ಹೊನ್ನಾವರ: ಕೌಶಲ್ಯಾಭಿವೃದ್ಧಿ ಪ್ರತಿಯೊಂದು ಗ್ರಾಮೀಣ ಭಾಗದಲ್ಲಿ ಕಲೆಯನ್ನು ಗುರುತಿಸುವ ಸಾಧನವಾಗಿದೆ. ನಿರುದ್ಯೋಗ ನಿವಾರಣೆ ಮಾಡಲು ಇದು ಒಂದು ಉತ್ತಮ ಕಾರ್ಯವಾಗಿದ್ದು, ಎಲ್ಲಿ ಬದ್ಧತೆ ಇದೆಯೋ ಅಲ್ಲಿ ಉನ್ನತಿಗಳಿಸಲು ಸಾಧ್ಯ ಎಂದು ತಾಲೂಕಾ ಪಂಚಾಯತ ಸಹಾಯಕ ಅಕ್ಷರ ದಾಸೋಹ ನಿರ್ದೇಶಕ ಸುರೇಶ ನಾಯ್ಕ ಹೇಳಿದರು.
ಅವರು ಪ್ರಭಾತನಗರದ ವಿಕಾಸ ಸೌಧದಲ್ಲಿ ನಡೆದ ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಹಾಗೂ ಜೀವನೋಪಾಯ ಇಲಾಖೆ ಬೆಂಗಳೂರು, ಸಿಡಾಕ್ ಧಾರವಾಡ, ದಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ (ನಿ) ಕಾರವಾರ ಇವರ ಜಂಟಿ ಸಂಯುಕ್ತಾಶ್ರಯದಲ್ಲಿ “ವ್ಯವಹಾರ ಅಭಿವೃದ್ಧಿ ಮಾರ್ಗದರ್ಶನ ಕಾರ್ಯಕ್ರಮ”ವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರು ವ್ಯವಹಾರದಲ್ಲಿ ಯಶಸ್ಸು ಹೇಗೆ ಗಳಿಸಬೇಕೆಂದು ಮೊದಲು ತಿಳಿದುಕೊಳ್ಳಬೇಕು. ಹಣದ ಸದ್ವಿನಿಯೋಗ ಆದರೆ ಮಾತ್ರ ಮನುಷ್ಯ ತನ್ನ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಮೊದಲು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅದರಿಂದ ಸಮಾಜದಲ್ಲಿ ಉತ್ತಮ ಪ್ರಗತಿ ಸಾಧಿಸಲು ಸಾಧ್ಯ ಎಂದು ಹೇಳಿದರು.
ಸಿಡಾಕ್ ಮಾಹಿತಿ ಕೇಂದ್ರದ ಸಂಯೋಜಕ ಸತೀಶ ಮಾತನಾಡಿ ಪ್ರತಿಯೊಬ್ಬ ಆರ್ಥಿಕ ವಂಚಿತರಿಗೆ ಮಾಹಿತಿ ಒದಗಿಸುವುದು ಕಾರ್ಯ ಮಾಡಬೇಕು. ಡಿಜಿಟಲ್ ವ್ಯವಹಾರ ಉತ್ತೇಜನ ನೀಡುವ ಬಗ್ಗೆ ಈ ಕಾರ್ಯಕ್ರಮ ನಮ್ಮಲ್ಲೆ ಅಪಾರ ಸಂಪನ್ಮೂಲ ಇದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾರುತಿ ನಾಯ್ಕ, ಬ್ಯಾಂಕಿನ ಸಲಹೆಗಾರ ಗೀತಾ ಮಾತನಾಡಿದರು. ತಾಲೂಕಿನ ಹಲವು ಭಾಗಗಳಿಂದ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮ ಶೀಲತ ಜೀವನೋಪಾಯ ಇಲಾಖೆಯಿಂದ ಸೌಲಭ್ಯ ಪಡೆದ ಹಲವು ಫಲಾನುಭವಿಗಳು ತಮ್ಮ ಅನಿಸಿಕೆಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡರು.
Leave a Comment