ಹೊನ್ನಾವರ:
ಹಿಂದೂ ದೇವಾಲಯ ಮತ್ತು ಮಠಗಳನ್ನು ವಶಪಡಿಸಿಕೊಳ್ಳುವ ವಿಷಯವನ್ನು ಪದೇಪದೇ ಹೇಳಿಕೊಳ್ಳುತ್ತಿರುವ ರಾಜ್ಯ ಸರ್ಕಾರ ಈಗ ಜನರ ಆಕ್ರೋಶ ಎದುರಿಸುತ್ತಿದೆ. ಹೊನ್ನಾವರ: ಹಿಂದೂ ದೇವಾಲಯ ಮತ್ತು ಮಠಗಳನ್ನು ವಶಪಡಿಸಿಕೊಳ್ಳುವ ವಿಷಯವನ್ನು ಪದೇಪದೇ ಹೇಳಿಕೊಳ್ಳುತ್ತಿರುವ ರಾಜ್ಯ ಸರ್ಕಾರ ಈಗ ಜನರ ಆಕ್ರೋಶ ಎದುರಿಸುತ್ತಿದೆ. ಸರ್ಕಾರವು ಬುಧವಾರ ಹೊರಡಿಸಿರುವ ಆದೇಶವು ಹಿಂದು ಮಠ, ಮಂದಿರಗಳನ್ನು ಕೈವಶ ಮಾಡಿಕೊಳ್ಳುವ ಉದ್ದೇಶವನ್ನು ಹೊಂದಿದೆ. ಈ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ ಬೀದಿಗಿಳಿದು ಪ್ರತಿಭಟಿಸುದಾಗಿ ಹಲವು ಮಠಾಧೀಶರು ಹೇಳಿಕೆ ನೀಡಿರುವ ಬೆನ್ನಲ್ಲೇ ತಾಲೂಕಿನ ವಿವಿಧ ಸಮಾಜದ ಮುಖಂಡರು ಸರ್ಕಾರದ ನಿರ್ಧಾರದ ವಿರುದ್ದ ಕಿಡಿಕಾರಿದ್ದಾರೆ. ಈ ಮೂಲಕ ಸರ್ಕಾರ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಜೇನುಗೂಡಿಗೆ ಕಲ್ಲೆಸೆದಂತಾಗಿದೆ. ರಾಜ್ಯ ಸರ್ಕಾರ ರೂಪಿಸಿದ್ದ ಹಿಂದು ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮದಾಯ ಕಾಯ್ದೆಯನ್ನು 2006ರಲ್ಲಿ ಹೈಕೋರ್ಟ ರದ್ದುಪಡಿಸಿತ್ತು. ಈಗ ಮತ್ತೆ ಸರ್ಕಾರದ ವಕ್ರದೃಷ್ಟಿ ಹಿಂದೂ ದೇವಾಲಯ ಹಾಗೂ ಮಠಗಳ ಮೇಲೆ ಬಿದ್ದಿದೆ. ಅನ್ನ, ವಿದ್ಯೆ, ವಸತಿ ಹೀಗೆ ತ್ರಿವಿಧ ದಾಸೋಹಗಳನು ನಡೆಸುತ್ತಿರುವ ಮಠಗಳನ್ನು ಸರ್ಕಾರ ನಿಯಂತ್ರಿಸಲು ಮುಂದಾಗಿದೆ. ಸಿದ್ದರಾಮಯ್ಯ ಸರ್ಕಾರ ಮಠ ಮಾನ್ಯ, ಬಸದಿ ಮತ್ತಿತರ ಧಾರ್ಮಿಕ ವಿಷಯಗಳಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದು, ತಕ್ಕ ಬೆಲೆ ತರಬೇಕಾದೀತು ಎಂದು ಸಾರ್ವತ್ರಿಕವಾಗಿಯೂ ಹಲವರು ಎಚ್ಚರಿಸಿದ್ದಾರೆ.—
