ಹೊನ್ನಾವರ: ಭಾರತೀಯ ಜನತಾಪಕ್ಷದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನದ ನಿಮಿತ್ತ ತಾಲೂಕ ಸರ್ಕಾರಿ ಆಸ್ಪತ್ರೆಗೆ ತಾಲೂಕ ಬಿಜೆಪಿ ಕಾರ್ಯಕರ್ತರು ತೆರಳಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಎಂ.ಜಿ. ನಾಯ್ಕ ಮಾತನಾಡಿ ವಾಜಪೇಯಿಯವರು ದೇಶದ ಪ್ರಧಾನಿಯಾಗಿದ್ದಾಗ 1999ರಲ್ಲಿ ಭಾರತ-ಪಾಕಿಸ್ತಾನ ಯುದ್ದದ ಸಮಯದಲ್ಲಿ ತಮ್ಮ ಜೀವದ ಹಂಗನ್ನು ಲೆಕ್ಕಿಸದೆ ರಣಾಂಗಣಕ್ಕೆ ತೆರಳಿ ದೇಶದ ಸೈನಿಕರಿಗೆ ಆತ್ಮಸೈರ್ಯ ತುಂಬಿ ಶೇಷ್ಠ ನಾಯಕ ಎನಿಸಿಕೊಂಡರು ಎಂದರು.
ಜಿ.ಪಂ.ಸದಸ್ಯೆ ಶ್ರೀಕಲಾ ಶಾಸ್ತ್ರಿ ಮಾತನಾಡಿ ವಾಜಪೇಯಿಯವರು ದೇಶ ಕಂಡ ಅಪ್ರತಿಮ ಪ್ರಧಾನಿ. ದೇಶದ ಭವಿಷ್ಯತ್ತಿಗೆ ಉತ್ತಮ ಆಡಳಿತ ನೀಡಿ ವಿಶ್ವದಲ್ಲೆ ಮಾದರಿ ದೇಶವನ್ನಾಗಿ ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತದಲ್ಲಿ ಚತುಷ್ಪತ ರಸ್ತೆ ಕಾಮಗಾರಿ ಪ್ರಾರಂಭಿಸಿದ್ದು ಇದು ಅವರ ಕನಸಿನ ಕೂಸಾಗಿತ್ತು. ಅವರ ಕನಸಿನ ಫಲವನ್ನು ನಾವು ಅನುಭವಿಸುತ್ತಿದ್ದೇವೆ. ಭಾರತದ ಬಗ್ಗೆ ಅವರು ವಿಶಾಲ ಕಲ್ಪನೆಯನ್ನು ಹೊಂದಿದ್ದರು. ಭಾರತದ ಪ್ರತಿ ಮಣ್ಣಿನ ಕಣದಲ್ಲಿ ಜೀವಂತಿಕೆ ಇದೆ. ಪ್ರತಿ ಕಲ್ಲಿನ ಕಣದಲ್ಲೂ ಶಂಕರನಿದ್ದಾನೆ ಎಂದು ದೇಶವನ್ನು ಆರಾದಿಸಿದ ಮಹಾಪುರುಷರಿವರು. ಭಾರತವು ಭೂಮಿಯ ಒಂದು ತುಂಡಲ್ಲ. ” ಜೀತಾ ಜಾಥಾ ರಾಷ್ಟ್ರಪುರುಷ “ಭಾರತ ಒಂದು ಜೀವಂತ ರಾಷ್ಟ್ರ ಎಂಬ ಪರಿಕಲ್ಪನೆ ಹೊಂದಿದ್ದು, ಅವರ ಕನಸು ಇಂದಿನ ಪ್ರಧಾನಿ ನರೆಂದ್ರ ಮೋದಿಜಿಯವರು ನನಸು ಮಾಡುತ್ತಿದ್ದಾರೆ ಎಂದರು.
ಬಿಜೆಪಿ ಮುಖಂಡರಾದ ಲೋಕೇಶ ಮೇಸ್ತ, ಶಿವರಾಜ ಮೇಸ್ತ, ಉಲ್ಲಾಸ ಶ್ಯಾನಭಾಗ, ಮಂಜುನಾಥ ನಾಯ್ಕ, ಕಮಲಾ ನಾಯ್ಕ, ದೀಪಕ್ ಶೇಟ್, ಸುಬ್ರಹ್ಮಣ್ಯ ಶಾಸ್ತ್ರಿ, ವೆಂಕ್ರಟಮಣ ಹೆಗಡೆ, ಟಿ.ಎಸ.ಹೆಗಡೆ, ಸಾಧನಾ ನಾಯ್ಕ, ಗಣೇಶ ಪೈ, ಗಣಪತಿ ನಾಯ್ಕ, ರೋಶನ ಶ್ಯಾನಭಾಗ, ಎಮ್.ಎಸ್.ಹೆಗಡೆ, ಜಿ.ಕೆ.ಶೇಟ್, ನಾರಾಯಣ ಹೆಗಡೆ ಇತರರು ಉಪಸ್ದಿತರಿದ್ದರು.
Leave a Comment