ಕಾರವಾರ: ಅಂಕೋಲಾದ ಪಿ.ಎಂ. ಪ್ರೌಢಶಾಲೆಯ ರೈತ ಭವನದಲ್ಲಿ ಈಚೆಗೆ ಕೆನರಾ ವೆಲ್ಫೇರ್ ಟ್ರಸ್ಟ್ ನಡೆಸುತ್ತಿರುವ ದಿನಕರ ಕಲಾನಿಕೇತನ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಾಹಿತಿ ವಿಷ್ಣು ನಾಯ್ಕ, ಜನ ಜೀವನದ ಸೊಬಗು ಇರುವುದು ಸಂಗೀತದಲ್ಲಿ. ಸಂಗೀತದಲ್ಲಿನ ಸಾಹಿತ್ಯ ಜೀವನಕ್ಕೆ ಸ್ಪೂರ್ತಿ ನೀಡುತ್ತದೆ ಎಂದರು.
ಕೆನರಾ ವೆಲ್ಫೇರ್ ಟ್ರಸ್ಟ್ನ ಆಡಳಿತಾಧಿಕಾರಿ ಕೃಷ್ಣಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಂಕೋಲಾ ಹಾಗೂ ಕಾರವಾರ ಶಾಲೆಯ ವಿದ್ಯಾರ್ಥಿಗಳಿಂದ ಗಾಯನ ವಾದನ ಕಾರ್ಯಕ್ರಮ ನಡೆಯಿತು. ಸಂವಾದಿನಿಯಲ್ಲಿ ಸಂಗೀತ ಶಿಕ್ಷಕ ಮಾರುತಿ ನಾಯ್ಕ, ವಿದ್ಯಾರ್ಥಿನಿ ಅದಿತಿ ಭಟ್, ತಬಲಾದಲ್ಲಿ ಶಿಕ್ಷಕ ಗಣಪತಿ ಹೆಗಡೆ, ವಿದ್ಯಾರ್ಥಿ ಗುರುರಾಜ್ ತೋಡುರಕರ, ಅಭಿಲಾಷ ನಾಯ್ಕ ಸಾಥ್ ನೀಡಿದರು. ಅಶ್ವಿನ್, ಅನಿಕೇತ ಪ್ರಾರ್ಥನೆ ಹಾಡಿದರು. ಸ್ವಾತಿ ರಾಯ್ಕರ ಸ್ವಾಗತಿಸಿದರು. ಪ್ರೌಢಶಾಲಾ ಶಿಕ್ಷಕ ಸಂತೋಷ ಶೇಟ್ ವಂದಿಸಿದರು. ಅನಿತಾ ಶೆಟ್ಟಿ ನಿರೂಪಿಸಿದರು.
Leave a Comment