—- “ಸರ್ಕಾರದ ದುರಾಲೋಚನೆ ದುಷ್ಟ ಬುದ್ಧಿಯಿಂದಾಗಿ ಮಠಗಳನ್ನು ಸರ್ಕಾರ ತನ್ನ ವಶಕ್ಕೆ ಪಡೆಯಲು ಮುಂದಾಗಿದೆ. ದೇಶದ ಪ್ರಮುಖ ಮಠಗಳಲ್ಲಿ ಗುರುತಿಸಿಕೊಂಡಿರುವ ಶೃಂಗೇರಿ ಮಠ ಸಹಿತ ರಾಜ್ಯದ ಹಲವಾರು ಮಠಮಾನ್ಯಗಳು, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯದ ಮೂಲಕ ಜನರ ಬಾಳಿಗೆ ಬೆಳಕಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಸುತ್ತೋಲೆ ಹೊರಡಿಸುವ ಮೂಲಕ ಈ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಎಂದು ಸಾಬೀತಾಗಿದೆ” – ಉಮೇಶ ಖಾರ್ವಿ ಹೊನ್ನಾವರ, ಕೊಂಕಣಖಾರ್ವಿ ಸಮಾಜ ಮುಖಂಡ
“ಮಠಗಳ ವಿಷಯದಲ್ಲಿ ಸರ್ಕಾರದ ಹಸ್ತಕ್ಷೇಪ ಒಳ್ಳೆಯದಲ್ಲ. ನಮ್ಮ ಆದಿಚುಂಚನಗಿರಿ ಮಠವು ದೇಶದ ನಾನಾ ಭಾಗಗಳಲ್ಲಿ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಜನೋಪಯೋಗಿ ಕಾರ್ಯದಲ್ಲಿ ತೊಡಗಿಕೊಂಡಿದೆ. ಇಂಥ ಮಠಗಳ ಮೇಲೆ ಕೆಟ್ಟದೃಷ್ಠಿ ಹಾಕಿರುವುದು ಕಾಂಗ್ರೆಸ್ಸಿನ ಸಮಾಜ ವಿರೋಧಿ ಧೋರಣೆಯನ್ನು ತೋರಿಸುತ್ತದೆ. ಇದಕ್ಕೆ ತಕ್ಕ ಪಾಠ ಕಲಿಸಬೇಕಿದೆ.” – ಸುಬ್ರಾಯ ಗೌಡ, ಒಕ್ಕಲಿಗ ಮುಖಂಡ ಹಾಗೂ ಹೊನ್ನಾವರ ತಾಲೂಕಾ ಜೆಡಿಎಸ್ ಅಧ್ಯಕ್ಷ.
“ಮಠ ಮತ್ತು ದೇವಾಲಯಗಳನ್ನು ಸರ್ಕಾರೀಕರಣ ಮಾಡುವುದಕ್ಕೆ ಮುಂದಾಗಿ ಒಂದು ಧರ್ಮದ ಭಾವನೆಯನ್ನು ಕೆರಳಿಸುವ ಕೆಲಸಕ್ಕೆ ರಾಜ್ಯ ಸರ್ಕಾರ ಕೈಹಾಕಿದೆ. ರಾಮಚಂದ್ರಾಪುರ ಮಠ ಸೇರಿದಂತೆ ರಾಜ್ಯದ ಮಠಗಳು ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತಿವೆ. ಪ್ರಮುಖವಾಗಿ ಗೋರಕ್ಷಣೆಯ ಮೂಲಕ ಸರ್ವ ಜನಾಂಗದ ಗೌರವಕ್ಕೆ ಪಾತ್ರವಾಗಿವೆ. ಒಂದು ಧರ್ಮವನ್ನು ಮೆಟ್ಟುವ ಕಾರ್ಯಕ್ಕೆ ಮುಂದಾಗಿದೆ.” ವೆಂಕಟ್ರಮಣ ಹೆಗಡೆ ಕವಲಕ್ಕಿ, ಹವ್ಯಕ ಮುಖಂಡ
ಸುಬ್ರಾಯ ಗೌಡ ಉಮೇಶ ಖಾರ್ವಿ
Leave a Comment