ಹಳಿಯಾಳ: ಜಾತಿ, ಧರ್ಮಗಳು ಕೇವಲ ದಾಖಲೆಗಾಗಿ ಮಾತ್ರ ಎನ್ನುವುದನ್ನು ಅರಿತು, ಎಲ್ಲರೂ ಒಗ್ಗಟ್ಟಿನಿಂದ ಜೀವನ ಸಾಗಿಸಿದಾಗ ಮಾತ್ರ ಸಮಾಜದಲ್ಲಿ ಶಾಂತಿ- ಸೌಹಾರ್ದತೆ ನೆಲೆಸಲು ಸಾಧ್ಯವೆಂದು ಹಳಿಯಾಳ ಮಿಲಾಗ್ರಿಸ್ ಚರ್ಚನ ಫಾ.ಜ್ಞಾನಪ್ರಕಾಶರಾವ್ ಅಭಿಪ್ರಾಯಟ್ಟರು. ಸೌಹಾರ್ದತೆಗಾಗಿ ಕರ್ನಾಟಕ ಮಾನವ ಸರಪಳಿ ಕಾರ್ಯಕ್ರಮದ ಅಂಗವಾಗಿ ಹಳಿಯಾಳ ಪಟ್ಟಣದ ಶಿವಾಜಿ ವೃತ್ತದಲ್ಲಿ ನಡೆದ ಮಾನವ ಸಪರಳಿಯಲ್ಲಿ ಪಾಲ್ಗೊಂಡು ಅವರು ಶಾಂತಿಯ ಸಂದೇಶ ಸಾರಿದರು. ಶಾಂತಿ, ಸಹಬಾಳ್ವೆ, ದ್ವೇಷ ರಹಿತ ಜೀವನದ ನಡೆಯನ್ನು ಬೊಧಿಸಿದ ಮಾನವ ಸಪರಳಿ ಕಾರ್ಯಕ್ರಮ ಹಳಿಯಾಳದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಮಾನವ ಸರಪಳಿ ಸಿದ್ದತಾ ಸಮೀತಿಯ ಆರ್.ಎಮ್.ಮುಲ್ಲಾ, ಮುಸ್ಲಿಂ ಸಮಾಜದ ಧರ್ಮಗುರು ಮುಫ್ತಿ ಫಯಾಜಮ್ಮದ, ಬಸವ ಕೇಂದ್ರದ ಚಂದ್ರಕಾಂತ ಅಂಗಡಿ, ಸುಮಂಗಲಾ ಅಂಗಡಿ, ಟಿಎಸ್ ನಾಯ್ಕ, ಅಂಗನವಾಡಿ, ಗ್ರಾ.ಪಂ. ನೌಕರರು, ಬಿಸಿಯೂಟ ನೌಕರರು, ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕ ಸೇರಿದಂತೆ ಮೊದಲಾದ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಸಾರ್ವಜನೀಕರು ಭಾಗವಹಿಸಿದ್ದರು.
Leave a Comment