ಹಳಿಯಾಳ:
ವಿಶ್ವ ಹಿಂದೂ ಪರಿಷತ್, ಭಜರಂಗದಳ, ಹಿಂದೂ ಜಾಗರಣ ವೇದಿಕೆ ಹಾಗೂ ಅಖಂಡ ಹಿಂದೂ ಸಮಾಜದದಿಂದ ಹೊನ್ನಾವರ ಪರೇಶ್ ಮೇಸ್ತ ಕೊಲೆಯನ್ನು ಖಂಡಿಸಿ ದಿ.16 ಶನಿವಾರದಂದು ಹಳಿಯಾಳ ಬಂದ್ ನಡೆಸಲು ನಿರ್ಧರಿಸಲಾಗಿದೆ.ಹಳಿಯಾಳ: ವಿಶ್ವ ಹಿಂದೂ ಪರಿಷತ್, ಭಜರಂಗದಳ, ಹಿಂದೂ ಜಾಗರಣ ವೇದಿಕೆ ಹಾಗೂ ಅಖಂಡ ಹಿಂದೂ ಸಮಾಜದದಿಂದ ಹೊನ್ನಾವರ ಪರೇಶ್ ಮೇಸ್ತ ಕೊಲೆಯನ್ನು ಖಂಡಿಸಿ ದಿ.16 ಶನಿವಾರದಂದು ಹಳಿಯಾಳ ಬಂದ್ ನಡೆಸಲು ನಿರ್ಧರಿಸಲಾಗಿದೆ. ಪಟ್ಟಣದ ಶ್ರೀರಾಮ ಮಂದಿರಲ್ಲಿ ಬುಧವಾರ ಸಭೆ ನಡೆಸಿದ ಸಂಘಟನೆಗಳು ಪರೇಶ್ ಬಡ ಕುಟುಂಬದ ಅಮಾಯಕ ಬಾಲಕ ಪರೇಶ್ ಮೆಸ್ತನನ್ನು ಬರ್ಬವಾಗಿ ಕೊಲೆ ಮಾಡಿರುವುದನ್ನು ಖಂಡಿಸುವುದಾಗಿ ಹೇಳಿದ ಮುಖಂಡರು ತಪ್ಪಿತಸ್ಥರ ಬಂಧನವಾಗಬೇಕು, ಕೊಲೆಗಡುಕರಿಗೆ ಸಹಾಯ ಮಾಡಿರುವ ಪೋಲಿಸ್ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಿ.16 ರಂದು ಹಳಿಯಾಳ ಬಂದ್ ನಡೆಸಲಾಗುವುದೆಂದರು. ಆ ದಿನ ಪಟ್ಟಣದ ಶ್ರೀ ಗಣೇಶ ಕಲ್ಯಾಣ ಮಂಟಪದಿಂದ ಪ್ರತಿಭಟನಾ ಮೇರವಣಿಗೆಯ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಶಿವಾಜಿ ವೃತ್ತದಲ್ಲಿ ಸಭೆ ಸೇರಿ ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಮಾಧ್ಯಮದವರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರಾಜು ಧೂಳಿ, ಜಿ.ಆರ್.ಪಾಟೀಲ್, ಪ್ರಕಾಶ ಕಮ್ಮಾರ, ಸುಭಾಷ ಕಾಮ್ರೇಕರ, ಪ್ರಕಾಶ ಗಿರಿ, ಸಂಘಟನೆಗಳ ಮುಖಂಡರಾದ ರಾಕೇಶ ವಾಣಿ, ಸಂತೋಷ ಘಟಕಾಂಬಳೆ, ರಾಘವೇಂದ್ರ ನಾಯ್ಕ, ಮಹೇಶ ವಾಲೇಕರ, ಬಸ್ಸು ಬೇಂಡಿಗೇರಿಮಠ, ವಿಠ್ಠಲ್, ಚಂದ್ರಕಾಂತ, ಗಣಪತಿ ಇತರರು ಇದ್ದರು.
Leave a Comment