ಹಳಿಯಾಳ: ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ, ಸಿಬ್ಬಂದಿಗಳ ನೀರ್ಲಕ್ಷ್ಯತನದಿಂದ ಬಾಣಂತಿ ಸಾವು ಆರೋಪ, ಆಸ್ಪತ್ರೆಯ ಎದುರು ಶನಿವಾರ ಶವ ಇಟ್ಟು ಪ್ರತಿಭಟನೆ ಹಾಗೂ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನಾ ಮೇರವಣೀಗೆ, ಪ್ರತಿಭಟನಾಕಾರರ ಆಕ್ರೊಶ ಹಿನ್ನೆಲೆಯಲ್ಲಿ ಮಂಗಳವಾರ ತಹಶೀಲ್ದಾರ್ ಹಾಗೂ ತಾಲೂಕಾ ದಂಡಾಧಿಕಾರಿ ವಿದ್ಯಾಧರ ಗುಳಗುಳಿ ಅವರು ತಹಶೀಲ್ದಾರ್ ಕಚೇರಿಯಲ್ಲಿ ನೊಂದ ಕುಟುಂಬ, ಪ್ರತಿಭಟನಾಕಾರರು ಹಾಗೂ ತಾಲೂಕಾ ವೈದ್ಯಾಧಿಕಾರಿಗಳೊಂದಿಗೆ ಮಹತ್ವಪೂರ್ಣ ಸಭೆ ನಡೆಸಿದರು. ಸಭೆಯಲ್ಲಿ ಪ್ರತಿಭಟನಾಕಾರರಿಗೆ ಪ್ರಮುಖವಾಗಿ ಮಹಿಳೆಯರಿಗೆ ಸರ್ಕಾರಿ ಆಸ್ಪತ್ರೆಯ ಸಮಸ್ಯೆಗಳ ಕುರಿತು ಹೇಳಿಕೆ ದಾಖಲಿಸುವಂತೆ ತಿಳಿಸಿದ ತಹಶೀಲ್ದಾರ್ ಅವರು ಅನೇಕರಿಂದ ಹೇಳಿಕೆ ಪಡೆದುಕೊಂಡರು. ಸಭೆಯಲ್ಲಿದ್ದ ಬಹುತೇಕರು ಹಳಿಯಾಳ ಸರ್ಕಾರಿ ಆಸ್ಪತ್ರೆಯ ವಿರುದ್ದ ತೀವೃ ಟಿಕಾ ಪ್ರಹಾರ ಹಾಗೂ ಆರೋಪಗಳ ಸುರಿಮಳೆಯನ್ನೆ ಮಾಡಿದರು ಕೆಲವು ವೈದ್ಯರು ತಮ್ಮ ಖಾಸಗಿ ಆಸ್ಪತ್ರೆಗಳನ್ನೇ ನೆಚ್ಚಿಕೊಂಡಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುವುದಿಲ್ಲ ಅಲ್ಲದೇ ಇಲ್ಲಿ ಸಮಪರ್ಕ ಚಿಕಿತ್ಸೆ ನೀಡದೆ ಧಾರವಾಡ, ಹುಬ್ಬಳ್ಳಿ ಮತ್ತು ಬೆಳಗಾವಿಗೆ ಬರೆದುಕೊಡಲಾಗುತ್ತೇ ಸೇರಿದಂತೆ ಹಣದ ಬೇಡಿಕೆ, ಅಂಬ್ಯುಲೆನ್ಸ್ ಇತರ ಸೇವೆಗಳ ಕುರಿತು ವ್ಯಾಪಕ ಆರೋಪಗಳನ್ನು ಮಾಡಿದರು. ಅಲ್ಲದೇ ಈ ಪ್ರಕರಣದ ತನಿಖೆಗೆ ನೇಮಿಸಲಾಗಿರುವ ಜಿಲ್ಲೆಯ 3 ಜನ ತಜ್ಞ ವೈದ್ಯರ ತಂಡ ಪ್ರಾಮಾಣಿಕ ತನಿಖೆ ನಡೆಸುವ ವಿಶ್ವಾಸವಿಲ್ಲ, ಒಂದೆ ಇಲಾಖೆಯವರಾದ್ದರಿಂದ ಪ್ರಕರಣದ ದಿಕ್ಕು ತಪ್ಪಿಸಬಹುದು ಎಂದ ಅವರು ಜಿಲ್ಲಾ ಆರೋಗ್ಯಾಧಿಕಾರಿಗಳು ನೇಮಿಸಿರುವ ತಂಡದ ಮೇಲೆ ನಮಗೆ ನಂಬಿಕೆ ಇಲ್ಲ ಆದ್ದರಿಂದ ತಹಶೀಲ್ದಾರ್ ಅವರು ನಮಗೆ ನ್ಯಾಯ ಒದಗಿಸಿಕೊಡುವಂತೆ ಹಾಗೂ ಒಂದು ವಾರದ ಒಳಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು. ಬಾಣಂತಿ ಸಾವು ಪ್ರಕರಣ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿನ ಸಮಸ್ಯೆಗಳ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಹಾಗೂ ನೊಂದವರಿಗೆ ನ್ಯಾಯ ಒದಗಿಸಿಕೊಡಲು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಾಗುವುದು ಎಂದು ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಹೇಳಿದರು. ಈ ಸಂದರ್ಭದಲ್ಲಿ ಹಾಜರಿದ್ದ ತಾಲೂಕಾ ವೈದ್ಯಾಧಿಕಾರಿ ಡಾ.ರಮೇಶ ಕದಂ ಮಾತನಾಡಿ ಹಳಿಯಾಳ ತಾಲೂಕಾ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ದಾಖಲಾಗಿದ್ದ ಬಿಬಿಆಯಿಷಾ ದಿ.13 ರಂದು ಮರಣಹೊಂದಿದ ಬಗ್ಗೆ ಕುಲಂಕುಷವಾಗಿ ವಿಚಾರಣೆ ನಡೆಸಿ 3 ದಿಗಳ ಒಳಗೆ ವರದಿ ಒಪ್ಪಿಸುವಂತೆ ಜಿಲ್ಲಾ ಆರ್.ಸಿಎಚ್ ಅಧಿಕಾರಿ ಡಾ.ಶರತ ನಾಯಕ, ಸ್ತ್ರೀ ರೋಗ ತಜ್ಞರು ಪಂಡಿತ ಜನರಲ್ ಆಸ್ಪತ್ರೆ ಶಿರಸಿಯ ಡಾ.ವಿನಾಯಕ ಭಟ್ಟ ಹಾಗೂ ತಾಲೂಕಾ ಆಸ್ಪತ್ರೆ ಸಿದ್ದಾಪುರದ ಫಿಜಿಷಿಯನ್ ಡಾ.ಪ್ರಕಾಶ ಪುರಾಣಿಕ ಅವರನ್ನೊಳಗೊಂಡ 3 ಜನರ ತಂಡ ರಚಿಸಿ ದಿ.16 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅಶೋಕಕುಮಾರ ಅವರು ಆದೇಶ ಹೊರಡಿಸಿದ್ದಾರೆಂದು ತಿಳಿಸಿದ ಅವರು ಪ್ರಕರಣದ ತನಿಖೆ ನಡೆಯುವವರೆಗೆ ಸಹಕರಿಸುವಂತೆ ಮನವಿ ಮಾಡಿದರು.
Leave a Comment