ಹಳಿಯಾಳ: ದೇಶದ ಪ್ರತಿಯೊಂದು ನಾಗರಿಕನ ಮತ ಕ್ರಾಂತಿಕಾರಿ ಅಸ್ತ್ರವಿದ್ದಂತೆ ಅದನ್ನು ಅಭಿವೃದ್ಧಿ ಪರ, ಜನಪರ ಇರುವವರಿಗೆ ಚಲಾಯಿಸಿ ಉತ್ತಮ ಅಭಿವೃದ್ಧಿಯುಳ್ಳ ಪಕ್ಷ ಆರಿಸಿ ಅಧಿಕಾರಕ್ಕೆ ತನ್ನಿ ಕೆಲಸ ಮಾಡದೆ ಇರುವವರನ್ನು ಮನೆಗೆ ಕಳಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ನುಡಿದರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಉತ್ತರ ಕನ್ನಡ ಜಿಲ್ಲೆ, ಹಳಿಯಾಳ ತಾಲೂಕು ಪಂಚಾಯತ್ ರಾಜ್ ಇಂಜನೀಯರಿಂಗ್ ಉಪ ವಿಭಾಗದ ಅಡಿಯಲ್ಲಿ 2017-18 ನೇ ಸಾಲಿನ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ ತಾಲೂಕಿನ ಬೆಳವಟಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಮಸೀದಿ ಕಟ್ಟೆಯಿಂದ ಊರ ಕೆರೆಯವರೆಗೆ ಅಂದಾಜು ರೂ.15 ಲಕ್ಷ ಮೊತ್ತದ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಸಚಿವರು ಮಾತನಾಡಿದರು. ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರದ ಯೋಜನೆಗಳು ರಾಜ್ಯದ ಜನತೆಯ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಕಾಂಗ್ರೇಸ್ ಸರ್ಕಾರ ಮಾಡುತ್ತಿದ್ದು ದೇಶದ ಇತರ ರಾಜ್ಯಗಳಿಗೆ ಹೊಲಿಸಿದರೆ ಕರ್ನಾಟಕ ರಾಜ್ಯ ಅಭಿವೃದ್ಧಿಯಲ್ಲಿ ಹಾಗೂ ಜನಪರ ಯೋಜನೆಗಳನ್ನು ನೀಡುವಲ್ಲಿ ಮುಂಚುಣಿಯಲ್ಲಿದೆ ಎಂದ ಅವರು ಹಳಿಯಾಳ ತಾಲೂಕು ಅಭಿವೃದ್ಧಿಯತ್ತ ಮುಖ ಮಾಡಿದೆ. ಈ ಭಾಗದ ಪ್ರತಿಯೊಂದು ಕೆರೆಗಳ ಅಭಿವೃದ್ಧಿ, ಹೊಳೆತ್ತುವಿಕೆ, ರಸ್ತೆಗಳು, ಶಿಕ್ಷಣ ರಂಗದಲ್ಲಿ ಹತ್ತು ಹಲವಾರು ಯೋಜನೆಗಳ ಸಂಗಮವಾಗಿದ್ದು, ಮುಂಬರುವ ದಿನಗಳಲ್ಲಿ ತಾಲೂಕಿನ 91 ಹಳ್ಳಿಗಳಲ್ಲಿ ಕುಡಿಯುವ ನೀರು ಸೌಲಭ್ಯ ಸಿಗಲಿದೆ ಇದಕ್ಕೆ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ ಎಂದರು. ಕಾಳಿನದಿ ಯೋಜನೆಗಾಗಿ ಸ್ಥಳಿಯ ಕೆಲ ರಾಜಕಾರಣಿಗಳು ಈ ಯೋಜನೆ ಜಾರಿಯಾಗುದು ಅಸಾಧ್ಯ ಎಂದು ಹೇಳಿದ್ದರು. ಆದರೆ ಬರುವ 30 ದಿನಗಳಲ್ಲಿ ಈ ಯೋಜನೆ ಕಾರ್ಯ ಆರಂಭವಾಗಲಿದೆ ಎಂದು ದೇಶಪಾಂಡೆ ಹೇಳಿದರು.ಶಂಕು ಸ್ಥಾಪನೆ :- ಪಟ್ಟಣದಲ್ಲಿ ನಡೆದ ನಗರದಲ್ಲಿ ಜಿಲ್ಲಾ ಪಂಚಾಯತ್ ಉತ್ತರ ಕನ್ನಡ ಜಿಲ್ಲೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ಅಂದಾಜು 90 ಲಕ್ಷ ಮೊತ್ತದಲ್ಲಿ ಪಟ್ಟಣದ ಹೃದಯ ಭಾಗದಲ್ಲಿರುವ ಪುರಾತನ ಮೋತಿ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ ನೆರವೆರಿಸಿದರು. ಜಿ.ಪಂ ಉಪಾಧ್ಯಕ್ಷ ಸಂತೋಷ ರೇಣಕೆ, ತಾಲೂಕು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಸ ಕೋರ್ವೆಕರ, ಜಿ.ಪಂ ಸದಸ್ಯೆ ಮಹೇಶ್ರೀ ಮಿಶಾಳೆ, ಪುರಸಭೆ ಪ್ರಭಾರಿ ಅಧ್ಯಕ್ಷ ಅರುಣ ಬೊಬಾಟೆ, ತಹಶೀಲ್ದಾರ ವಿದ್ಯಾಧರ ಗುಳುಗುಳಿ, ತಾ.ಪಂನ ಅಧಿಕಾರಿ ಲಕ್ಷ್ಮಣರಾವ್ ಯಕ್ಕುಂಡಿ, ಲೋಕೊಪಯೋಗಿ ಇಲಾಖೆಯ ಆರ್.ಎಚ್ ಕುಲಕರ್ಣಿ, ಹೆಸ್ಕಾಂನ ಅಧಿಕಾರಿ ರವಿಂದ್ರ ಮೆಟಗುಡ್, ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಮುಲ್ಲಾ, ಸದಸ್ಯರಾದ ಸತ್ಯಜೀತ ಗಿರಿ, ಪರುಸಭೆ ಮುಖ್ಯಾಧಿಕಾರಿ ಕೇಶವ ಚೌಗಲೇ ಇತರರು ಇದ್ದರು.
Leave a Comment