ಹೊನ್ನಾವರ: ನೆರೆಯ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡು ವ್ಯಾಪಕವಾಗಿರುವ ಹಿನ್ನಲೆಯಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲೂ ವ್ಯಾಪಿಸುವ ಭೀತಿಯಲ್ಲಿ ಕಾಯಿಲೆ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಕೆಎಫ್ಡಿ ಘಟಕ ಸಿದ್ಧತೆ ನಡೆಸಿದೆ. ಎಂದು ಕೆಎಫ್ಡಿ ಘಟಕದ ಪ್ರಭಾರ ವೈದ್ಯಾಧಿಕಾರಿ ಡಾ. ಸತೀಶ ಶೇಟ್ ತಿಳಿಸಿದ್ದಾರೆ. ಕಳೆದ ವರ್ಷಗಳಲ್ಲಿ ಜಿಲ್ಲೆಯ ಹೊನ್ನಾವರ, ಭಟ್ಕಳ, ಸಿದ್ದಾಪುರ, ಜೋಯ್ಡಾ ತಾಲೂಕುಗಳಲ್ಲಿ ಮಂಗನಕಾಯಿಲೆ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿತ್ತು.1957ರಲ್ಲಿ ಶಿವಮೊಗ್ಗಾ ಜಿಲ್ಲೆಯ ಕ್ಯಾಸನೂರಿನಲ್ಲಿ ಈ ಕಾಯಿಲೆ ಜಗತ್ತಿನಲ್ಲಿ ಪ್ರಥಮ ಬಾರಿ ಕಾಣಿಸಿಕೊಂಡಿತ್ತು. ಶಿವಮೊಗ್ಗಾ ದಕ್ಷಿಣಕನ್ನಡ, ಉತ್ತರಕನ್ನಡಕ್ಕೂ ಈ ಕಾಯಿಲೆ ವ್ಯಾಪಿಸಿ ಪ್ರತಿವರ್ಷ ನೂರಾರು ಜನರನ್ನು ಬಲಿತೆಗೆದುಕೊಳ್ಳತೊಡಗಿತ್ತು. ಈ ವರ್ಷಪುನಃ ಶಿವಮೊಗ್ಗಾ ಜಿಲ್ಲೆಯಲ್ಲಿ ತ್ರೀವವಾಗಿ ಕಾಣಿಸಿಕೊಂಡಿರುವದು. ಜಿಲ್ಲಾ ಕೆಎಫ್ ಡಿ ಘಟಕ ಹೆಚ್ಚಿನ ಮುತುವರ್ಜಿವಹಿಸಲು ಕಾರಣವಾಗಿದೆ. ತಾಲೂಕಿನ ಖರ್ವಾ, ಸಂಶಿ, ಉಪ್ಪೋಣಿ ಭಾಗಗಳಲ್ಲಿ ಲಸಿಕೆ ನೀಡಲು ಆರಂಭಿಸಲಾಗಿದೆ. ಮಂಗನಕಾಯಿಲೆ ಬರುವ ಸಂಭವ ಇರುವ ನಾಲ್ಕು ತಾಲೂಕುಗಳ ಆರೋಗ್ಯ ಕೇಂದ್ರದಲ್ಲಿ 8 ಸಾವಿರ ಡೋಸ್ ಲಸಿಕೆಗಳನ್ನು ಕೊಡಲು ವ್ಯವಸ್ಥೆ ಮಾಡಲಾಗಿದೆ ಕಳೆದ ಹಲವು ವರ್ಷಗಳಿಂದ ಮಂಗನಕಾಯಿಲೆ ಬಂದ ಪ್ರದೇಶದ ಜನ ಕೂಡಲೇ ತಮ್ಮ ಹತ್ತಿರದ ಆರೋಗ್ಯಕೇಂದ್ರದಲ್ಲಿ ಲಸಿಕೆ ಪಡೆಯಬೇಕು. ತಮ್ಮ ಪ್ರದೇಶದಲ್ಲಿ ಮಂಗ ಸತ್ತರೆ ಇಲಾಖೆಗೆ ಮಾಹಿತಿ ನೀಡಬೇಕು. ಕಾಡಿಗೆ ಹೋಗುವವರು ಕಾಳಜಿ ವಹಿಸಬೇಕು. ಈಗಾಗಲೇ ಧ್ವನಿವರ್ಧಕ ಹಾಗೂ ಕರಪತ್ರಗಳ ಮುಖಾಂತರ ಹಳ್ಳಿಗಳಿಗೆ ಮಾಹಿತಿ ನೀಡಲಾಗಿದೆ. ಮಂಗನಕಾಯಿಲೆ ಲಕ್ಷಣ ಇದ್ದರೆ ಇಲಾಖೆಗೆ ತಿಳಿಸಬೇಕು ಎಂದು ಖಾಸಗಿ ಆಸ್ಪತ್ರೆಗಳಿಗೆಬರೆಯಲಾಗಿದೆ. ಈ ರೋಗ ನಿಯಂತ್ರಣದಲ್ಲಿ –ಸಾರ್ವಜನಿಕರು ಸಹಕರಿಸಬೇಕು ಎಂದು ಡಾ. ಸತೀಶ್ ಶೇಟ್ ಹೇಳಿದ್ದಾರೆ.
