ಹಳಿಯಾಳ:
ಸಂವಿಧಾನವನ್ನು ಬದಲಿಸುವ ಹಾಗೂ ಪ್ರತಿಭಟನಾ ನಿರತ ದಲಿತ ಕಾರ್ಯಕರ್ತರನ್ನು ನಾಯಿಗಳ ಬೋಗಳುವಿಕೆಗೆ ಹೊಲಿಸಿ, ಸಮುದಾಯವನ್ನು ಹಿಯಾಳಿಸಿ ದಲಿತ ಸಮುದಾಯಕ್ಕೆ ನೋವನ್ನುಂಟು ಮಾಡಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರನ್ನು ಸಚಿವಸ್ಥಾನದಿಂದ ಹಾಗೂ ಲೊಕಸಭಾ ಸದಸ್ಯತ್ವದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದೆ. ಪಟ್ಟಣದ ಯಲ್ಲಾಪೂರ ನಾಕಾದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ ಪುಥ್ಥಳಿಗೆ ಮಾಲಾರ್ಪಣೆ ಮಾಡಿ ಅನಂತಕುಮಾರ ಹೆಗಡೆಯ ಪ್ರತಿಕೃತಿ ಹಿಡಿದು ಹೆಗಡೆ ವಿರುದ್ದ ಧೀಕ್ಕಾರಗಳನ್ನು ಕೂಗುತ್ತಾ ಪ್ರತಿಭಟನಾ ಮೇರವಣಿಗೆ ಮೂಲಕ ಇಲ್ಲಿಯ ಶಿವಾಜಿ ವೃತ್ತಕ್ಕೆ ಆಗಮಿಸಿದ ಕ.ದ.ರ ವೇದಿಕೆ ಹಾಗೂ ಇತರ ದಲಿತ ಸಂಘಟನೆಯವರು ಕೆಲಕಾಲ ರಾಸ್ತಾರೋಖೊ ನಡೆಸಿ ಸಚಿವ ಅನಂತಕುಮಾರ ಪ್ರತಿಕೃತಿ ದಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಇಲ್ಲಿಯ ಮಿನಿ ವಿಧಾನಸೌಧಕ್ಕೆ ಆಗಮಿಸಿ ರಾಷ್ಟ್ರಪತಿಗಳ ಹೆಸರಿನಲ್ಲಿದ್ದ ಮನವಿಯನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿದರು. ಮನವಿಯಲ್ಲಿ ಕೆಂದ್ರ ಸಚಿವ ಅನಂತಕುಮಾರ ಹೆಗಡೆ ಕೆಲವು ದಿನಗಳ ಹಿಂದೆ ಸಂವಿಧಾನವನ್ನು ಬದಲಾಯಿಸುತ್ತೇವೆ ಹಾಗೂ ಸಂವಿಧಾನ ಬದಲಾಯಿಸಲು ನಾವು ಅಧಿಕಾರಿಕ್ಕೆ ಬಂದದ್ದು ಎಂದು ಹೇಳಿಕೆ ನೀಡಿದ್ದರು, ಈ ಕುರಿತು ಲೋಕಸಭೆ ಅದಿವೇಶನದಲ್ಲಿ ದಲಿತರ ಕ್ಷಮೆಯಾಚಿಸಿದರು. ಆದರೆ ಈಗ ಪುನಃ ಬಳ್ಳಾರಿಯಲ್ಲಿ ಉದ್ಯೋಗ ಮೇಳದ ಕಾರ್ಯಕ್ರಮಕ್ಕೆ ಆಗಮಿಸಿದಂತಹ ಸಂದರ್ಭದಲ್ಲಿ ದಲಿತ ಸಮುದಾಯದವರು ಕೆಂದ್ರ ಸಚಿವರನ್ನು ಮುತ್ತಿಗೆ ಹಾಕಿ ಕಪ್ಪು ಬಾವುಟ ತೋರಿಸಿದರು ಕಾರಣ ಕೆಂದ್ರ ಸಚಿವರನ್ನು ಬಿದಿಯಲ್ಲಿ ನಾಯಿಗಳು ಬೋಗೊಳಿದರೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಅವಹೆಳನಕಾರಿ ಮಾತನಾಡಿ ದಲಿತ ಸಮುದಾಯಕ್ಕೆ ನೋವು ಉಂಟು ಮಾಡಿದ್ದಾರೆ ಈ ಮೂಲಕ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿರುವ ಹೆಗಡೆಯನ್ನು ಕೂಡಲೇ ಸಚಿವ ಸ್ಥಾನದಿಂದ ಮತ್ತು ಲೋಕಸಭಾ ಸದಸ್ಯತ್ವದಿಂದ ಕೂಡಲೆ ವಜಾ ಮಾಡಬೇಕೆಂದು ಆಗ್ರಹಿಸಲಾಗಿದೆ. ಲೊಕಸಭೆ ಚುನಾವಣೆಗೆ ಸ್ಪರ್ಧಿಸಿದ ಸಂದರ್ಭದಲ್ಲಿ ಹೆಗಡೆಗೆ ದಲಿತರು ಸಹ ಮತ ಹಾಕಿದ್ದಾರೆ, ಆದರೆ ದಲಿತರನ್ನು ಈ ರೀತಿ ಅವಹೆಳನವಾಗಿ ಮಾತನಾಡುವುದು ಸರಿಯಲ್ಲಾ, ಅಲ್ಲದೆ ಕೆಂದ್ರದಲ್ಲಿ ಸಚಿವ ಸ್ಥಾನ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಸರ್ವ ಜಾತಿ, ಸರ್ವ ಜನಾಂಗ ಸರ್ವರನ್ನು ಸಮಾನವಾಗಿ ಕಾಣುತ್ತೇನೆಂದು ಪ್ರಮಾಣ ವಚನವನ್ನು ಸ್ವೀಕರಿಸಿದ ಅನಂತಕುಮಾರ ಬಹಿರಂಗವಾಗಿ ದಲಿತರನ್ನ ಅವಾಚ್ಯ ಶಬ್ಧಗಳಿಂದ ಮತ್ತು ನಾಯಿಗಳಿಗೆ ಹೊಲಿಸಿ ಮಾತನಾಡಿದ್ದು ಇಡಿ ನಮ್ಮ ದೇಶದ ದಲಿತ ಸಮುದಾಯಕ್ಕೆ ನೋವುಂಟು ಮಾಡಿದ್ದು ರಾಷ್ಟ್ರಪತಿಗಳು ಕೂಡಲೇ ಇಂತಹ ಸಚಿವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ತಾಲೂಕಾಧ್ಯಕ್ಷ ಪೀಶಪ್ಪಾ ಮೇತ್ರಿ, ಜಿಲ್ಲಾ ಯುವ ಘಟಕ ಅಧ್ಯಕ್ಷ ಎಚ್ ಎ ಪೀಶಣ್ಣಾ, ರಾಜ್ಯ ಕಾಂಗ್ರೇಸ ಸಂಘಟನಾ ಕಾರ್ಯದರ್ಶಿ ಎಸ್ಸಿಸೆಲ್, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ವಿಲಾಸ ಕಣಗಲಿ, ಈರಣ್ಣಾ ವಡ್ಡರ, ರಾಜು ಮೇತ್ರಿ, ಸುಭಾಷ, ಸಿದ್ದಿ ಸಮಾಜ ಮುಖಂಡ ಅಂತೋನ ಡಿಗ್ಗೆಕರ ಮೊದಲಾದವರು ಇದ್ದರು.
Leave a Comment