ಹಳಿಯಾಳ :- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ
ಹಿಂದೂ ಜನಜಾಗೃತಿ ಸಮಿತಿ ನೇತೃತ್ವದಲ್ಲಿ ವಿವಿಧ ಹಿಂದೂಪರ
ಸಂಘಟನೆಗಳು ಮಂಗಳವಾರ ತಹಶೀಲ್ದಾರ್ ವಿಧ್ಯಾಧರ ಗುಳಗುಳಿ
ಅವರ ಮೂಲಕ ಪ್ರಧಾನ ಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಶಿವಾಜಿ ವೃತ್ತದಲ್ಲಿ ಕೆಲ ಸಮಯ ಪ್ರತಿಭಟನೆ ನಡೆಸಿ ಬಳಿಕ ಮಿನಿ
ವಿಧಾನಸೌಧಕ್ಕೆ ಆಗಮಿಸಿ ಪ್ರಧಾನ ಮಂತ್ರಿಯವರ ಹೆಸರಿನಲ್ಲಿದ್ದ
ಮನವಿಯನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಲಾಯಿತು.
ಮನವಿಯಲ್ಲಿ ಹಿಂದೂಗಳ ಉತ್ಸವದ ಸಮಯದಲ್ಲಿ ಬಸ್ಸು ಮತ್ತು
ರೈಲಿನ ಬಾಢಿಗೆಯನ್ನು ಏರಿಸುವುದನ್ನು ಕೂಡಲೇ ರದ್ದು
ಪಡಿಸಬೇಕು, ದೇಶದ ಸಮಗ್ರತೆಯನ್ನು ಕಾಪಾಡಿ ಕೊಳ್ಳಲು
ಜನಸಂಖ್ಯಾ ನಿಯಂತ್ರಣ ಕಾನೂನು ತರಬೇಕು, 27 ವರ್ಷಗಳಿಂದ ಕಾಶ್ಮೀರಿ
ಹಿಂದುಗಳಿಗೆ ಪುನರ್ ವಸತಿ ಕಲ್ಪಿಸಿ, ಮನೆ ಮತ್ತು ಜಮೀನನ್ನು ಪುನಃ
ಅವರಿಗೆ ನೀಡಿ ಅವರಿಗೆ ರಕ್ಷಣೆ ನೀಡಬೇಕು, ಬೀಹಾರದಲ್ಲಿ ಅಲ್ಪಸಂಖ್ಯಾತ
ಯುವಕರಿಗೆ ಉದ್ಯೋಗವನ್ನು ನೀಡಲು ಅಲ್ಲಿಯ ಸರಕಾರದಿಂದ 5%
ರಂತೆ 1 ರಿಂದ 5 ಲಕ್ಷದ ವರೆಗೆ ಧನ ಸಹಾಯವನ್ನು ನೀಡುವುದಕ್ಕೆ
ವಿರೋಧವಿದ್ದು ಅದೇ ರೀತಿ ಎಲ್ಲ ಸಮುದಾಯಕ್ಕೂ ಧನಸಹಾಯ
ನೀಡಬೇಕು ಎಂದು ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮಂಜುನಾಥ
ಕಂಕಣವಾಡಿ, ಮೊಹಿನಿ ಹೊಂದುಕರ, ವಿನೋದ ಗಿಂಡೆ, ಸಂಜು ಬಿಷ್ಟೇಕರ,
ಅಶೋಕ ಕಿತ್ತುರ, ಅರುಣ ಗೊಂಧಳಿ, ಮಂಜುನಾಥ ನಾರಾಯಣ ಮರಾಠೆ
ಇತರರು ಇದ್ದರು.
Leave a Comment