ಹಳಿಯಾಳ: ಜನರಲ್ಲಿ ಭಕ್ತಿ ಭಾವನೆ ಇರಬೇಕು, ಸ್ತ್ರೀ ಪುರುಷರು ಸಮಾನವಾಗಿ ಸುಶಿಕ್ಷಿತಗೊಳ್ಳಬೇಕು, ಸ್ತ್ರೀ ಭ್ರೂಣ ಹತ್ಯೆ ಎಂದೆಂದೂ ಮಾಡಬಾರದು ಹಾಗೂ ಅಮೂಲ್ಯವಾದ ನೀರಿನ ಬಳಕೆ ಮಿತವಾಗಿ ಮಾಡುವಂತೆ ಶ್ರೀ 108 ಖಡೇಶ್ವರಿ ಯೋಗಿ ರವಿನಾಥಜೀ ಸ್ವಾಮೀಜಿ ಕರೆ ನೀಡಿದರು. ಭಾರತ ದೇಶದ ಹತ್ತನೇ ಮತ್ತು ಕರ್ನಾಟಕ ರಾಜ್ಯದ ಏಕೈಕ ಹಳಿಯಾಳದ ತಾಲೂಕಿನ ಕರ್ಲಕಟ್ಟಾದಲ್ಲಿರುವ ಶನಿಧಾಮ, ಬಾಬಾ ಖೇಥಾನಾಥಜಿ ಆಶ್ರಮದ 3ನೇ ವಾರ್ಷಿಕೋತ್ಸವ ಹಾಗೂ ಗುರುನಾಥ ಮಹಾರಾಜರ ನಾಲ್ಕನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಭಕ್ತರಿಗೆ ಆಶೀರ್ವಚನ ನೀಡಿದರು. ಸ್ರ್ತ್ರೀಯರು, ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ಸಮಾಜದಲ್ಲಿ ಆತಂಕಕಾರಿ ಬೆಳವಣಿಗೆಯಾಗಿದ್ದು ಇಂತಹ ದುಷ್ಠರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರಗಳು ನಿಗಾವಹಿಸಬೇಕೆಂದು ಅಭಿಪ್ರಾಯಿಸಿದರು. ಇಂದಿನ ಯುವಜನತೆ ಪಾಶ್ಚಾತ್ಯ ಸಂಸ್ಕøತೀಗೆ ಮಾರು ಹೊಗುತ್ತಿರುವುದು ದುರ್ದೈವದ ಸಂಗತಿಯಾಗಿದ್ದು ಪ್ರಾಚಿನ, ಸನಾತನ ಹಿಂದೂ ಧರ್ಮದ ಸಂಸ್ಕøತಿಯನ್ನು ಯಾರು ಮರೆಯಬಾರದು, ಧರ್ಮ ನೀತಿಯಿಂದ ನಡೆಯಬೇಕು, ಗೋ ಹತ್ಯೆ ನಿಲ್ಲಬೇಕು, ದಾನ-ಧರ್ಮ ಮಾರ್ಗದಲ್ಲಿ ಎಲ್ಲರೂ ನಡೆಯುವಂತಾಗಬೇಕೆಂದು ಕರೆ ನೀಡಿದರು. ದ್ವಾದಶ(12) ಜ್ಯೋತಿರ್ಲಿಂಗÀಗಳು, ಹನುಮಾನ್ ಮಂದಿರ ಹೊಂದಿರುವ ಶನಿಧಾಮದಲ್ಲಿ 3ನೇ ವಾರ್ಷಿಕೋತ್ಸವದ ನಿಮಿತ್ತ ವಿಶೇಷ ಶನಿದೇವರ ಅಭಿಷೇಕ, ಹೋಮ-ಹವನ, ಪೂಜಾ ವಿಧಿ ವಿಧಾನಗಳು, ಭಜನಾ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆದವು. ಈ ಸಂದರ್ಭದಲ್ಲಿ ಪುಣೆಯ ಸ್ವಾಮೀಜಿಗಳಾದ ಯೋಗಿ ತುಫಾನ ನಾಥಜಿ, ಲಕ್ಷ್ಮೀ ನಾಥಜಿ, ಯೋಗಿ ಮೇಘನಾಥಜಿ, ಮಾಯಿ ಚಂದ್ರಿಕಾನಾಥಜೀ, ಮಾಯಿ ಶಾಂತಿನಾಥಜೀ, ಎವಿಎಮ್ ಗ್ರಾನೈಟ್ಸ್ನ ಮಹಾವೀರ ಪ್ರಸಾದ ಮಲಾನಿ, ಶ್ಯಾಮಾ, ವಿವೇಕ ಮಲಾನಿ, ಜಿ.ಪಂ ಸದಸ್ಯ ಕೃಷ್ಣಾ ಪಾಟೀಲ್, ಸಾಂಬ್ರಾಣಿ ಗ್ರಾ.ಪಂ.ಅಧ್ಯಕ್ಷ ಐಸಿ ಕಾಮಕರ ಸೇರಿದಂತೆ ರಾಜಸ್ಥಾನಿ, ಮಾರವಾಡಿ ಸಮಾಜದವರು ಸೇರಿದಂತೆ ಸಾವಿರಾರು ಭಕ್ತರು ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.
Leave a Comment