಮಾಡಲಾಗಿದ್ದು ದುಷ್ಕøತ್ಯದ ಬಗ್ಗೆ ವಿಡಿಯೋ ಪೊಟೊಗಳು ವೈರಲ್ ಆಗಿದ್ದು ಅಮಾಯಕನ ಸಾವಿಗೆ ನ್ಯಾಯ ದೊರಕಬೇಕು, ನಿಜವಾದ ಆರೋಪಿಗಳು ಮತ್ತು ಸಹಾಯ ಮಾಡಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಬಿಜೆಪಿ ಒತ್ತಾಯಿಸುತ್ತದೆ ಎಂದರು. 1986 ರಲ್ಲಿ ಹಳಿಯಾಳದಲ್ಲಿ ನಡೆದ ಹಿಂದೂ-ಮುಸ್ಲಿಂ ಗಲಾಟೆಗೆ ದೇಶಪಾಂಡೆ ಅವರೇ ಕಾರಣಿಕರ್ತರಾಗಿದ್ದರೂ ಎಂಬುದು ಕ್ಷೇತ್ರದಲ್ಲಿ ಎಲ್ಲರಿಗೂ ತಿಳಿದ ವಿಷಯವಾಗಿದೆ ಎಂದ ಹೆಗಡೆ ಸಚಿವ ಆರ್.ವಿ.ದೇಶಪಾಂಡೆ ಅವಧಿಯಲ್ಲೇ ಜಿಲ್ಲೆಯಲ್ಲಿ ಹೆಚ್ಚಿನ ಕೊಮು ಗಲಭೆಗಳು ನಡೆಯುತ್ತವೆ ಇದರ ಮರ್ಮವೇನು ಕಾಂಗ್ರೇಸ್ ಸರ್ಕಾರವು ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಕೋಮುಸೌಹಾರ್ದತೆಗೆ ಧಕ್ಕೆ ತರುವುದರ ಮೂಲಕ ಬಿಜೆಪಿ ಪಕ್ಷದ ಹೆಸರಿಗೆ ಮಸಿ ಬಳೆಯಲು ಪ್ರಯತ್ನಿಸುತ್ತದೆ ಜೊತೆಗೆ ಪೋಲಿಸ್ ಬಲದ ಮೂಲಕ ಸಮಾಜದಲ್ಲಿ ಅಶಾಂತಿ ಕದಡುತ್ತದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ 19ಕ್ಕಿಂತ ಹೆಚ್ಚು ಹಿಂದೂ ಕಾರ್ಯಕರ್ತರು, ಮುಖಂಡರ ಹತ್ಯೆಯಾಗಿದೆ ಎಂದ ಸುನೀಲ್ ಹೆಗಡೆ ಜಿಲ್ಲೆಯಲ್ಲಿ ಇನ್ನೊಂದು ಪರೇಶ್ ಮೆಸ್ತ ಪ್ರಕರಣ ನಡೆಯುವ ಮುನ್ನ ಸೂಕ್ತ ಮುನ್ನೇಚ್ಚರಿಕೆ ಕ್ರಮ ವಹಿಸಿ ಎಂದ ಅವರು 1 ತಿಂಗಳ ಒಳಗೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೆ ಗುರಿ ಮಾಡಬೇಕು ಹಾಗೂ ಕೃತ್ಯದಲ್ಲಿ ಶಾಮಿಲಾಗಿರುವ ಪೋಲಿಸ್ ಅಧಿಕಾರಿಯ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಲ್ಲಿ ಹಿಂದೆಟು ಹಾಕಿದರೇ ಅಥವಾ ತಪ್ಪಿದಲ್ಲಿ ಛತ್ರಪತಿ ಶಿವಾಜಿ ಅವರ ಗಂಡು ಮೆಟ್ಟಿದ ನಾಡು ಹಳಿಯಾಳದಿಂದಲೇ ಊಗ್ರ ಹೋರಾಟ ಪ್ರಾರಂಭಿಸಿ ಜಿಲ್ಲಾದ್ಯಂತ ನಡೆಸಲಾಗುವುದೆಂದು ಖಡಕ್ ಎಚ್ಚರಿಕೆ ನೀಡಿದರು. ಈಡಿ ರಾಜ್ಯದಲ್ಲಿ ಟಿಪ್ಪು ಜಯಂತಿ ಬಹಿರಂಗ ಮೇರವಣಿಗೆ ನಡೆಸಲು ಅವಕಾಶ ನೀಡದಿದ್ದರೂ ಸಚಿವ ದೇಶಪಾಂಡೆ ಅವರು ಹಳಿಯಾಳ ಹಾಗೂ ದಾಂಡೇಲಿಯಲ್ಲಿ ಬೃಹತ್ ಹೈ ವ್ಯಾಟ್ ಡಿಜೆ(ಸೌಂಡ್ಸಿಸ್ಟಮ್) ಅಳವಡಿಸಿ ಟಿಪ್ಪು ಜಯಂತಿ ಮೇರವಣಿಗೆಗೆ ಅವಕಾಶ ನೀಡಿ ಸ್ವತಃ ಮೇರವಣಿಗೆಯಲ್ಲಿ ಕುಣಿದ ದೇಶಪಾಂಡೆಗೆ ಕೇವಲ ಟಿಪ್ಪು ಸಂಸ್ಕøತಿ ಅಷ್ಟೇ ಗೊತ್ತು ಎಂದು ಕಿಡಿ ಕಾರಿದ ಸುನೀಲ್ ಹೆಗಡೆ ಕಾಂಗ್ರೇಸ್ ಪಕ್ಷದಲ್ಲಿರುವ ಹಿಂದೂ ಕಾರ್ಯಕರ್ತರು ಹಾಗೂ ಮುಖಂಡರೇ ಎಚ್ಚರಿಕೆಯಿಂದಿರಿ ಓಟಿಗಾಗಿ ಏನು ಮಾಡಲು ಹೇಸದ ನಾಯಕರ ಮಾತು ಕೇಳಿ ಮುಂದೆ ನಿಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡಿಕೊಳ್ಳದಿರಿ ಎಂದು ಕರೆ ನೀಡಿದರು. ಸುದ್ದಿಗೊಷ್ಠಿಯಲ್ಲಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಮುಖಂಡರಾದ ವಾಸು ಪೂಜಾರಿ, ಎಸ್.ಎ.ಶೆಟವಣ್ಣವರ, ಗಣಪತಿ ಕರಂಜೇಕರ, ವಿಎಮ್.ಪಾಟೀಲ್, ಅನಿಲ ಮುತ್ನಾಳ, ಇಲಿಯಾಸ ಬಳಗಾರ, ತಯ್ಯಬ್ ಇನ್ನಿತರರು ಇದ್ದರು.
Leave a Comment