ಹೊನ್ನಾವರ: ಕೇಂದ್ರ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶಿಲತಾ ಸಚಿವ ಅನಂತಕುಮಾರ ಹೆಗಡೆ ಶನಿವಾರ ತಾಲೂಕಿನ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ 9-30ಕ್ಕೆ ಪಟ್ಟಣದ ಎಸ್ಡಿಎಮ್ ಕಾಲೇಜ್ ಮೈದಾನದಲ್ಲಿ ನಡೆಯಲಿರುವ ಸ್ಕಿಲ್ ಇಂಡಿಯಾದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 10-30 ರಿಂದ 12 ರವರೆಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.12 ಘಂಟೆಗೆ ಎಸ್ಡಿಎಮ್ ಕಾಲೇಜಿನಲ್ಲಿ 30 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ಒಳಾಂಗಣ ಕ್ರೀಡಾಂಗಣದಲ್ಲಿ ” ಉಡನ್ ಶೇಟಲ್ ಕೊರ್ಟ” ಲೋಕಾರ್ಪಣೆ ಮಾಡಲಿದ್ದಾರೆ. ಮದ್ಯಾಹ್ನ 2 ಘಂಟೆಗೆ ಪೂರ್ವ ನಿಗಧಿಯಾದಂತೆ ಪಟ್ಟಣದಲ್ಲಿ ಕಳೆದ ಡಿ. 6 ರಂದು ಮೃತಪಟ್ಟ ಪರೇಶ ಮೇಸ್ತನ ಮನೆಗೆ ಭೇಟಿ ನೀಡಿ ಕುಟುಂಬದವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
Leave a Comment