ಹಳಿಯಾಳ: ಸ್ಥಳೀಯ ಉದಯೋನ್ಮುಖ ಪ್ರತಿಭೆಗಳಿಗೆ, ಕಲಾವಿದರುಗಳಿಗೆ ವಿಶೇಷ ಅವಕಾಶಗಳ ವೇದಿಕೆಗಳನ್ನು ನಿರ್ಮಿಸಿಕೊಡಲು ಮತ್ತು ಈ ಭಾಗದ ಗ್ರಾಮೀಣ ಕಲೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ ವತಿಯಿಂದ ಪ್ರತಿ ವರ್ಷ ಆಯೋಜಿಸಲಾಗುತ್ತಿರುವ “ಹಳಿಯಾಳ ಹಬ್ಬ” ಮುಂದಿನ ದಿನಗಳಲ್ಲಿ ಇನ್ನೂ ನೂತನವಾಗಿ ಹಮ್ಮಿಕೊಳ್ಳಲು ಟ್ರಸ್ಟ್ ಚಿಂತನೆ ನಡೆಸಿದ್ದು ಪ್ರತಿಭೆಗಳು, ಕಲಾವಿದರು ಇದರ ಪ್ರಯೋಜನ ಪಡೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ವಿ.ಆರ್.ಡಿ.ಎಮ್ ಟ್ರಸ್ಟ ಅಧ್ಯಕ್ಷರಾಗಿರುವ ಆರ್.ವಿ.ದೇಶಪಾಂಡೆ ಕರೆ ನೀಡಿದರು. ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ ವತಿಯಿಂದ ಪಟ್ಟಣದ ಶ್ರೀ ಛತ್ರಪತಿ ಶಿವಾಜಿ ಕಾಲೇಜ್ ಮೈದಾನದಲ್ಲಿ ಭಾನುವಾರ ನಡೆದ 5ನೇ ವರ್ಷದ “ಹಳಿಯಾಳ ಹಬ್ಬ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಟ್ರಸ್ಟ್ನಿಂದ ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳು ಕ್ಷೇತ್ರಾದ್ಯಂತ ನಡೆಸಲಾಗುತ್ತಿದೆ. ಸದಾ ಒತ್ತಡದ ಜೀವನ ನಡೆಸುವ ಮನುಷ್ಯನಿಗೆ ಮನೋರಂಜನೆಯ ಅವಶ್ಯಕತೆಯನ್ನು ಅರಿತು ವರ್ಷದಲ್ಲೊಮ್ಮೆ ಇಂತಹ ಕಾರ್ಯಕ್ರಮ ಆಯೋಜನೆ ಮಾಡುವ ಟ್ರಸ್ಟ್ನ ಚಿಂತನೆಗೆ ಇಂದು ಕ್ಷೇತ್ರದಲ್ಲಿ ಮೆಚ್ಚುಗೆ ವ್ಯಕ್ತವಾಗಿರುವುದಕ್ಕೆ ಹರ್ಷವಾಗುತ್ತಿದೆ ಎಂದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉಧ್ಘಾಟಿಸಿದ ಕರ್ನಾಟಕದ ಮೊದಲ ಮಹಿಳಾ ದಿವ್ಯಾಂಗ ಚಿನ್ನದ ಪದಕ ವಿಜೇತೆ(ರೈಫಲ್ ಶೂಟರ್) ಜ್ಯೋತಿ ಸಣ್ಣಕ್ಕಿ, ಮಾತನಾಡಿ ದಿವ್ಯಾಂಗರಿಗೆ, ವಿಕಲಚೇತನರಿಗೆ, ಶ್ರವಣ, ದೃಷ್ಠಿ ದೊಷ ಇರುವವರಿಗೆ ಹಳಿಯಾಳದ ವಿ.ಆರ್.ಡಿಎಮ್ಟ್ರಸ್ಟ್ನಿಂದ ಸಾಕಷ್ಟು ಸಹಾಯ-ಸಹಕಾರಗಳು ದೊರೆಯುತ್ತಿರುವುದು ಟ್ರಸ್ಟ್ನ ಕಾರ್ಯ ಶ್ಲಾಘನೀಯ ಎಂದು ಕೃತಜ್ಞತೆ ಸಲ್ಲಿಸಿದ ಜ್ಯೋತಿ ತಮ್ಮ ದೇಹದಲ್ಲಿರುವ ನ್ಯೂನತೆಗಳನ್ನು ಮರೆತು ತಮ್ಮಲ್ಲಿರುವ ಪ್ರತಿಭೆಯನ್ನು ಗಮದಲ್ಲಿರಿಸಿ ಜೀವನದಲ್ಲಿ ಸಾಧಿಸುವ ಗುರಿಯನ್ನಿಟ್ಟುಕೊಂಡು ಕಾರ್ಯಪ್ರವೃತ್ತರಾದರೇ ಯಶಸ್ಸು ತಾನೇ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು. ಜಿಲ್ಲೆಯಲ್ಲಿ ಪ್ರಥಮಬಾರಿಗೆ ಹಳಿಯಾಳದಲ್ಲಿ ಉಚಿತ ವೈಪೈ:- ವಿ.