ಹೊನ್ನಾವರ: ಸಮಾಜದಲ್ಲಿಇಂದುಜಾತಿ ಧರ್ಮಗಳ ಸಂಘರ್ಷದಿಂದಜನರ ನೆಮ್ಮದಿ ಹಾಳಾಗುತ್ತಿದೆ. ವಿದ್ಯಾರ್ಥಿಗಳು ಇದರಿಂದದೂರವಿದ್ದು ಮಾನವೀಯವಾದ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದ\ಉತ್ತರಕನ್ನಡಜಿಲ್ಲಾ ಸಾಹಿತ್ಯ ಪರಿಷತ್ತಿ£ Àಅಧ್ಯಕ್ಷ Àಅರವಿಂದಕರ್ಕಿಕೋಡಿಯವರು ಹೇಳಿದರು.
ಇವರು ಹೊನ್ನಾವರದ ಸರ್ಕಾರಿ ಪ್ರಥಮದರ್ಜೆಕಾಲೇಜಿನಲ್ಲಿ ಪರಂಪರೆಯ ದಿನ ಮತ್ತು ಪ್ರತಿಭಾ ದಿನಗಳ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡುತ್ತ ಮನುಷ್ಯರುಇಂದು ಮೌಲ್ಯಗಳನ್ನು ಮರೆತುರಾಕ್ಷಸರಾಗಿ ಬದಲಾಗುತ್ತಿದ್ದಾರೆಎಂದು ವಿಷಾದ ವ್ಯಕ್ತಪಡಿಸಿದರು.
ಇಂದುಎಲ್ಲ ಧರ್ಮಗಳಲ್ಲಿಯೂ ಶ್ರೀಮಂತರು ಬೆಳೆದಿದ್ದು ಅವರುಆಯಾ ಧರ್ಮಗಳ ಬಡವರನ್ನು ಶೋಷಿಸುತ್ತಿದ್ದಾರೆ. ಹಾಗಾಗಿ ಜಾತಿ, ಧರ್ಮಗಳ ನಡುವಿನ ಸಂಘರ್ಷಕ್ಕೆ ಬದಲಾಗಿ ವರ್ಗ ಸಂಘರ್ಷದಅಗತ್ಯವಿದ್ದುಅಸಮಾನತೆಯ ವಿರುದ್ಧ ಹೋರಾಡಬೇಕಿz Éಎಂದರು.
ವಿದ್ಯಾರ್ಥಿಗಳಿಗೆ ಕಲೆಯು ಮೌಲ್ಯಗಳನ್ನು ರೂಢಿಸಿಕೊಳ್ಳಲು ಸಹಾಯ ಮಾಡುತ್ತದೆ. ಅದು ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರುವುದರಜೊತೆಗೆಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಸಹಾಯಮಾಡುತ್ತದೆಎಂದರು. ಆದ್ದರಿಂದ ವಿದ್ಯಾರ್ಥಿಗಳು ಕಲೆ ಸಾಹಿತ್ಯದ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಕೊಳ್ಳುವಂಥೆ ಕರೆ ನೀಡಿದರು.
ಸಮಾರಂಭದಲ್ಲಿಕಾಲೇಜಿನ ಪ್ರಾಚಾರ್ಯರಾದಡಾ. ಸುಮಂಗಲ ನಾಯಕ, ಐಕ್ಯುಎಸಿ ಸಂಚಾಲಕರಾದ ಪ್ರೊ. ಗಣೇಶ ಹೆಗಡೆ ಉಪಸ್ಥಿತರಿದ್ದರು.
ಕಾಲೇಜಿನ ಸಾಂಸ್ಕøತಿಕ ಸಮಿತಿಯ ಸಂಚಾಲಕರಾದಡಾ. ರಂಗನಾಥ ಕೆ. ಆರ್. ವಂದಿಸಿದರು. ಇದೇ ಸಂದರ್ಭದಲ್ಲಿರಾಜ್ಯರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ವಿಜೇತರಾದರಮಾಎನ್ ನಾಯ್ಕ, ರೋಶನ್ ಭಂಡಾರಿ ಹಾಗೂ ಗಿರೀಶ್ಅವರನ್ನುಅಭಿನಂದಿಸಲಾಯಿತು.
Leave a Comment