ಹೊನ್ನಾವರ: `ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇದರ ಆಶ್ರಯದಲ್ಲಿ `9’ನೇ `ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ ಜ.27 ರಿಂದ 31ರ ವರೆಗೆ ಗುಣವಂತೆಯ ಯಕ್ಷಾಂಗಣದಲ್ಲಿ ಆಯೋಜಿಸಲಾಗಿದೆ’ ಎಂದು ನಾಟ್ಯೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ತಿಳಿಸಿದರು. ಪಟ್ಟಣದಲ್ಲಿ ಖಾಸಗಿ ಹೋಟೆಲ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೇಷ್ಠ ಕೆರೆಮನೆ ಶಿವರಾಮ ಹೆಗಡೆಯವರಿಂದ ಆರಂಭವಾದ ಮಂಡಳಿ ಕೆರೆಮನೆ ಶಂಭು ಹೆಗಡೆ, ಮಹಾಬಲ ಹೆಗಡೆ, ಗಜಾನನ ಹೆಗಡೆಯವರಿಂದ ವಿಸ್ತಾರಗೊಂಡಿತು. ಈಗ ಮೂರನೆ ತಲೆಮಾರಿನಲ್ಲೂ ಸಾಂಪ್ರದಾಯಿಕ ಶೈಲಿ, ಪೌರಾಣಿಕ ಚೌಕಟ್ಟುಗಳನ್ನು ಉಳಿಸಿಕೊಂಡು ಹೊಸ ಆವಿಷ್ಕಾರದೊಂದಿಗೆ ಹೊಸ ಸ್ವರೂಪದೊಂದಿಗೆ ಮುನ್ನೆಡೆಯುತ್ತಿದೆ ಎಂದರು. ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಮಾತನಾಡಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ನಡೆಸಿಕೊಂಡು ಬರುವ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ 9ನೇ ವರ್ಷಕ್ಕೆ ಕಾಲಿಡುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ದೇಶದ ವಿವಿಧೆಡೆಯಿಂದ ವಿವಿಧ ಕಲಾತಂಡಗಳು ಭಾಗವಹಿಸುತ್ತಿವೆ. ಮೇರುನಟ ಕೆರೆಮನೆ ಶಂಭು ಹೆಗಡೆಯವರು ದಿವಂಗತರಾದಾಗಿನಿಂದ ಮಂಡಳಿ ಅವರ ನೆನಪಿನಲ್ಲಿ ವಿಶಿಷ್ಟವಾದ ನಾಟ್ಯೋತ್ಸವವನ್ನು ನಡೆಸಿಕೊಂಡು ಬರುತ್ತಿದೆ. ನಾಟ್ಯೋತ್ಸವದ ಪ್ರಯುಕ್ತ ಸತತ 5 ದಿನಗಳ ಕಾಲ ಗುಣವಂತೆಯ ಯಕ್ಷಾಂಗಣದಲ್ಲಿ ವಿವಿಧ ಬಗೆಯ ಸಾಂಸ್ಕೃತಿಕ ಉತ್ಸವಗಳು ನಡೆಯಲಿದೆ. ಹೀಗೆ 5 ದಿನಗಳ ಕಾಲ ವಿಶೇಷ ಸಾಂಸ್ಕೃತಿಕ ಸಂಗತಿಗಳಿಂದ ತುಂಬಿಕೊಂಡ `ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ ಕಾರ್ಯಕ್ರಮ ಇಡೀ ದೇಶದಲ್ಲಿ ವಿಶಿಷ್ಟವಾಗಿ ತನ್ನನ್ನ ಗುರುತಿಸಿಕೊಂಡು ಪ್ರತಿಷ್ಠಿತ ಸಾಂಸ್ಕೃತಿಕ ಕಾರ್ಯಕ್ರಮ ಎನಿಸಿಕೊಂಡಿದೆ ಎಂದರು.
