ಹೊನ್ನಾವರ .ಕೇಂದ್ರ ಸರಕಾರದ ಕೌಶಲ್ಯಾಭಿವೃದ್ಧಿ ಸಚಿವಾಲಯದ ಸ್ಕಿಲ್ಲಿಧಾನ್ ಕಾರ್ಯಕ್ರಮದಲ್ಲಿ ಹೊನ್ನಾವರ ತಾಲೂಕಿನ ಎಸ್.ಡಿ.ಎಮ್ ಕಾಲೇಜಿನ ಆವರಣದಲ್ಲಿ ನಡೆದ ಉದ್ಯೋಗ ಮೇಳವನ್ನು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವರಾದ ಮಾನ್ಯ ಅನಂತಕುಮಾರ ಹೆಗಡೆಯವರು ಉದ್ಘಾಟಿಸಿ ಉದ್ಯೋಗಾಕಾಂಕ್ಷಿಗಳಿಗೆ ಶುಭ ಕೋರಿದರು.
ಈ ಉದ್ಯೋಗ ಮೇಳದಲ್ಲಿ 40ಕ್ಕೂ ಹೆಚ್ಚು ವಿವಿಧ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದವು ಸುಮಾರ 3000 ಸಾವಿ ರ ಉದ್ಯೋಗಾಕಾಂಕ್ಷಿಗಳು ಈ ಮೇಳದಲ್ಲಿ ಹೆಸರು ನೊಂದಣಿ ಮಾಡಿಸಿದ್ದರು. ಕುಮಟಾದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ ವತಿಯಿಂದ ಹಲವಾರು ಅಭ್ಯರ್ಥಿಗಳನ್ನು ಕಳುಹಿಸಲಾಗಿದ್ದು ಅವರಲ್ಲಿ ಹಲವರಿಗೆ ಉದ್ಯೋಗ ದೊರೆತಿದ್ದು ಒಟ್ಟು ಸುಮಾರು 700-800 ಜನರಿಗೆ ತಕ್ಷಣ ಉದ್ಯೋಗಾವಕಾಶ ಲಭಿಸಿದ್ದು. ರಾಘವೇಂದ್ರ ಗುನಗ , ಯೋಗೇಶ ವಿಠ್ಠಲ್ ನಾಯ್ಕ , ಸೇರಿದಂತೆ ಹಲವರಿಗೆ ಸಚಿವರು ಸಂಕೇತಿಕವಾಗಿ ನೇಮಕಾತಿ ಪತ್ರವನ್ನು ವಿತರಿಸಿದರು.
Leave a Comment