ಹಳಿಯಾಳ: ಸ್ಥಳೀಯ ಉದಯೋನ್ಮುಖ ಪ್ರತಿಭೆಗಳಿಗೆ, ಕಲಾವಿದರುಗಳಿಗೆ ವಿಶೇಷ ಅವಕಾಶಗಳ ವೇದಿಕೆಗಳನ್ನು ನಿರ್ಮಿಸಿಕೊಡಲು ಮತ್ತು ಈ ಭಾಗದ ಗ್ರಾಮೀಣ ಕಲೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ ವತಿಯಿಂದ ಪ್ರತಿ ವರ್ಷ ಆಯೋಜಿಸಲಾಗುತ್ತಿರುವ “ಹಳಿಯಾಳ ಹಬ್ಬ” ಮುಂದಿನ ದಿನಗಳಲ್ಲಿ ಇನ್ನೂ ನೂತನವಾಗಿ ಹಮ್ಮಿಕೊಳ್ಳಲು ಟ್ರಸ್ಟ್ ಚಿಂತನೆ ನಡೆಸಿದ್ದು ಪ್ರತಿಭೆಗಳು, ಕಲಾವಿದರು ಇದರ ಪ್ರಯೋಜನ ಪಡೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ … [Read more...] about “ಹಳಿಯಾಳ ಹಬ್ಬ” ಮುಂದಿನ ದಿನಗಳಲ್ಲಿ ಇನ್ನೂ ನೂತನವಾಗಿ ಹಮ್ಮಿಕೊಳ್ಳಲು ಟ್ರಸ್ಟ್ ಚಿಂತನೆ
ಸ್ಥಳೀಯ
ಕರಾವಳಿ ಉತ್ಸವ; ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ
.ಹಳಿಯಾಳ ; ಕರಾವಳಿ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆಯನ್ನು ನೀಡುವುದರ ಜೊತೆಗೆ ಉತ್ಸವದ ಅಂಗವಾಗಿ ಎರಡು ದಿನಗಳ ಕಾಲ ರಾಜ್ಯ ಮಟ್ಟದ ಕಬ್ಬಡ್ಡಿ ಮತ್ತು ವಾಲಿಬಾಲ್ ಪಂದ್ಯಾವಳಿಗಳನ್ನು ಆಯೋಜಿಸುವುದು ಹಾಗೂ ಅಂತಿಮ ದಿನದ ಆಕರ್ಷಣೆಗಾಗಿ ರಾಷ್ಟ್ರ ಮಟ್ಟದ ಖ್ಯಾತಿಯನ್ನು ಹೊಂದಿರುವ ಓರ್ವ ಆರ್ಕೆಷ್ಟ್ರಾ ಕಲಾವಿದರನ್ನು ಆಹ್ವಾನಿಸಿ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಸುವಂತೆ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ … [Read more...] about ಕರಾವಳಿ ಉತ್ಸವ; ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ
ಕಾಜುಭಾಗದ ಶಾಲೆಯಲ್ಲಿ ಕನ್ನಡ ಕಲಿಕೆ
