ಹಳಿಯಾಳ: ನಾಡಿನಲ್ಲಿ ಹೆಚ್ಚುತ್ತಿರುವ ದ್ವೇಷದ ಮನೋಭವನ್ನು ಅಳಿಸಲು, ಸಮಾಜದಲ್ಲಿ ಏರ್ಪಾಡುತ್ತಿರುವ ಕಂದಕವನ್ನು ಹೋಗಲಾಡಿಸಲು ಸಾಂಸ್ಕøತಿಕ ಕಾರ್ಯಕ್ರಮಗಳು ಸಹಾಯಕವಾಗಿವೆ ಎಂದು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಮ್.ಮೋಹನ್ ಆಳ್ವ ಅಭಿಪ್ರಾಯಪಟ್ಟರು. ಹಳಿಯಾಳದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆ ಹಾಗೂ ಆಳ್ವಾಸ್ ನುಡಿಸಿರಿ ವಿರಾಸತ್ ಘಟಕ ಹಳಿಯಾಳ-2017ರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಶ್ರೀ ಛತ್ರಪತಿ ಶಿವಾಜಿ ಕಾಲೇಜು ಮೈದಾನದಲ್ಲಿ ನಡೆದ “ಆಳ್ವಾಸ್ ಸಾಂಸ್ಕøತಿಕ ವೈಭವ- ನುಡಿಸಿರಿ” ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು. ಈ ಭಾಗದಲ್ಲಿನ ಕನ್ನಡ ಮಾಧ್ಯಮ ಶಾಲೆಯ ಬಲಪಡಿಸುವಿಕೆಯಲ್ಲಿ ತಾವು ಸದಾ ಶ್ರಮಿಸುವುದಾಗಿ ತಿಳಿಸಿದ ಅವರು ಆಳ್ವಾಸ್ ಸಾಂಸ್ಕøತಿಕ ವೈಭವದ ಮೂಲಕ ಜಿಲ್ಲೆ ಜಿಲ್ಲೆಗಳೊಡಗಿನ ಸಾಂಸ್ಕøತಿಕ ಕೊಡುಕೊಳ್ಳುವಿಕೆಯ ಸತ್ ಸಂಪ್ರದಾಯ ಬೆಳೆದು, ನಿಕಟ ಸಂಬಂಧಗಳನ್ನು ಗಟ್ಟಿಗೊಳಸಲು, ಸಮಾನ ಮನಸ್ಕರನ್ನು, ಸಜ್ಜನರನ್ನು ಒಟ್ಟುಗೂಡಿಸಲು ಸಾಧ್ಯ ವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿ.ಆರ್.ಡಿಎಮ್ ಟ್ರಸ್ಟ್ನ ಅಧ್ಯಕ್ಷ ಹಾಗೂ ಸಚಿವ ಆರ್.ವಿ.ದೇಶಪಾಂಡೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಶಿಕ್ಷಣ, ಕಲೆ, ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾದನೆ ಅಪಾರ ಹಾಗೂ ಈ ನಾಡಿನ ಜನ ಹೆಮ್ಮೆಪಡುವಂತದ್ದು ಎಂದು ಶ್ಲಾಘಿಸಿದರು. ನಾವೆಲ್ಲ ಒಂದೇ ಮನೆಯ ಸದಸ್ಯರೆಂದು ಭಾವಿಸಿದಾಗ ದೇಶದಲ್ಲಿ ಪ್ರಗತಿ ಸಾದ್ಯ. ಸಾಮಾಜಿಕ ನ್ಯಾಯದಲ್ಲಿ ಪ್ರಜಾಪ್ರಭುತ್ವ ಉನ್ನತಿ ಸಾದಿಸಲು ಸಾದ್ಯ. ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕೆ ಹೋರತು, ಬೆಂಕಿ ಹಚ್ಚುವುದರಿಂದಲ್ಲ, ಗೋಲಿಬಾರ್ ನಡೆಸುವುದರಿಂದಲ್ಲ. ನಾಡಿನ ಪ್ರತಿಯೊಬ್ಬರ ಮುಖದಲ್ಲೂ ಸದಾ ನಗುವಿರಬೇಕು, ಸಂತೋಷವಿರಬೇಕು, ನೆಮ್ಮದಿ ಜೀವನ ನಡೆಸುತ್ತಿರಬೇಕು. ಕರ್ನಾಟಕ ಸರ್ಕಾರ ಕನ್ನಡ ಭಾಷೆಯನ್ನು ಬಲಪಡಿಸುವಲ್ಲಿ ಸದಾ ಕಾರ್ಯ ಪ್ರವೃತ್ತವಾಗಿದೆ ಎಂದರು. ಇದೆ ಸಂಧರ್ಭದಲ್ಲಿ ವಿ ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ನ ವತಿಯಿಂದ ಡಾ ಮೋಹನ್ ಆಳ್ವರನ್ನು ಸನ್ಮಾನಿಸಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 320ಕ್ಕೂ ಅಧಿಕ ವಿದ್ಯಾರ್ಥಿಗಳು ಇ ನೆಲದ ವೈವಿಧ್ಯಮಯ ಕಲಾಪ್ರಕಾರಗಳಾದ ಕೇರಳದ ಶಾಸ್ತ್ರೀಯ ನೃತ್ಯ ಮೋಹಿನಿಯಾಟ್ಟಂ- ಗಣೇಶ ಸ್ತುತಿ, ಬಡಗುತಿಟ್ಟು ಯಕ್ಷ ಪ್ರಯೋಗ- ಶ್ರೀರಾಮ ಪಟ್ಟಾಭಿಷೇಕ, ಒರಿಸ್ಸಾದ ಜನಪದ ನೃತ್ಯ- ಗೋಟಿಪುವ, ಆಂಧ್ರದ ಬೆಡಗಿನ ಬಂಜಾರ, ಶ್ರೀಲಂಕಾದ ಕ್ಯಾಂಡಿಯನ್ ಸಮೂಹ ನೃತ್ಯ, ಮಣಿಪುರದ ಸ್ಟಿಕ್ ಡ್ಯಾನ್ಸ್ ಮತ್ತು ದೋಲ್ ಚಲೋಮ್, ಭರತನಾಟ್ಯ- ಭೋ ಶಂಭೋ, ಸಾಹಸಮಯ ಮಲ್ಲಕಂಬ, ಗುಜರಾತಿನ ದಾಂಡಿಯಾ ನೃತ್ಯ, ಪಶ್ಚಿಮ ಬಂಗಾಳದ ಪುರಲಿಯೋ, ಕಥಾಕ್ – ಪ್ರಹಾರ್, ಮಹಾರಾಷ್ಟ್ರದ ಲಾವಣಿ ನೃತ್ಯ, ತೆಂಕುತಿಟ್ಟಿನ ಯಕ್ಷಗಾನ –ಅಗ್ರಪೂಜೆ,ಶ್ರೀಲಂಕಾದ ಜನಪದ ನೃತ್ಯ, ವಂದೇ ಮಾತರಂನ್ನು ಪ್ರಸ್ತುತ ಪಡಿಸಿದರು. 15ಸಾವಿರಕ್ಕೂ ಅಧಿಕ ಜನ ಇದೆ ಪ್ರಥಮ ಬಾರಿಗೆ ಹಳಿಯಾಳದಲ್ಲಿ ನಡೆದ ಈ ವಿನೂತನ ಕಾರ್ಯಕ್ರಮದ ಮನರಂಜನೆ ಪಡೆದು ಕಾರ್ಯಕ್ರಮವನ್ನು ಶ್ಲಾಘಿಸುತ್ತಿರುವುದು ಕಂಡು ಬಂತು. ಕಾರ್ಯಕ್ರಮದಲ್ಲಿ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ನ ಟ್ರಸ್ಟಿ ರಾಧಾಬಾಯಿ ದೇಶಪಾಂಡೆ, ರುಡಸೆಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ ಸೇರಿದಂತೆ ಮೊದಲಾದ ಗಣ್ಯರು ಇದ್ದರು.
Leave a Comment