• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • Story Archives
      • gadgets
      • APPLY LINK

ಫೆ.ದಿ.3 ಮತ್ತು 4 ರಂದು ಹಳಿಯಾಳದ ಶ್ರೀ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿ

February 1, 2018 by Yogaraj SK Leave a Comment

ಹಳಿಯಾಳ:  ಕರ್ನಾಟಕ ರಾಜ್ಯ ಕಬಡ್ಡಿ ಅಮೆಚೂರ್ ಅಸೋಸಿಯೇಶನ್, ಬೆಂಗಳೂರು,ಹಳಿಯಾಳ ತಾಲೂಕಾ ಘಟಕ, ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ ಹಾಗೂ ಉತ್ತರ ಕನ್ನಡ ಸಮಗ್ರ ಅಭಿವೃದ್ದಿ ಯೋಜನೆ(ಉತ್ಕರ್ಷ)ರವರ ಸಂಯುಕ್ತಾಶ್ರಯದಲ್ಲಿ ಫೆ.ದಿ.3 ಮತ್ತು 4 ರಂದು ಹಳಿಯಾಳದ ಶ್ರೀ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಬಡ್ಡಿ ಅಮೆಚೂರ್ ಅಸೋಸಿಯೇಶನ್‍ನ ಹಳಿಯಾಳ ಘಟಕದ ಅಧ್ಯಕ್ಷ  ಶ್ರೀನಿವಾಸ ಶ್ರೀಕಾಂತ ಘೋಟ್ನೆಕರ ತಿಳಿಸಿದರು.  ಪಟ್ಟಣದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಕೂಟವನ್ನು ಹಳಿಯಾಳದಲ್ಲಿ ಪ್ರಪ್ರಥಮಬಾರಿಗೆ ಮ್ಯಾಟ್ ಮೇಲೆ ನಡೆಸಲಾಗುವುದು. ದೇಶದ ಪ್ರತಿಷ್ಠಿತ ಕಬಡ್ಡಿ ತಂಡಗಳು ಈಗಾಗಲೇ ತಮ್ಮ ಹೆಸರನ್ನು ನೋಂದಣಿಮಾಡಿಕೊಂಡಿದ್ದು ಪ್ರಮುಖವಾಗಿ ಆಂದ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಪುನೆ, ಕರ್ನಾಟಕ, ಗೋವಾ, ಉತ್ತರಕನ್ನಡದ ಎರಡು ಅತ್ಯುತ್ತಮ ತಂಡಗಳು ಮತ್ತು ಇತರೆ ರಾಜ್ಯಗಳ ಕ್ಲಬ್ ತಂಡಗಳು ಭಾಗವಹಿಸುತ್ತಿರುವುದಾಗಿ ವಿವರಿಸಿದ ಅವರು ವಿಶೆಷವಾಗಿ ಈ ತಂಡಗಳಲ್ಲಿ ಪ್ರೋ ಕಬಡ್ಡಿ ಆಡಿದ ಆಟಗಾರರು ಭಾಗವಹಿಸುತ್ತಿದ್ದು, ಆಟಗಾರರು, ತಂಡದ ಮ್ಯಾನೇಜರ, ಕೋಚ್ ಮತ್ತು 20 ನಿರ್ಣಾಯಕರುಗಳಿಗೆ ಎರಡು ದಿನಗಳ ಊಟ ಮತ್ತು ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದರು.  ಶನಿವಾರ ದಿ. 3ರಂದು ಸಾಯಂಕಾಲ 4 ಗಂಟೆಗೆ ಪಂದ್ಯಾಟಕ್ಕೆ ಸಚಿವ ಆರ್. ವಿ. ದೇಸಪಾಂಡೆ ಚಾಲನೆ ನೀಡಲಿದ್ದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೆಕರ, ನಾಯಕರಾದ ಪ್ರಶಾಂತ ದೇಶಪಾಂಡೆ, ಪ್ರಸಾದ ದೇಶಪಾಂಡೆ, ಸೂರಜ ನಾಯ್ಕ ಸೋನಿ ಉಪಸ್ಥಿತರಿರುವರು.  ಕ್ರೀಡಾಕೂಟದಲ್ಲಿ ವಿಶೇಷವಾಗಿ ಯೂ ಮುಂಬಾ ತಂಡದ ಕೋಚ್ ರವಿ ಶೆಟ್ಟಿ, ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಬಿ.ಸಿ. ರಮೇಶ, ಕರ್ನಾಟಕ ಕಬಡ್ಡಿ ರೆಫರಿ ಬೋರ್ಡ ಅಧ್ಯಕ್ಷ ಎಂ. ಶಣ್ಮುಗಂ ಆಗಮಿಸಲಿದ್ದಾರೆ ಎಂದು ತಿಳಿಸಿದ ಶ್ರೀನಿವಾಸ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ರೂ 1,50,000/- ಪ್ರಥಮ, 1,00,000/- ರೂ ದ್ವಿತೀಯ, 65,000/- ತೃತೀಯ ಮತ್ತು 65000ರೂ  ಚತುರ್ಥ ನಗದು ಬಹುಮಾನಗಳೊಂದಿಗೆ ಆಕರ್ಶಕ ಟ್ರೊಪಿಯನ್ನೂ ನೀಡಲಾಗುದು.   ಅದೆ ರೀತಿ ವೈಯಕ್ತಿಕ 5 ಬಹುಮಾನಗಳನ್ನು ತಲಾ ರೂ 10,000/-ದಂತೆ ಪ್ರತ್ಯೇಕವಾಗಿ ನೀಡಲಾಗುವುದು ಎಂದು ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ ವಿವರಿಸಿದರು.  ಈ ಸಂದರ್ಭದಲ್ಲಿ ಜಿಲ್ಲಾ ಕಬಡ್ಡಿ ಅಮೆಚೂರ್ ಅಸೋಸಿಯೇಶನ್ ಉಪಾಧ್ಯಕ್ಷ ಸುಭಾಸ ಕಾಮ್ರೆಕರ, ದಿನೇಶ ನಾಯ್ಕ, ಸಂಜು ಅಸೂಕರ, ಶಂಕರ ದೇಸೂರಕರ ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News Tagged With: ಅಮೆಚೂರ್ ಅಸೋಸಿಯೇಶನ್, ಉತ್ತರ ಕನ್ನಡ ಸಮಗ್ರ ಅಭಿವೃದ್ದಿ ಯೋಜನೆ, ಫೆ.ದಿ.3 ಮತ್ತು 4, ಬೆಂಗಳೂರು, ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿ, ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ, ಶ್ರೀ ಛತ್ರಪತಿ ಶಿವಾಜಿ ಕ್ರೀಡಾಂಗಣ, ಹಳಿಯಾಳ, ಹಳಿಯಾಳ ತಾಲೂಕಾ ಘಟಕ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Olive Ridley Turtles Honavar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ KPSC recruitment 2023 Apply Online for Accounts Assistant