ಕಾರವಾರ: ಕಾಜುಭಾಗದ ಸರ್ಕಾರಿ ಶಾಲೆಯೊಂದು ಪ್ರತಿ ವರ್ಷವೂ ಪರರಾಜ್ಯದ ಮಕ್ಕಳಿಗೆ ಕನ್ನಡ ಕಲಿಸುತ್ತದೆ. ಶಿಕ್ಷಕರ ಕಾಳಜಿಯಿಂದಾಗಿ ಬೇರೆ ಬೇರೆ ರಾಜ್ಯದ ಹಲವು ಮಕ್ಕಳು ಈ ಶಾಲೆಗೆ ದಾಖಲಾಗುತ್ತಿದ್ದಾರೆ. ಕಳೆದ ವರ್ಷ 14 ಮಕ್ಕಳು ಕನ್ನಡ ಕಲಿತಿದ್ದಾರೆ. ಶಾಲೆಯ ಮೆಟ್ಟಿಲೇರಿರುವ ಈ ಮಕ್ಕಳು ಮುದ್ದು ಮುದ್ದಾಗಿ ಕನ್ನಡ ಪದ ಬರೆಯುತ್ತಾರೆ. ಕನ್ನಡ ಪತ್ರಿಕೆಗಳನ್ನು ಇವರು ಸರಾಗವಾಗಿ ಓದುತ್ತಾರೆ. ಕನ್ನಡ ಸಿನಿಮಾಗಳೆಂದರೆ ತಪ್ಪದೇ ನೋಡುತ್ತಾರೆ. ಕುವೆಂಪುರವರ ಪದ್ಯಗಳಿಗೆ ರಾಗ … [Read more...] about ಕಾಜುಭಾಗದ ಶಾಲೆಯಲ್ಲಿ ಕನ್ನಡ ಕಲಿಕೆ
ಮೊದಲ ಬಾರಿಗೆ ಪಕ್ಷಿತಜ್ಞರ ನೆರವಿನಲ್ಲಿ ಚಿಟ್ಟೆ ಸಮೀಕ್ಷೆ
ಕಾರವಾರ:ಭಾರತೀಯ ಅಣುಶಕ್ತಿ ನಿಗಮದ ಪರಿಸರ ಉಸ್ತುವಾರಿ ಕಾರ್ಯಕ್ರಮದ ಅಡಿಯಲ್ಲಿ ಕೈಗಾ ವಿದ್ಯುತ್ ಕೇಂದ್ರವು ಕಳೆದ ಏಳು ವರ್ಷಗಳಿಂದ ಬರ್ಡ ಮ್ಯಾರಥಾನ್ ಆಯೋಜಿಸುತ್ತ ಬಂದಿದ್ದು, ಇದೇ ಮೊದಲ ಬಾರಿಗೆ ಪಕ್ಷಿತಜ್ಞರ ನೆರವಿನಲ್ಲಿ ಚಿಟ್ಟೆ ಸಮೀಕ್ಷೆಯನ್ನು ನಡೆಸಲಾಗಿದೆ. ಸ್ಥಳೀಯ ಜೈವ ವಿವಿದ್ಯತೆಯತ್ತ ಬೆಳಕು ಚೆಲ್ಲಲು ಈ ಕಾರ್ಯಕ್ರಮ ಆಯೋಜಿಸಿದ್ದು, ಕೈಗಾ ಮತ್ತು ಮಲ್ಲಾಪುರ ಗ್ರಾಮಗಳ ನಡುವಿನ ಐದು ವಿಭಾಗಗಳಲ್ಲಿ ನಡೆಸಲಾದ ಈ ಸಮೀಕ್ಷೆಯಲ್ಲಿ 70 ಪ್ರಬೇಧದ ಚಿಟ್ಟೆಗಳನ್ನು … [Read more...] about ಮೊದಲ ಬಾರಿಗೆ ಪಕ್ಷಿತಜ್ಞರ ನೆರವಿನಲ್ಲಿ ಚಿಟ್ಟೆ ಸಮೀಕ್ಷೆ
ಐದಾರು ದಿನಗಳಿಂದ ಗಾಳಿ ಮಳೆ
ಕಾರವಾರ:ಕರಾವಳಿಯಲ್ಲಿ ಮಳೆ ರಭಸಗೊಂಡಿದೆ. ಐದಾರು ದಿನಗಳಿಂದ ಗಾಳಿ ಮಳೆ ಜೋರಾಗಿದೆ. ಇದರಿಂದ ಹೊರ ರಾಜ್ಯಗಳಿಂದ ಮೀನುಗಾರಿಕೆಗೆ ತೆರಳಿದ್ದ ನೂರಾರು ಬೋಟ್ಗಳು ಮುಂದೆ ಸಾಗಲಾಗದೆ ಬೈತಖೋಲ ಬಂದರಿನಲ್ಲಿ ಲಂಗರು ಹಾಕಿದೆ. ದಕ್ಷಿಣ ಗುಜರಾತ್ ಭಾಗ ಹಾಗೂ ಬಂಗಾಳ ಕೊಲ್ಲಿಗಳಲ್ಲಿ ಉಂಟಾಗಿರುವ ಅಧಿಕ ವಾಯುಭಾರ ಕುಸಿತದಿಂದಾಗಿ ಮಧ್ಯ ಮಹಾರಾಷ್ಟ್ರ, ಗೋವಾ, ಕರ್ನಾಟಕದ ಕರಾವಳಿ ಭಾಗ, ಕೇರಳಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ … [Read more...] about ಐದಾರು ದಿನಗಳಿಂದ ಗಾಳಿ ಮಳೆ