• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ರೈತರ ಸಮಸ್ಯೆ ಬಗೆಹರಿಸದೆ ಇದ್ದರೇ ಜಿಲ್ಲಾದ್ಯಂತ ಊಗ್ರ ಹೋರಾಟ

December 23, 2017 by Yogaraj SK Leave a Comment

ಹಳಿಯಾಳ: ಅರಣ್ಯ ಅತಿಕ್ರಮಣ ಸಕ್ರಮ ಕುರಿತು ರೈತರು ಎಲ್ಲ ಸೂಕ್ತ ದಾಖಲೆಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದರು ಸಹ ಹಲವಾರು ಕಾರಣಗಳನ್ನು ನೀಡಿ ದಾಖಲೆಗಳನ್ನು ವಾಪಸ್ಸು ಕಳಿಸಲಾಗುತ್ತಿದ್ದು, ರೈತ ಹಿತಾಸಕ್ತಿ ಜಿಲ್ಲಾಧಿಕಾರಿಗಳಿಗೆ ಇದ್ದಂತೆ ಕಾಣುತ್ತಿಲ್ಲ 2018ರ ಜನೆವರಿ ತಿಂಗಳ ಕೊನೆಯೊಳಗೆ ರೈತರ ಈ ಸಮಸ್ಯೆ ಬಗೆಹರಿಸದೆ ಇದ್ದರೇ ರೈತರೊಂದಿಗೆ ಬೀದಿಗಿಳಿದು ಗ್ರಾಮಾಂತರ ಭಾಗದಿಂದ ಜಿಲ್ಲಾದ್ಯಂತ ಊಗ್ರ ಹೋರಾಟ ನಡೆಸಲಾಗುವುದೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.  ಪಟ್ಟಣದ ತಮ್ಮ ಕಾರ್ಯಾಲಯದಲ್ಲಿ ಶುಕ್ರವಾರ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೇಸ್ ಸರ್ಕಾರ ಅತಿಕ್ರಮಣ ಭೂಮಿ ಸಕ್ರಮ ಮಾಡುವ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಿದಂತೆ ಸಚಿವ ದೇಶಪಾಂಡೆ ಹಾಗೂ ಮುಖ್ಯಮಂತ್ರಿ ಅವರ ಕಾರ್ಯದಿಂದ ರೈತರ ಭೂಮಿಗಳನ್ನು ಜಿಪಿಎಸ್ ಮಾಡಿಸಿ ಸಾವಿರಾರು ರೈತರಿಗೆ ಈಗಾಗಲೇ ಕಂದಾಯ ಭೂಮಿ ಸಮಸ್ಯೆ ಪರಿಹರಿಸಿ ಪಟ್ಟಾವನ್ನು ವಿತರಿಸಲಾಗಿದೆ. ಅರಣ್ಯ ಇಲಾಖೆಯಿಂದ ಈಗಾಗಲೇ ರೈತರ ಅತಿಕ್ರಮಣ ಭೂಮಿ ಜಿಪಿಎಸ್ ಮಾಡಿ ಎಲ್ಲ ದಾಖಲಾತಿಗಳನ್ನು ರೈತರಿಂದ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದ ಅವರು  ರೈತರಿಗೆ ಭೂಮಿ ಸಕ್ರಮಗೊಂಡು ಪಟ್ಟಾ ದೊರೆಯದೆ ಇದ್ದರೇ ಅವರಿಗೆ ಬ್ಯಾಂಕ್‍ಗಳಲ್ಲಿ ಸಾಲ ದೊರೆಯುವುದಿಲ್ಲ ಅಲ್ಲದೇ ಮೊದಲೆ ಸಂಕಷ್ಟದಲ್ಲಿರುವ ರೈತ ಇನ್ನೂ ಹೆಚ್ಚಿನ ಸಮಸ್ಯೆ ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.  ಎಲ್ಲ ದಾಖಲಾತಿಗಳನ್ನು ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದರೂ ಸಹಿತ ಈವರೆಗೆ ಜಿಲ್ಲಾಧಿಕಾರಿಗಳಿಂದ ಸ್ಪಂದನೆ ದೊರೆಯುತ್ತಿಲ್ಲ ಅತಿಕ್ರಮಣ ಸಮಸ್ಯೆ ಬಗೆಹರಿಸುವ ಮನಸ್ಸು ಜಿಲ್ಲಾಡಳಿತಕ್ಕೆ ಇಲ್ಲವೆಂಬ ಸಂಶಯ ಮೂಡುತ್ತಿದೆ ಎಂದ ಘೋಟ್ನೇಕರ ಜಿಲ್ಲಾದ್ಯಂತ 96ಸಾವಿರಕ್ಕೂ ಹೆಚ್ಚು