ಹೊನ್ನಾವರ .ತಾಲೂಕಿನ ಶ್ರೀ ಚೆನ್ನಕೇಶವ ಪ್ರೌಢಶಾಲೆ, ಕರ್ಕಿಯ ಬಯಲುರಂಗ ಮಂದಿರದಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂಸನ್ಮಾನಕಾರ್ಯಕ್ರಮ ನಡೆಯಿತು
.ಮುಖ್ಯ ಅತಿಥಿಗಳಾಗಿ ಆಗಮಿಸಿ ಭಾರತೀಯರಿಸರ್ವ ಬ್ಯಾಂಕ ನಿವೃತ್ತ ವ್ಯವಸ್ಥಾಪಕರಾದ ಜಿ.ಆರ್ ಹೆಗಡೆರಾಘೋಣ ರವರು ವಿದ್ಯಾರ್ಥಿಗಳು ಬರೆದಕಥೆ, ಕವನ, ಚಿತ್ರಕಲೆಗಳಿಂದ ಕೂಡಿದ‘ಚೆನ್ನದಚಿನ್ನ’ ಹಸ್ತ ಪತ್ರಿಯನ್ನು ಲೋಕಾರ್ಪಣೆಗೊಳಿಸಿ, ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸಕ್ಕೆ ಮಹತ್ವದ ಬದುಕಿನ ಸೂತ್ರಗಳನ್ನು ತಿಳಿಸಿದರು.
ಬ್ಯಾಂಕ್ ವ್ಯವಹಾರಗಳ ಬಗ್ಗೆ ರಿಸರ್ವ್ಬ್ಯಾಂಕ್ನಕಾರ್ಯವೈಖರಿಯ ಬಗ್ಗೆ ತಿಳಿಸಿ. ಶಾಲೆಗೆ 10,000/- ದೇಣಿಗೆಯನ್ನು ನೀಡಿದರು.
ಇನ್ನೊರ್ವ ಮುಖ್ಯ ಅತಿಥಿಗಳಾದ ತಾಲೂಕ ಪಂಚಾಯತ್ ಸದಸ್ಯರಾದ ತುಕಾರಾಮ ನಾಯ್ಕ ಮಾತನಾಡಿ ಶಾಲೆಯ ಬೆಳವಣಿಗೆಯ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿ ಶಾಲೆಗೆ ಎಲ್ಲಾರೀತಿಯ ಸಹಕಾರಕ್ಕೆಕೈಜೋಡಿಸುವಲ್ಲಿ ಸೇತುವಾಗಿಕಾರ್ಯನಿರ್ವಹಿಸುತ್ತೇನೆಂದು ಭರವಸೆ ನೀಡಿದರು.
ಶಾಲೆಯಕೀರ್ತಿ ಹೆಚ್ಚಿಸಿದ ರಾಷ್ಟ್ರಮಟ್ಟಕ್ಕೆಆಯ್ಕೆಯಾದಕುಮಾರಿ ವಂದನಾ ನಾಗರಾಜಗೌಡ ಮತ್ತು ದಿ.ಎಮ್ ಕೆ ಹೆಗಡೆಯವರ ಸ್ಮರಣೆಯಲ್ಲಿಒಂದು ಲಕ್ಷದೇಣಿಗೆ ನೀಡಿದ ಸುಮಾ ಹೆಗಡೆಯವರನ್ನು ಸನ್ಮಾನಿಸಲಾಯಿತು
ಅಧ್ಯಕ್ಷತೆಯನ್ನು ವಹಿಸಿದ ಆಡಳಿತ ಮಂಡಳಿಯ ಅಧ್ಯಕ್ಷರಾದ, ನಾಗರಿಕ ಪತ್ರಿಕೆ ಸಂಪಾದಕರಾದ ಕೃಷ್ಣಮೂರ್ತಿ ಹೆಬ್ಬಾರ ಮಾತನಾಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಶಾಲೆಯಕೊಡುಗೆಅನುಪಮವಾದದ್ದು. ಜಾತಿ ಮತ ಪಥ ಮತ್ತುಧರ್ಮದಎಲ್ಲೆ ಮೀರಿಊರಿನ ಶಾಲೆಯಅಭಿವೃದ್ಧಿಗೆ ಕೈ ಜೋಡಿಸಲುಕರೆ ನೀಡಿದರು. ದತ್ತಿನಿಧಿ ಶಿಷ್ಯ ವೇತನ ನಿಧಿಯ ಪಟ್ಟಿಯನ್ನು ಸೀಮಾ ಭಟ್ಟ ವಾಚಿಸಿದರು, ಕ್ರೀಡಾವರದಿಯನ್ನು ಎಸ್ಎನ್ ಹೆಗಡೆ ವಾಚಿಸಿದರು. ಶಾಲಾ ಸಮಗ್ರ ವರದಿಯನ್ನು ಸುಬ್ರಹ್ಮಣ್ಯ ಭಟ್ಟ ವಾಚಿಸಿದರು. ಶಾಲಾ ಮುಖ್ಯಾಧ್ಯಾಪಕರಾದ ಎಲ್ಎಮ್ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿಎಲ್ಲರನ್ನು ಸ್ವಾಗತಿಸಿದರು. ಮುಕ್ತಾ ನಾಯ್ಕ ವಂದಿಸಿದರು ಹಾಗೂ ಶ್ರೀಕಾಂತ ಹಿಟ್ನಳ್ಳಿ ಕಾರ್ಯಕ್ರಮ ನಿರೂಪಿಸಿದರು.
Leave a Comment