• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನದ ನಿಮಿತ್ತ;ರೋಗಿಗಳಿಗೆ ಹಣ್ಣುಹಂಪಲು ವಿತರಣೆ

December 26, 2017 by Gaju Gokarna Leave a Comment

ಹೊನ್ನಾವರ: ಭಾರತೀಯ ಜನತಾಪಕ್ಷದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನದ ನಿಮಿತ್ತ ತಾಲೂಕ ಸರ್ಕಾರಿ ಆಸ್ಪತ್ರೆಗೆ ತಾಲೂಕ ಬಿಜೆಪಿ ಕಾರ್ಯಕರ್ತರು ತೆರಳಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಎಂ.ಜಿ. ನಾಯ್ಕ ಮಾತನಾಡಿ ವಾಜಪೇಯಿಯವರು ದೇಶದ ಪ್ರಧಾನಿಯಾಗಿದ್ದಾಗ 1999ರಲ್ಲಿ ಭಾರತ-ಪಾಕಿಸ್ತಾನ ಯುದ್ದದ ಸಮಯದಲ್ಲಿ ತಮ್ಮ ಜೀವದ ಹಂಗನ್ನು ಲೆಕ್ಕಿಸದೆ ರಣಾಂಗಣಕ್ಕೆ ತೆರಳಿ ದೇಶದ ಸೈನಿಕರಿಗೆ ಆತ್ಮಸೈರ್ಯ ತುಂಬಿ ಶೇಷ್ಠ ನಾಯಕ ಎನಿಸಿಕೊಂಡರು ಎಂದರು.
ಜಿ.ಪಂ.ಸದಸ್ಯೆ ಶ್ರೀಕಲಾ ಶಾಸ್ತ್ರಿ ಮಾತನಾಡಿ ವಾಜಪೇಯಿಯವರು ದೇಶ ಕಂಡ ಅಪ್ರತಿಮ ಪ್ರಧಾನಿ. ದೇಶದ ಭವಿಷ್ಯತ್ತಿಗೆ ಉತ್ತಮ ಆಡಳಿತ ನೀಡಿ ವಿಶ್ವದಲ್ಲೆ ಮಾದರಿ ದೇಶವನ್ನಾಗಿ ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತದಲ್ಲಿ ಚತುಷ್ಪತ ರಸ್ತೆ ಕಾಮಗಾರಿ ಪ್ರಾರಂಭಿಸಿದ್ದು ಇದು ಅವರ ಕನಸಿನ ಕೂಸಾಗಿತ್ತು. ಅವರ ಕನಸಿನ ಫಲವನ್ನು ನಾವು ಅನುಭವಿಸುತ್ತಿದ್ದೇವೆ. ಭಾರತದ ಬಗ್ಗೆ ಅವರು ವಿಶಾಲ ಕಲ್ಪನೆಯನ್ನು ಹೊಂದಿದ್ದರು. ಭಾರತದ ಪ್ರತಿ ಮಣ್ಣಿನ ಕಣದಲ್ಲಿ ಜೀವಂತಿಕೆ ಇದೆ. ಪ್ರತಿ ಕಲ್ಲಿನ ಕಣದಲ್ಲೂ ಶಂಕರನಿದ್ದಾನೆ ಎಂದು ದೇಶವನ್ನು ಆರಾದಿಸಿದ ಮಹಾಪುರುಷರಿವರು. ಭಾರತವು ಭೂಮಿಯ ಒಂದು ತುಂಡಲ್ಲ. ” ಜೀತಾ ಜಾಥಾ ರಾಷ್ಟ್ರಪುರುಷ “ಭಾರತ ಒಂದು ಜೀವಂತ ರಾಷ್ಟ್ರ ಎಂಬ ಪರಿಕಲ್ಪನೆ ಹೊಂದಿದ್ದು, ಅವರ ಕನಸು ಇಂದಿನ ಪ್ರಧಾನಿ ನರೆಂದ್ರ ಮೋದಿಜಿಯವರು ನನಸು ಮಾಡುತ್ತಿದ್ದಾರೆ ಎಂದರು.
ಬಿಜೆಪಿ ಮುಖಂಡರಾದ ಲೋಕೇಶ ಮೇಸ್ತ, ಶಿವರಾಜ ಮೇಸ್ತ, ಉಲ್ಲಾಸ ಶ್ಯಾನಭಾಗ, ಮಂಜುನಾಥ ನಾಯ್ಕ, ಕಮಲಾ ನಾಯ್ಕ, ದೀಪಕ್ ಶೇಟ್, ಸುಬ್ರಹ್ಮಣ್ಯ ಶಾಸ್ತ್ರಿ, ವೆಂಕ್ರಟಮಣ ಹೆಗಡೆ, ಟಿ.ಎಸ.ಹೆಗಡೆ, ಸಾಧನಾ ನಾಯ್ಕ, ಗಣೇಶ ಪೈ, ಗಣಪತಿ ನಾಯ್ಕ, ರೋಶನ ಶ್ಯಾನಭಾಗ, ಎಮ್.ಎಸ್.ಹೆಗಡೆ, ಜಿ.ಕೆ.ಶೇಟ್, ನಾರಾಯಣ ಹೆಗಡೆ ಇತರರು ಉಪಸ್ದಿತರಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News Tagged With: ಅಟಲ್ ಬಿಹಾರಿ ವಾಜಪೇಯಿ, ಗಣಪತಿ, ಗಣೇಶ ಪೈ, ಜನ್ಮದಿನದ ನಿಮಿತ್ತ, ಜಿಲ್ಲಾಧ್ಯಕ್ಷ, ಜೀವಂತ ರಾಷ್ಟ್ರ, ಟಿ.ಎಸ.ಹೆಗಡೆ, ನಿಕಟಪೂರ್ವ, ಭಾರತ ಒಂದು, ಮಾಜಿ ಪ್ರಧಾನಿ, ರಣಾಂಗಣ, ರೋಗಿಗಳಿಗೆ ಹಣ್ಣುಹಂಪಲು ವಿತರಣೆ, ವೆಂಕ್ರಟಮಣ ಹೆಗಡೆ., ಸಂದರ್ಭ, ಸಾಧನಾ ನಾಯ್ಕ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar