ಹಳಿಯಾಳ: ಫೆಬ್ರವರಿ ದಿ. 2 ರಿಂದ 4 ರವರೆಗೆ ಅರಣ್ಯ ಇಲಾಖೆ ಹಾಗೂ ಇತರ ಇಲಾಖೆಗಳ ಸಹಯೋಗದೊಂದಿಗೆ ರಾಷ್ಟ್ರೀಯ ಮಟ್ಟದ “ಹಾರ್ನಬಿಲ್ ಫೆಸ್ಟಿವಲ್” (ಹಾರ್ನಬಿಲ್ ಹಕ್ಕಿಹಬ್ಬ) ಅನ್ನು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ದಾಂಡೇಲಿಯ ಅರಣ್ಯ ಅತಿಥಿ ಗೃಹದ ಆವರಣದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದು ಹಳಿಯಾಳ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಸ್.ರಮೇಶ್ ಹೇಳಿದರು. ಪಟ್ಟಣದ ಅರಣ್ಯ ಇಲಾಖಾ ಕಚೇರಿಯಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಕಾರ್ಯಕ್ರಮದ ಉಧ್ಘಾಟನೆಗೆ ಅರಣ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ವಿವಿಧ ರಾಜ್ಯಗಳ ಅರಣ್ಯ ಅಧಿಕಾರಿಗಳು, ಪಕ್ಷಿ ತಜ್ಞರು, ಸಂಶೋಧಕರು ಆಗಮಿಸಲಿದ್ದಾರೆ. ಫೆಬ್ರುವರಿ 3 ರ ರಾತ್ರಿ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಾಸುದೇವ ರವರು ಪರಿಸರ ಕುರಿತು ವಾದ್ಯ ಗೋಷ್ಠಿ ಹಾಗೂ ವಿನಯ್ ಹೆಗಡೆ ರವರು ಬಾನಂಗಳದಲ್ಲಿ ಚಿತ್ತಾರ, ನಾಗಾಲ್ಯಾಂಡ್ದಿಂದ ಬರುವ ಕಲಾ ತಂಡದಿಂದ ವಿಶಿಷ್ಟ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ ಎಂದರು. ಈ ಹಕ್ಕಿಹಬ್ಬದಲ್ಲಿ ಛಾಯಾಚಿತ್ರ ಹಾಗೂ ಚಿತ್ರಕಲೆ ಪ್ರದರ್ಶನ, ಭಿತ್ತಿ ಪತ್ರ, ಪ್ರತ್ಯೇಕ ಲಾಂಛನ ತಯಾರಿಸಿದ್ದು, ಪ್ರೊಮೊ ವಿಡಿಯೋ ಹಾಗೂ ಸಾಕ್ಷ್ಯ ಚಿತ್ರ ಹೊರ ತರುವ ಉದ್ದೇಶ ಹೊಂದಿರುವ ಕಾರ್ಯಕ್ರಮ ಪರಿಸರ ಸಂರಕ್ಷಣೆಯ ಮಹತ್ವ ಸಾರಲಿದೆ ಎಂದು ಡಾ.ರಮೇಶ್ ವಿವರಿಸಿದರು. ಖಗಸಿರಿಯ ವಿವಿಧ ಪ್ರಭೇದಗಳಲ್ಲಿ ಅತಿ ವರ್ಣಮಯ ಹಾಗೂ ಸುಂದರ ಪಕ್ಷಿಗಳಲ್ಲಿ ಇದೂ ಒಂದು. ನಮ್ಮ ದೇಶದಲ್ಲಿರುವ 9 ಜಾತಿಯ ಹಾರ್ನಬಿಲ್ಗಳಲ್ಲಿ 4 ಪ್ರಭೇದಗಳಿಗೆ ದಾಂಡೇಲಿ ಆವಾಸ ಸ್ಥಾನವಾಗಿದೆ. ಇವುಗಳು ಆಹಾರ ಸರಪಳಿಯ ಮುಖ್ಯ ಕೊಂಡಿಯಾಗಿ ಕೃಷಿ-ಕೀಟಗಳ ಹತೋಟಿಯಲ್ಲಿ ಮುಖ್ಯ ಪಾತ್ರವಹಿಸುತ್ತಾ ವಾತಾವರಣದ ಆರೋಗ್ಯವನ್ನು ತಿಳಿಸುವ ಫ್ಲಾಗಶಿಪ್ ಪ್ರಭೇದವಾಗಿರುತ್ತದೆ. ಅರಣ್ಯದಲ್ಲಿರುವ ವಿವಿಧ ಜಾತಿಯ ಮರಗಳ ಹಣ್ಣುಗಳನ್ನು ತಿನ್ನುತ್ತಾ ಅವುಗಳನ್ನು ಅರಣ್ಯದಲ್ಲಿ ವಿವಿದೆಡೆ ಪಸರಿಸಿ, ಅರಣ್ಯದ ಪುನರುತ್ಪತ್ತಿ ಹಾಗೂ ಆರೋಗ್ಯವನ್ನು ಕಾಪಾಡಲು ಮುಖ್ಯ ಪಾತ್ರ ವಹಿಸಿ “ಅರಣ್ಯದ ರೈತ” ಎಂದು ಕರೆಯಲ್ಪಡುವ ಇವುಗಳನ್ನು ಸಂರಕ್ಷಿಸುವ ಉದ್ದೇಶದಿಂದ 2011 ರಲ್ಲಿ ದಾಂಡೇಲಿ ಬಳಿಯ 57 ಚ.ಕಿ.ಮೀ. ಪ್ರದೇಶವನ್ನು “ಹಾರ್ನಬಿಲ್ ಸಂರಕ್ಷಿತ ಪ್ರದೇಶ” ಎಂದು ಕರ್ನಾಟಕ ಸರಕಾರ ಘೋಷಿಸಿದ್ದು ಇಂತಹ ಅತ್ಯಮೂಲ್ಯ ಪಕ್ಷಿ ಪ್ರಭೇದವನ್ನು ಉಳಿಸಿ, ಸಂರಕ್ಷಿಸುವ ಬಗ್ಗೆ ಅರಿವು ಮೂಡಿಸಿ ಮತ್ತು ಪಕ್ಷಿ ವೀಕ್ಷಣೆ ಬಗ್ಗೆ ಯುವ ಪೀಳಿಗೆಗೆ ಆಸಕ್ತಿ ಮೂಡಿಸಲು ಸದರಿ ಹಕ್ಕಿ ಹಬ್ಬವನ್ನು ಆಯೋಜಿಸಲಾಗಿದ್ದು ಕಾರ್ಯಕ್ರಮದಲ್ಲಿ ಪರಿಣಿತರಿಂದ ಪ್ರಾತ್ಯಕ್ಷಿತೆ, ಉಪನ್ಯಾಸ ಮತ್ತು ಚರ್ಚಾಕೂಟ, ಚಿತ್ರಕಲೆ, ಪ್ರಬಂಧ ಮತ್ತು ರಸಪ್ರಶ್ನೆ ಸ್ಪರ್ದೆ, ಛಾಯಾಚಿತ್ರ ಸ್ಪರ್ದೆ ಮತ್ತು ಪ್ರದರ್ಶನ, ಜಾಥಾ, ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಿಎಫ್ಓ ಡಾ.ರಮೇಶ್ ತಿಳಿಸಿದರು.
Leave a Comment