ಹಳಿಯಾಳ : ಕಾಡು ಪ್ರಾಣಿಗಳು ಸೇರಿದಂತೆ ಪ್ರಮುಖವಾಗಿ ಕಾಡು ಹಂದಿಗಳ ಬೇಟೆಗಾಗಿ ನಾಡ ಬಾಂಬ್ ಬಳಸುತ್ತಿದ್ದ ಇಬ್ಬರು ಆರೋಪಿಗಳನ್ನು ಹಳಿಯಾಳ ತಾಲೂಕಿನ ಮುರ್ಕವಾಡ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ತಾಲೂಕಿನ ಗಡಿಯಾಳ ಗ್ರಾಮದ ವಾಗು ದೊಳು ಕೊಕರೆ ಹಾಗೂ ಸಿದ್ದು ಬಾಬು ಲಾಂಬೊರೆ ಬಂಧಿತ ಆರೋಪಿಗಳು. ಇವರುಗಳು ಶಿವಪುರ ಬಿಟ್ ಬಳಿ ಹಂದಿಗಳ ಬೇಟೆಗೆ ನಾಡ ಬಾಂಬ ಹಚ್ಚುತ್ತಿರುವ ಸಂದರ್ಭದಲ್ಲಿ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಗಳನ್ನು ಮಾಲು ಸಮೇತ ಬಂಧಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Leave a Comment