ಹಳಿಯಾಳ:
ಹಳಿಯಾಳ ಕ್ಷೇತ್ರದ ರಾಜಕೀಯ ಕುಸ್ತಿಯಲ್ಲಿ ಗೆಲುವು ಸಾಧಿಸುವ ಅವಶ್ಯಕತೆ ಇದ್ದು ಈ ಕ್ಷೇತ್ರದಲ್ಲಿ ಕುಮಾರಸ್ವಾಮಿಯವರ ಮೇಲಿನ ಜನತೆಯ ಅಭಿಮಾನವೇ ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯ ಗೆಲುವಾಗಿ ಪರಿವರ್ತನೆಯಾಗಲಿದೆ ಎಂದು ಸೋರಬ ಕ್ಷೇತ್ರದ ಶಾಸಕ ಹಾಗೂ ಜೆಡಿಎಸ್ ಯುವ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು. ರವಿವಾರ ಇಲ್ಲಿಯ ಬಾಬು ಜಗಜ್ಜೀವನರಾಮ ಭವನದಲ್ಲಿ ಆಯೋಜಿಸಲಾದ ಜೆಡಿಎಸ್ ಪಕ್ಷದ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಅವರು ಹಳಿಯಾಳ ಕ್ಷೇತ್ರದಲ್ಲಿ ಪಕ್ಷದಲ್ಲಿ ಗೊಂದಲ ವಾತಾವರಣವಿತ್ತು ಈಗ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸುಂತೆ ಸೂಚನೆ ನೀಡಲಾಗಿದೆ ಅಲ್ಲದೇ ಇದೆ ತಿಂಗಳ ದಿ.17ರ ನಂತರ ಎಚ್.ಡಿ.ಕುಮಾರಸ್ವಾಮಿಯವರು ರಾಜ್ಯದ ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆಂದು ತಿಳಿಸಿದರು. ದಿ.ಎಸ್.ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಆಶ್ರಯ, ಆರಾಧನಾ, ವಿಶ್ವ ಇತ್ಯಾದಿ ಜನಪರ ಕಾರ್ಯಕ್ರಮಗಳನ್ನು ರಾಜ್ಯದ ಜನರು ಇಂದಿಗೂ ನೆನೆಸುತ್ತಿದ್ದು ಪ್ರಸ್ತುತ ಸರ್ಕಾರ ಕೂಡ ಇವುಗಳಿಗೆ ಪ್ರಾಧಾನ್ಯತೆ ನೀಡುತ್ತಿದೆ ಅಲ್ಲದೇ ರಾಜ್ಯದ ಅಭಿವೃದ್ದಿಗಾಗಿ ಕುಮಾರಸ್ವಾಮಿಯವರೇ ಉತ್ತಮ ನಾಯಕ ಎಂದು ಬಂಗಾರಪ್ಪನವರು 2010 ರಂದು ಜೆಡಿಎಸ್ ಸೇರಿ ಅವರನ್ನು ಬೆಂಬಲಿಸಿದ್ದರು ಆದ್ದರಿಂದ ಈ ಬಾರಿ ರಾಜ್ಯದ ಭವಿಷ್ಯ ಬದಲಾವಣೆಗೆ ನಾಯಕತ್ವ ಬದಲಾವಣೆಗೆ, ರೈತರ ಹಿತಾಸಕ್ತಿ ಹಾಗೂ ರಾಜ್ಯದ ಅಭಿವೃದ್ದಿಗಾಗಿ ಕುಮಾರಣ್ಣನನ್ನು ನೋಡಿ ಮತಹಾಕುವಂತೆ ಮನವಿ ಮಾಡಿದರು. ಕೈಗಾರಿಕಾ ಸಚಿವರಾದರೂ ಸಹ ಆರ್.ವಿ.ದೇಶಪಾಂಡೆ ಅವರು ಯಾವುದೇ ನೂತನ ಕೈಗಾರಿಕೊದ್ಯಮ ಪ್ರಾರಂಭಿಸಿಲ್ಲ ಆದರೇ ಅವರ ಕಾಲದಲ್ಲೇ ಕೈಗಾರಿಕೆಗಳು ನಶಿಸಿ ಹೊಗುತ್ತಿವೆ ಅಲ್ಲದೇ ದಶಕಗಳಿಂದ ಆಡಳಿತ ನಡೆಸುತ್ತಿರುವ ಅವರು ಈ ಕ್ಷೇತ್ರದಲ್ಲಿಯ ಅರಣ್ಯ ಅತಿಕ್ರಮಣ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿಲ್ಲ, ನೀರಾವರಿ ವ್ಯವಸ್ಥೆ ಮಾಡದೆ ಇರುವುದು ಖೇದಕರವಾಗಿದ್ದು ಅವರ ಅಭಿವೃದ್ದಿಪರ ಕಾಳಜಿಯನ್ನು ತೊರಿಸುತ್ತದೆ ಎಂದರು.
ಜೆಡಿಎಸ್ ಕಾರ್ಯಕರ್ತರ ಸಭೆ ಎಂದು ನಡೆದ ಕಾರ್ಯಕ್ರಮ ಓರ್ವ ಮುಖಂಡರ ವೈಯಕ್ತಿಕ ಗುಣಗಾನಕ್ಕೆ, ಅವರ ಜೀವನಚರಿತ್ರೆ ತಿಳಿಸಲು ಮಾಡಿದ ಸಭೆಯಾಗಿ ಮಾರ್ಪಟ್ಟಿದ್ದು ಉಳಿದ ಕೆಲವು ಮುಖಂಡರಲ್ಲಿ ಬೆಸರ ತರಿಸಿದ್ದು ಸಭೆಯಲ್ಲಿ ಕಂಡಿತು ಅಲ್ಲದೇ ಕಾರ್ಯಕ್ರಮದ ಬಗ್ಗೆ ಅರಿತ ಮಧು ಬಂಗಾರಪ್ಪ ಅವರು ಮಾಧ್ಯಮದ ಕೆಲವು ಪ್ರಶ್ನೇಗಳಿಗೆ ಉತ್ತರಿಸುತ್ತಾ ನಮಗಿಂತ ಹೆಚ್ಚು ಮಾಧ್ಯಮದವರಿಗೆ ಎಲ್ಲ ತಿಳಿದಿದ್ದು ಮುಂದಿನ ದಿನಗಳಲ್ಲಿ ಬದಲಾವಣೆ ಕಾಣಲಿದ್ದಿರಿ ಎಂದು ಹೇಳಿದರು. ಸಭೆಯಲ್ಲಿ ಕ್ಷೇತ್ರಾಧ್ಯಕ್ಷ ಎನ್.ಎಸ್.ಜಿವೋಜಿ, ಕೈತಾನ ಬಾರಬೋಜಾ, ಕೆ.ಆರ್.ರಮೇಶ ಮಾತನಾಡಿದರು. ವೇದಿಕೆಯ ಮೇಲೆ ಜಿಲ್ಲಾಧ್ಯಕ್ಷ ಬಿ.ಆರ್.ನಾಯ್ಕ, ರೊಷನ ಬಾಬಾಜಿ, ಶೋಭಾ ಕೊಳದಾರ, ಸುಬಾನಿ ಹುಬ್ಬಳ್ಳಿ, ಯಲ್ಲಪ್ಪಾ ಹೊನ್ನೊಜಿ, ನಸ್ರುಲ್ಲಾಖಾನ್, ಸುನಿತಾ, ಲಿಯಾಖತ ಇತರರು ಇದ್ದರು.
Leave a Comment