ಕಾರ್ಯಕ್ರಮಗಳು: ಜ. 27ರ ಸಂಜೆ 5 ಗಂಟೆಗೆ ನಾಟ್ಯೋತ್ಸವವನ್ನು ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಖಾತೆ ಸಚಿವ ಅನಂತಕುಮಾರ ಹೆಗಡೆ ಉದ್ಘಾಟಿಸುವರು. ಶಾಸಕ ಮಂಕಾಳ ವೈದ್ಯ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಂಗಳೂರು ಸಂಸದ ನಳಿನಕುಮಾರ ಕಟೀಲು, ವಿಧಾನಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾಧಿಕಾರಿ ಎಸ್. ಎಸ್. ನಕುಲ, ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ, ಶಿಕ್ಷಣ ತಜ್ಞ ಪೆÇ್ರ. ಕೆ. ಇ. ರಾಧಾಕೃಷ್ಣ ಇತರರು ಪಾಲ್ಗೊಳ್ಳುವರು. ಜಿಲ್ಲೆಯ ಸುಪ್ರಸಿದ್ಧ ಹಾಗೂ ಐತಿಹಾಸಿಕ ಮೇಳವಾದ ಕರ್ಕಿಯ ಶ್ರೀ ದುರ್ಗಾಂಬಾ ಪ್ರಸಾದಿತ ಯಕ್ಷಗಾನ ಮಂಡಳಿಗೆ ಪ್ರತಿಷ್ಠಿತ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುವುದು. ಜ.28ರ ಸಂಜೆ 5 ಗಂಟೆಗೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಕೆ. ಎಂ. ಉಡುಪ ಮಂದಾರ್ತಿ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಸುದ್ದಿ ಸಂಪಾದಕ ಶಶಿಧರ ಭಟ್, ಡಾ. ನಾರಾಯಣ ಸಭಾಹಿತ, ನಾಟಕ ನಿರ್ದೇಶಕ ನಾಗರಾಜಮೂರ್ತಿ ಬೆಂಗಳೂರು, ವಕೀಲ ಶ್ರೀಪಾದ ಶಿವಮೊಗ್ಗ, ಸಾಹಿತಿ ಸಂತೋಷಕುಮಾರ್ ಮೆಹಂದಳೆ ಪಾಲ್ಗೊಳ್ಳುವರು. ಹಿರಿಯ ಯಕ್ಷಗಾನ ಕಲಾವಿದರಾದ ಸದಾಶಿವ ಹೆಗಡೆ, ಪೆರವೊಡಿ ನಾರಾಯಣ ಭಟ್ಟ, ಯಕ್ಷಗಾನ ಚಿಂತಕ ಡಾ.ಆನಂದರಾಮ ಉಪಾಧ್ಯಾಯ ಅವರನ್ನು ಸನ್ಮಾನಿಸಲಾಗುವುದು. ಜ.29ರ ಸಂಜೆ 5 ಗಂಟೆಗೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಕುಲಸಚಿವ ಡಾ. ನಿರಂಜನ ವಾನಳ್ಳಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಪತ್ರಕರ್ತ ರವೀಂದ್ರ ಭಟ್ ಐನಕೈ, ಕಾಸ್ಕಾರ್ಡ ಬ್ಯಾಂಕ್ನ ರಾಜ್ಯ ಉಪಾಧ್ಯಕ್ಷ ಈಶ್ವರ ನಾಯ್ಕ ಮುರ್ಡೇಶ್ವರ, ಚಿಂತಕ ಸೂರಾಲು ದೇವಿಪ್ರಸಾದ ತಂತ್ರಿ, ತಾ.ಪಂ ಇಒ ಎಂ. ವಿ. ಹೆಗಡೆ, ಉದ್ಯಮಿ ಕೃಷ್ಣಮೂರ್ತಿ ಭಟ್ ಶಿವಾನಿ, ರಾಜಕೀಯ ಮುಖಂಡ ಶಂಭು ಗೌಡ ಅಡಿಮನೆ ಪಾಲ್ಗೊಳ್ಳುವರು. ಶ್ರೀ ಕರಿಕಾನ ಪರಮೇಶ್ವರಿ ದೇವಾಯಲದ ಪ್ರಧಾನ ಅರ್ಚಕ ವೇ. ಸುಬ್ರಹ್ಮಣ್ಯ ಭಟ್ಟ, ಲೇಖಕ ಅನಂತ ವೈದ್ಯ, ಕಲಾವಿದ ಜಿ.ಎಂ.ಹೆಗಡೆ ಅವರನ್ನು ಸನ್ಮಾನಿಸಲಾಗುವುದು. ಜ.30ರ ಸಂಜೆ 5 ಗಂಟೆಗೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಸಾಹಿತಿ ಜಿ. ಎಸ್. ಭಟ್ ಮೈಸೂರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ವಿ. ಆರ್. ಗೌಡ, ಗ್ರಾ.ಪಂ ಅಧ್ಯಕ್ಷೆ ದೇವಿ ಮಹಾಬಲ ಗೌಡ, ಸಾಹಿತಿ ಡಾ. ವಸಂತಕುಮಾರ ಪೆರ್ಲ, ಪತ್ರಕರ್ತ ಎಂ. ಎಂ. ಪ್ರಭಾಕರ ಕಾರಂತ, ಕಲಾ ವಿಮರ್ಶಕ ಕೆ.ವಿ. ರಮಣ ಮಂಗಳೂರು, ಹೆಸ್ಕಾಂ ಇಇ ನರಸಿಂಹ ಪಂಡಿತ ನಿಲೇಕೇರಿ, ಊರ ಮುಖಂಡ ಗಣಪಯ್ಯ ಗೌಡ ಹೆಬ್ಬಾರಹಿತ್ಲ ಪಾಲ್ಗೊಳ್ಳುವರು. ಯಕ್ಷಗಾನ ಕಲಾವಿದರಾದ ಅತ್ತಿಮುರುಡು ವಿಶ್ವೇಶ್ವರ ಹೆಗಡೆ, ವೆಂಕಪ್ಪ ಭಂಡಾರಿ, ಮೂರೂರು ವಿಷ್ಣು ಭಟ್ಟ ಅವರನ್ನು ಸನ್ಮಾನಿಸಲಾಗುವುದು. ಜ.31ರ ಸಂಜೆ 5 ಗಂಟೆಗೆ ನಡೆಯುವ ಸಭಾಕಾರ್ಯಕ್ರಮದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಂಗಳೂರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಎಸಿ ಎಂ. ಎನ್. ಮಂಜುನಾಥ, ಹೇಮಂತರಾಜು, ಪೆÇ್ರ. ವರದೇಶ ಹಿರೆಗಂಗೆ, ಪತ್ರಕರ್ತರಾದ ಜಯರಾಮ ಹೆಗಡೆ, ಸುರೇಂದ್ರ ವಾಗ್ಲೆ, ವಕೀಲ ಡಾ. ರವಿ ಹೆಗಡೆ ಹೂವಿನಮನೆ, ವಿಎಸ್ಎಸ್ ಬ್ಯಾಂಕ್ ಅಧ್ಯಕ್ಷ ಗಣಪಯ್ಯ ಗೌಡ ಮುಗಳಿ ಪಾಲ್ಗೊಳ್ಳುವರು. ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಅವರಿಗೆ ಪ್ರಧಾನ ಮಾಡಲಾಗುವುದು. ಪತ್ರಕರ್ತ ಎಂ.ಕೆ. ಭಾಸ್ಕರ ರಾವ್ ಅಭಿನಂದಿಸುವರು. ಪ್ರತಿ ದಿನ ಬೆಳಿಗ್ಗೆ 10 ಗಂಟೆಯಿಂದ ಅಪೂರ್ವ ಪೂರ್ವ ಸ್ಮರಣೆ ಕಾರ್ಯಕ್ರಮದಲ್ಲಿ ಕಲಾ ಸಾಧಕರ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
Leave a Comment