ಹಳಿಯಾಳ: ಶಿಕ್ಷಣ, ಕ್ರೀಡೆಗಳಲ್ಲಿ ಅಪ್ಪಟ ಗ್ರಾಮೀಣ ಪ್ರತಿಭೆಗಳು ಗಣನೀಯ ಸಾಧನೆ ಮಾಡುತ್ತಿದ್ದು ಸ್ಥಳೀಯ ಪ್ರತಿಭೆಗಳಿಗೆ ವಿ.ಆರ್.ಡಿ.ಎಮ್.ಟ್ರಸ್ಟ್ನಿಂದ ವಿಶೇಷವಾಗಿ ಪ್ರೋತ್ಸಾಹ ನೀಡುತ್ತ ಬರಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಪ್ರತಿಭೆಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹನ ಟ್ರಸ್ಟ್ನಿಂದ ದೊರೆಯಲಿದೆ ಎಂದು ವಿ.ಆರ್.ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್ನ ಧರ್ಮದರ್ಶಿ ಪ್ರಸಾದ ಆರ್ ದೇಶಪಾಂಡೆ ಹೇಳಿದರು.ಹಳಿಯಾಳ: ಶಿಕ್ಷಣ, ಕ್ರೀಡೆಗಳಲ್ಲಿ ಅಪ್ಪಟ ಗ್ರಾಮೀಣ ಪ್ರತಿಭೆಗಳು ಗಣನೀಯ ಸಾಧನೆ ಮಾಡುತ್ತಿದ್ದು ಸ್ಥಳೀಯ ಪ್ರತಿಭೆಗಳಿಗೆ ವಿ.ಆರ್.ಡಿ.ಎಮ್.ಟ್ರಸ್ಟ್ನಿಂದ ವಿಶೇಷವಾಗಿ ಪ್ರೋತ್ಸಾಹ ನೀಡುತ್ತ ಬರಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಪ್ರತಿಭೆಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹನ ಟ್ರಸ್ಟ್ನಿಂದ ದೊರೆಯಲಿದೆ ಎಂದು ವಿ.ಆರ್.ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್ನ ಧರ್ಮದರ್ಶಿ ಪ್ರಸಾದ ಆರ್ ದೇಶಪಾಂಡೆ ಹೇಳಿದರು. ಗುರುವಾರ ಟ್ರಸ್ಟ್ನ ವತಿಯಿಂದ ಡಾ.ಬಾಬು ಜಗಜೀವನರಾಮ ಭವನದಲ್ಲಿ ಉತ್ತರ ಕನ್ನಡ ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನದ ಚೆಕ್ ವಿತರಿಸಿ ಮಾತನಾಡುತ್ತಿದ್ದ ಅವರು ಹಳಿಯಾಳ ಭಾಗದಿಂದ ಶೈಕ್ಷಣಿ, ಸಾಂಸ್ಕøತೀಕ ಸೇರಿದಂತೆ ಕ್ರೀಡಾ ರಂಗದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವಂತಹ ಪ್ರತಿಭೆಗಳು ಹೊರಹೊಮ್ಮುತ್ತಿರುವುದು ಹಳಿಯಾಳದ ಕೀರ್ತಿ ರಾಷ್ಟ್ರಮಟ್ಟದಲ್ಲಿ ಬೆಳಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ದಾಂಡೇಲಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಮ್.ಡಿ.ವಕ್ಕುಂದ ಮಾತನಾಡಿ ಸಾಧನೆಯ ಶಿಖರಕ್ಕೇರಿದ ಹೆಚ್ಚಿನವರು ತೀರಾ ಕೆಳಮಟ್ಟದಿಂದ ಬಂದವರಾಗಿದ್ದಾರೆ. ತಮ್ಮ ಕಠಿಣ ಪರಿಶ್ರಮ, ಸಾಧಿಸಬೇಕೆಂಬ ಛಲ ಇವು ಅವರನ್ನು ಇತರರಿಗೆ ಮಾದರಿಯಾಗುವ ಮಟ್ಟಕ್ಕೆ ಬೆಳೆಸುತ್ತವೆ ಎಂದರು. ಹಳಿಯಾಳ ತಾಲೂಕಿನಲ್ಲಿ 2016-17 ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ.ಯಲ್ಲಿ ಶೇ.75ಕ್ಕಿಂತ ಹೆಚ್ಚು ಅಂಕ ಪಡೆದ 407 ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ರೂ.2,47,500/- ರೂಗಳ ಶಿಷ್ಯವೇತನ ವಿತರಿಸಲಾಯಿತು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಚಂದ್ರಶೇಖರ ಲಮಾಣಿ, ದೇಶಪಾಂಡೆ ಖಾಸಗಿ ಐ.ಟಿ.ಐ. ಕಾಲೇಜಿನ ಪ್ರಾಂಶುಪಾಲ ದಿನೇಶ ಆರ್. ನಾಯ್ಕ, ವಿ.ವಿ.ಡಿ.ಸ್ಕೂಲ್ ಆಫ್ ಎಕ್ಸಲೆನ್ಸ್ ಪ್ರಾಂಶುಪಾಲ ರೋಶನ ನಾಯರ ವೇದಿಕೆ ಮೆಲಿದ್ದರು. ವಿ.ವಿ.ಡಿ.ಸ್ಕೂಲ್ ಅಫ್ ಎಕ್ಸಲನ್ಸ್ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶ್ರೀಧರ ಬುಳ್ಳಣ್ಣನವರ ಕಾರ್ಯಕ್ರಮ ನಿರ್ವಹಿಸಿದರು.
Leave a Comment