March 24, 2023 By Sachin Hegde

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬೃಹತ್ ನೇಮಕಾತಿ 2023 Central Bank of India Huge Recruitment 2023 Apply Online for 5000 Posts

March 23, 2023 By Sachin Hegde

KMF ತುಮುಲ್ ನೇಮಕಾತಿ 2023 Join KMF TUMUL Recruitment 2023 Apply Online for 219 Posts Today

March 21, 2023 By Sachin Hegde

ದನದ ಮಾಂಸ ಸಾಗಾಟ ಉಪನ್ಯಾಸಕನ ಪ್ರಾಚಾರ್ಯ ಬಂಧನ

March 20, 2023 By Sachin Hegde

ಭಾರತೀಯ ವಾಯುಪಡೆ ನೇಮಕಾತಿ 2023 Indian airforce new Recruitment 2023 Apply Online for Agniveervayu Posts

March 19, 2023 By Sachin Hegde

ಶ್ರೀ ಸತ್ಯಸಾಯಿ ಕರಿಕಾನ ಪರಮೇಶ್ವರಿ ಆಂಗ್ಲ ಮಾಧ್ಯಮ ಶಾಲೆ ನೇಮಕಾತಿ 2023

March 19, 2023 By Sachin Hegde

© 2023 Canara Buzz · Contributors · Privacy Policy · Terms & Conditions · Member of Digital Avatar