ಆರ್.ಡಿಎಮ್ ಟ್ರಸ್ಟ್ನ ಧರ್ಮದರ್ಶಿಗಳಾದ ಪ್ರಶಾಂತ ದೇಶಪಾಂಡೆ ಹಾಗೂ ರಾಧಾಬಾಯಿ ಆರ್ ದೇಶಪಾಂಡೆ ಪಟ್ಟಣದಲ್ಲಿ ಟ್ರಸ್ಟ್ನಿಂದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಹಾಗೂ ಮನೋರಂಜನೆಗಾಗಿ ಪಟ್ಟಣದ ಬಸ್ನಿಲ್ದಾಣ ಸಮೀಪ, ಶಿವಾಜಿ ವೃತ್ತ ಸೇರಿದಂತೆ 3 ಕಡೆಗಳಲ್ಲಿ ಉಚಿತ ವೈಫೈ ಸೇವೆಗೆ ಚಾಲನೆ ನೀಡಿದರು. ಹಳಿಯಾಳ ಹಬ್ಬದಲ್ಲಿ ಸ್ಥಳೀಯ ಕಲಾವಿದರಿಂದ ಹಾಗೂ ವಿವಿಡಿಎಸ್ಇ ವಿದ್ಯಾರ್ಥಿಗಳಿಂದ ಸಾಂಸ್ಕøತೀಕ ಕಾರ್ಯಕ್ರಮಗಳು, ಸ್ಮಾರ್ಟ ಗ್ರೂಪ್ ಶಿರಸಿಯವರಿಂದ ನೃತ್ಯ ಸಂಜೆ, ಖ್ಯಾತ ಬಲೂನ್ ಡ್ಯಾನ್ಸರ್ ಸರವಣ ಧನಪಾಲ ಮತ್ತು ತಂಡದವರಿಂದ ನೃತ್ಯ ಪ್ರದರ್ಶನ, ಝಿ ಲಿಟಲ್ಚಾಂಪ ಸಿಸನ್ 10ರ ಗಾನ ಪ್ರತಿಭೆ ಗಣೇಶ ಬೆಳಗಾಂವಕರರಿಂದ ಗೀತ ಗಾಯನ, ಪ್ರತೀಕ್ಷಾ ಭಟ್ ಅವರಿಂದ ರಷ್ಯನ್ ರಿಂಗ್ ನೃತ್ಯ, ಝೀ ಸರಿಗಮಪ ಖ್ಯಾತಿಯ ಮೆಹಬೂಬಸಾಬ ಅವರಿಂದ ಗಾನಸುಧೆಯ ಬಳಿಕ ರಾಷ್ಟ್ರೀಯ ಖ್ಯಾತಿಯ ಗಾಯಕಿ ಐಶ್ವರ್ಯ ಮುಜುಮದಾರ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ರಾತ್ರಿ 12 ಗಂಟೆಯವರೆಗೆ ನಡೆದು ಜನರನ್ನು ರಂಜಿಸಿದರು. ಹಳಿಯಾಳ ಹಬ್ಬದ ಅಂಗವಾಗಿ ವಿಕಲಚೇತನರಿಗಾಗಿ, ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೇ ಸ್ಪರ್ದೆ, ಮಹಿಳೆಯರಿಗಾಗಿ ರಂಗೋಲಿ, ಮೆಹಂದಿ ಹಚ್ಚುವ ಹಾಗೂ ಕಿಚನ್ ಕ್ವಿನ್ ಸ್ಪರ್ದೆಯಲ್ಲಿ ವಿಜೇತರಾದವರಿಗೆ ವೇದಿಕೆಯಲ್ಲಿ ಸ್ಮರಣಿಕೆ, ಪ್ರಶಸ್ತಿ ಪತ್ರ ಹಾಗೂ ಪ್ರೋತ್ಸಾದ ಧನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯರಾದ ಲಕ್ಷ್ಮೀ ಕೊರ್ವೆಕರ, ಕೃಷ್ಣಾ ಪಾಟೀಲ್, ಪುರಸಭೆ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಎಪಿಎಮ್ಸಿ ಅಧ್ಯಕ್ಷ ಶ್ರೀನಿವಾಸ ಘೊಟ್ನೇಕರ, ರುಡಸೆಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, ಅಕ್ರಮ ಸಕ್ರಮ ಸಮೀತಿ ಅಧ್ಯಕ್ಷ ಸುಭಾಷ ಕೊರ್ವೆಕರ, ಜಿಲ್ಲಾ ವಕ್ಫ್ ಬೊರ್ಡ ಅಧ್ಯಕ್ಷ ಖಯ್ಯಾಮ ಮುಗದ, ಪುರಸಭೆ ಸದಸ್ಯ ಶಂಕರ ಬೆಳಗಾಂವಕರ, ಸತ್ಯಜೀತ ಗಿರಿ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಮೊದಲಾದವರು ಇದ್ದರು.
Leave a Comment