ಅರ್ಜಿಗಳು ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿವೆ ತಾವು ರೈತಪರ ಹೊರಾಟಗಾರರು ರೈತರ ಸಮಸ್ಯೆ ಬಗೆಹರಿಸಲು ಕೂಡಲೇ ಚಾಲನೆ ನೀಡಬೇಕು ಹಾಗೂ ನೀಡಿದ ಗಡುವಿನ ಒಳಗೆ  ಸಮಸ್ಯೆ ಬಗೆಹರಿಯದೆ ಇದ್ದರೇ ಯಾರ ವಿರುದ್ದವು ಹೋರಾಟ ಮಾಡಲು ಹಿಂದೆಟು ಹಾಕುವುದಿಲ್ಲ ಗ್ರಾಮಾಂತರ, ಗ್ರಾಪಂ ಮಟ್ಟದಿಂದ ಪ್ರತಿ ತಾಲೂಕಿನಲ್ಲಿ ಹೋರಾಟ ನಡೆಸಲಾಗುವುದು ಎಂದು ಪುನಃ ಎಚ್ಚರಿಕೆ ನೀಡಿದರು.  ಹಿಂದೂ ಧರ್ಮ ಕೆನರಾ ಸಂಸದ ಅನಂತಕುಮಾರ ಹೆಗಡೆ ಸ್ವತ್ತಲ್ಲ ಎಂದು ಅನಂತಕುಮಾರ ಹೆಗಡೆ ವಿರುದ್ದ ಹರಿಹಾಯ್ದ ಘೊಟ್ನೇಕರ ನಾವು ಕೂಡ ಹಿಂದೂಗಳೇ  ಧರ್ಮದ ಹೆಸರಿನಲ್ಲಿ ಶಾಂತಿ ಕದಡುವ ಕೆಲಸ ಯಾರು ಮಾಡಬಾರದು ಎಂಬುದನ್ನು ಸಂಸದರು ಅರಿತುಕೊಳ್ಳಬೇಕು ಅಭಿವೃದ್ದಿ ಕೆಲಸ ಮಾಡದ ಹೆಗಡೆ ಕೇಂದ್ರ ಸರ್ಕಾರ ಸಹಕಾರಿ ಸಂಘ, ಬ್ಯಾಂಕ್‍ಗಳಿಗೆ ಆದಾಯ ತೆರಿಗೆ ವಿಧಿಸುತ್ತಿದ್ದು ರೈತರ ಮೇಲೆ ಕಾಳಜಿ ಇದ್ದರೇ ಕೂಡಲೇ ಸೋಸೈಟಿಗಳನ್ನು ಆದಾಯ ತೆರಿಗೆಯಿಂದ ವಿಮುಕ್ತಗೊಳಿಸುವಂತೆ ಮಾಡಲಿ ಎಂದು ಸವಾಲ್ ಹಾಕಿದರು.  ಇನ್ನೂ ಪರೇಶ್ ಮೆಸ್ತಾ ಪ್ರಕರಣದಲ್ಲಿ ರಾಜಕೀಯ ಲಾಭ ಪಡೆಯಲು ಜನರಿಗೆ ಪ್ರಚೋದನೆ ನೀಡಿ ಕಳಿಸಿ ತಾವು ಸುರಕ್ಷಿತವಾಗಿ ಉಳಿದ ಶಾಕಸ ಕಾಗೇರಿ, ಸಂಸದ ಅನಂತಕುಮಾರ ಹೆಗಡೆ ಅವರೇ ಪ್ರಕರಣಗಳನ್ನು ಎದುರಿಸುತ್ತಿರುವ ಅಮಾಯಕರು ನಿರಂತರ ನ್ಯಾಯಾಲಯಕ್ಕೆ ಸುತ್ತಾಡಬೇಕು ಇದಕ್ಕೆ ಸಾಕಷ್ಟು ಹಣ ವ್ಯಯಿಸಬೇಕು ಆ ಜನರ ಗತಿ ಏನು ಎಂದು ಪ್ರಶ್ನೀಸಿ ಯಾರು ಇಂತಹ ಗಲಾಟೆಗಳಲ್ಲಿ ಭಾಗವಹಿಸದಂತೆ ಮನವಿ ಮಾಡಿದರು.  ಹಳಿಯಾಳ ಸಕ್ಕರೆ ಕಾರ್ಖಾನೆಯವರು ಕಳೆದ ವರ್ಷದ ಬಾಕಿ ಹಣ 305ನ್ನು ತಕ್ಷಣ ರೈತರಿಗೆ ಬಿಡುಗಡೆ ಮಾಡಬೇಕು ಹಾಗೂ ಪ್ರಸ್ತುತ ದರ ನಿಗದಿ ಮಾಡಿ ರೈತರೊಂದಿಗೆ ಸಹಕರಿಸುವಂತೆ ಆಗ್ರಹಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News Tagged With: ಅತಿಕ್ರಮಣ ಸಕ್ರಮ, ಅನಂತಕುಮಾರ ಹೆಗಡೆ, ಅರಣ್ಯ, ಇದ್ದರೇ, ಈಗಾಗಲೇ, ಎಸ್.ಎಲ್.ಘೋಟ್ನೇಕರ, ಕಂದಾಯ ಭೂಮಿ, ಕೆನರಾ ಸಂಸದ, ಜಿಲ್ಲಾದ್ಯಂತ ಊಗ್ರ ಹೋರಾಟ, ಬಗೆಹರಿಸದೆ, ರೈತರ ಸಮಸ್ಯೆ, ಸಮಸ್ಯೆ, ಸಾವಿರಾರು ರೈತರಿಗೆ, ಸ್ವತ್ತಲ್ಲ, ಹಿಂದೂ ಧರ್ಮ, ಹಿಂದೆಟು

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar