ಹಳಿಯಾಳ:
ಜೆ.ಡಿ.ಎಸ್ನ ತಾಲೂಕಾ ಪ್ರದಾನ ಕಾರ್ಯದರ್ಶಿ ಹಾಗೂ ಸಿದ್ದಿ ಸಮುದಾಯದ ಮುಖಂಡ ಬಡೇಸಾಬ ಕಕ್ಕೇರಿಯವರನ್ನು ಅವರ ನಿವಾಸದಿಂದ ಗುರುವಾರ ಬೆಳಿಗಿನ ಜಾವ ಪೊಲೀಸ್ ಅಧಿಕಾರಿಗಳು ದಸ್ತಿಗಿರಿ ಮಾಡಿ ಅವರನ್ನು ಸಂಜೆಯವರೆಗೂ ಪೊಲೀಸ್ ಠಾಣೆಗಾಗಲಿ, ನ್ಯಾಯಾಲಯಕ್ಕಾಗಲಿ ಹಾಜರು ಪಡಿಸದೆ ಗೌಪ್ಯವಾಗಿ ಅವರನ್ನು ಬಂಧಿಸಿರುವ ಪೋಲಿಸರ ಕ್ರಮವನ್ನು ಖಂಡಿಸಿ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಳಿಯಾಳ ಠಾಣೆಯ ಎದುರು ಪ್ರತಿಭಟನೆ ನಡೆಸಿದರು.
ಜೆ.ಡಿ.ಎಸ್. ತಾಲೂಕಾ ಅಧ್ಯಕ್ಷ ಕೈತಾನ ಬಾರ್ಬೊಜಾ ನೇತೃತ್ವದಲ್ಲಿ ಜೆ,ಡಿ.ಎಸ್ ಮುಖಂಡರು ಹಾಗೂ ಕಾರ್ಯಕರ್ತರು ಪೊಲೀಸ್ ಠಾಣೆ ಆವರಣದ ಹೊರಗೆ ಧರಣಿ ನಡೆಸಿದರು. ಕ್ಷೇತ್ರಾಧ್ಯಕ್ಷ ಎನ್.ಎಸ್.ಜಿವೋಜಿ ಮಾತನಾಡಿ ಕಕ್ಕೇರಿ ಬಂಧನ ರಾಜಕೀಯ ದುರುದ್ದೇಶದಿಂದ ನಡೆದಿದ್ದು ಪಕ್ಷದ ಬಗ್ಗೆ ಅಪ ಪ್ರಚಾರ ಮಾಡುವ ಹುನ್ನಾರವಾಗಿದೆ ಅಲ್ಲದೇ ಉದ್ದೇಶ ಪೂರ್ವಕವಾಗಿ ಅವರನ್ನು ಬಂದಿಸಲಾಗಿದ್ದು ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಯಲ್ಲಪ್ಪಾ ಹೊನ್ನೊಜಿ, ನಸರುಲ್ಲಾ ಖಾನ್, ಸುಬಾನಿ ಹುಬ್ಬಳ್ಳಿ, ಅನ್ವರ ಅರಳಿಕಟ್ಟಿ, ಆನಂದ ವಡ್ಡರ, ಈರಣ್ಣ ವಡ್ಡರ, ಮಹಾಬೂಬಿ ಬಡೇಸಾಬ ಕಕ್ಕೇರಿ, ಹುಸೇನ ಬಿ ಜಮಾದಾರ ಇತರ ಪ್ರಮುಖರು ಇದ್ದರು.
Leave a Comment