ಹೊನ್ನಾವರ ತಾಲೂಕಿನ ಸ.ಹಿ.ಪ್ರಾ.ಶಾಲೆ ಇಳಿಕಾರದ ಶಿಕ್ಷಕರಾದ ಕೆ.ಜಿ.ಗೌಡ ಇವರು 23, 24 ಡಿಸೆಂಬರ 2017 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನಡೆದ 38ನೇ ರಾಜ್ಯ ಮಟ್ಟದ ‘ಮಾಸ್ಟರ್ ಅಥ್ಲೇಟಿಕ್ ಮಿm’ï 2017-18 ರಲ್ಲಿ ಭಾಗವಹಿಸಿ ಸತತ 2ನೇ ಬಾರಿಗೆ “ಗುಂಡು ಎಸೆತ” ಚಕ್ರ ಎಸೆತಗಳಲ್ಲಿ 45 ವರ್ಷ ವಯೋಗುಂಪಿನಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ವಿಜೇತರಾಗಿ ಫೆಬ್ರುವರಿ ಬೆಂಗಳೂರಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರಿಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ಇವರು ಶಿಕ್ಷಣ ಇಲಾಖೆ ತಾಲೂಕು ಹಾಗೂ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ. ಇವರ ಸಾಧನೆಗೆ ಹೊನ್ನಾವರ ತಾಲೂಕು ಸರಕಾರಿ ನೌಕರರ ಸಂಘ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿ ರವರು ಅಭಿನಂದಿಸಿದ್ದಾರೆ.
Leave a Comment