————————————-
2017ರ ಜನವರಿಯಿಂದ ಈವರೆಗೆ ಹೊನ್ನಾವರ ತಾಲೂಕಿನಲ್ಲಿ 15 ಮಂಗಗಳು ಸತ್ತಿದ್ದನ್ನು ಗುರುತಿಸಲಾಗಿದೆ. ಇವುಗಳಲ್ಲಿ ಹೊನ್ನಾವರದಲ್ಲಿ 5 ಮತ್ತು ಭಟ್ಕಳ ತಾಲೂಕಿನಲ್ಲಿ ಒಂದು ಮಂಗನಲ್ಲಿ ಈ ಕಾಯಿಲೆಯ ವೈರಾಣು ಎದೆ ಎಂದು ಗುರುತಿಸಲಾಗಿದೆ. 16 ಕಡೆ ಉಣ್ಣೆಗಳನ್ನು ಸಂಗ್ರಹಿಸಲಾಗಿದೆ. 6ಜನ ಜ್ವರ ಪೀಡಿತರಿಗೆ ಮಂಗನಕಾಯಿಲೆ ವೈರಾಣುಗಳಿರುವದು ಖಚಿತವಾಗಿದ್ದು ಅವರೆಲ್ಲ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಅಳ್ಳಂಕಿಯ ಒಬ್ಬರು ಮಣಿಪಾಲದಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ.
———————————————————————————-
ಮಂಗನಕಾಯಿಲೆ ಪ್ರಸರಣ -ಲಕ್ಷಣ:- ದನಗಳ ಮೈಮೇಲೆ ಬೆಳೆಯುವ ಉಣ್ಣೆಯಿಂದ ಮಂಗನಿಗೆ, ಮಂಗನಿಂದ ಮನುಷ್ಯನಿಗೆ ಹಬ್ಬುವ ಈ ರೋಗಕ್ಕೆ ನಿಶ್ಚಿತವಾದ ಮದ್ದಿಲ್ಲ. ಮಳೆಗಾಲ, ಚಳಿಗಾಲದಲ್ಲಿ ದನಗಳ ರಕ್ತಹೀರಿ ಅವುಗಳ ಮೈಮೇಲೆ ಬೆಚ್ಚಿಗೆ ಬೆಳೆಯುವ ನಿರುಪದ್ರವಕಾರಿ ಉಣ್ಣೆಗಳು ಕಾಡಿಗೆಮೇಯಲು ಹೋದ ದನಗಳ ಮೈಯಿಂದ ಉದುರಿಬೀಳುತ್ತದೆ. ಇವು ಕಾಡಿನಲ್ಲಿ ಓಡಾಡುವ ಮಂಗಗಳಿಗೆ ಕಚ್ಚುತ್ತವೆ.ತ್ರೀವ ಜ್ವರಪೀಡಿತ ಮಂಗಗಳು ಮರದಿಂದ ಮರಕ್ಕೆ ಹಾರಾಡುತ್ತಾ ಉಣ್ಣೆಗಳನ್ನು ತರಗೆಲೆಯ ಮೇಲೆ ಹರಡಿಕೊಳ್ಳುತ್ತವೆ. ತೆಗಲೆ, ಸೊಪ್ಪು ತರಲು ಕಾಡಿಗೆ ಹೋದ ಅಥವಾ ಕಾಡಿನ ಮಾರ್ಗದಲ್ಲಿ ಓಡಾಡುವ ಜನರಿಗೆ ಉಣ್ಣೆಗಳು ಕಚ್ಚಿಕೊಳ್ಳುತ್ತವೆ. ಇದರಿಂದ ಜ್ವರಪೀಡಿತ ಮನುಷ್ಯ ವಿಪರೀತ ಜ್ಚರ ಮತ್ತು ತಲೆ, ಹೊಟ್ಟೆನೋವಿನಿಂದ ಬಳಲುತ್ತಾನೆ. ಬೇಗ ಚಿಕಿತ್ಸೆ ಸಿಗದಿದ್ದರೆ ರಕ್ತನಾಳಗಳು ಒಡೆದು ಸಾವನ್ನಪ್ಪುತ್ತಾನೆ.
Leave a Comment