ಹೊನ್ನಾವರ:- ತಾಲೂಕಿನ ಕಡತೋಕ ಗುಡ್ನಕಟ್ಟ ದಿಂದ ಉರಕೇರಿವರೆಗೆ ರಸ್ತೆ ಮರು ಡಾಂಬರೀಕರಣ ಹಾಗು ಸೇತುವೆ ನಿರ್ಮಾಣ ಕಾಮಗಾರಿಯನ್ನು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ನಮ್ಮ ಗ್ರಾಮ ನಮ್ಮ ರಸ್ತೆ ನಿರ್ಮಿಸಲು 5 ಕೋಟಿ 13 ಲಕ್ಷ ಅನುದಾನದ ಕಾಮಗಾರಿಗೆ ಶಾಸಕಿ ಶಾರದಾ ಮೋಹನ ಶೆಟ್ಟಿ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ನಂತರ ಮಾತನಾಡಿ ಈ ಹಿಂದೆ ಸ್ಥಳೀಯರು ರಸ್ತೆ ದುರಸ್ಥಿಗಾಗಿ ಮನವಿ ಸಲ್ಲಿಸಿದ್ದರು. ಜನ ವಸತಿ ಹೆಚ್ಚಿರುವ ಈ ಪ್ರದೇಶಕ್ಕೆ ಶಾಸ್ವತ ಪರಿಹಾರ ಕಾಣುವ ಹೆಚ್ಚಿನ ಅನುದಾನ ರಸ್ತೆ ಮಂಜೂರು ಮಾಡಿಸುವ ಉದ್ದೇಶದಿಂದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ದೊಡ್ಡ ಮೊತ್ತದ ಅನುದಾನ ರಸ್ತೆ ಮಂಜೂರು ಮಾಡಿಸಿಸದ್ದೇನೆ. ಈ ರಸ್ತೆ ಮತ್ತು ಸೇತುವೆ ನಿರ್ಮಾಣದಿಂದ ಸುತ್ತಲಿನ ಭಾಗದ ಗ್ರಾಮಸ್ದರಿಗೆ ತಂಬಾ ಅನುಕೂಲವಾಗಲಿದೆ. ಗುಣಮಟ್ಟದ ಕಾಮಗಾರಿ ಮಾಡಲು ಗುತ್ತಿಗೆದಾರರಿಗೆ ಸೂಚಿಸಿದ್ದೇನೆ. ಮುಂದಿನ 6 ವರ್ಷಗಳ ಕಾಲ ರಸ್ತೆಯ ನಿರ್ವಹಣೆ ಒಳಗೊಂಡಿದೆ. ಗ್ರಾಮಸ್ದರು ಗುಣಮಟ್ಟದ ಕಾಮಗಾರಿಯಾಗುವಂತೆ ನೋಡಿಕೊಳ್ಳಬೇಕು. ರಸ್ತೆಗೆ ಹೆಚ್ಚಿನ ಸ್ಥಳಾವಕಾಶ ಬೇಕಾಗಿದ್ದು ಜನರು ಯೋಜನೆಗೆ ಸ್ಫಂದಿಸಿ ರಸ್ತೆಗೆ ಜಾಗಾ ಬಿಟ್ಟು ಸಹಕರಿಸಲು ಕೋರಿದರು
ಕಡತೋಕ ಗ್ರಾಮ ಪಂಚಾಯತ ಉಪಾಧ್ಯಕ್ಷರು ಎಂ ಎಸ್ ಹೆಗಡೆ ಮಾತನಾಡಿ ಹಲವಾರು ವರ್ಷಗಳಿಂದ ಇಲ್ಲಿನ ಜನರ ಬಹು ದಿನಗಳ ಬೇಡಿಕೆಯಾದ ಸೇತುವೆ ನಿರ್ಮಾಣ ರಸ್ತೆ ಕಾಮಗಾರಿಗೆ ಶಾಸಕರು ಚಾಲನೆ ನೀಡಿದ್ದಾರೆ. ಇಲ್ಲಿನ ಜನರು ಕುಮಟಾ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಹಾಗು ರಸ್ತೆ ಕಾಮಗಾರಿಯನ್ನು ಮಂಜೂರು ಮಾಡಿದ್ದಾರೆ. ಸಾರ್ವಜನಿಕರ ಪರವಾಗಿ ಶಾಸಕರನ್ನು ಅಭಿನಂದಿಸಿದರು.
ಕಡತೋಕಾ ಗ್ರಾ. ಪಂ. ಅಧ್ಯಕ್ಷೆ ಶೋಭಾ ಶ್ರೀಧರ ನಾಯ್ಕ, ಕಿರಣ ಭಂಡಾರಿ ಶ್ರೀನಾಥ ಶೆಟ್ಟಿ, ರಾಜೇಶ ಗುನಗ ಇಲಾಖಾ ಅಭಿಯಂತರ ಆರ್ ಜಿ ಭಟ್ಟ್, ಲಂಬೋಧರ ನಾಯ್ಕ, ರಾಮಚಂದ್ರ ನಾಯ್ಕ ಹಾಗು ಸಾರ್ವಜನಿಕರು ಉಪಸ್ಥಿರಿದ್ದರು
Leave a Comment