ಹಳಿಯಾಳ: ಪಟ್ಟಣದ ಮೋತಿ ಕೆರೆಯ ಕುಸ್ತಿ ಅಖಾಡಾದಲ್ಲಿ ಮೂರು ದಿನಗಳ ನಡೆಯಲಿರುವ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗೆ, ಸಾಂಸ್ಕøತೀಕ ಮೆರಗು ನೀಡುವ ಮೂಲಕ ಹಾಗೂ ತಾಲೂಕಿನ ಕೆಕೆ ಹಳ್ಳಿ ಮಠದ ಸುಬ್ರಮಣ್ಯ ಸ್ವಾಮಿ ಅವರು ಪ್ರಥಮ ಸುತ್ತಿನ ಕುಸ್ತಿ ಉಧ್ಘಾಟಿಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಪಟ್ಟಣದ ತುಳಜಾಭವಾನಿ ದೇವಸ್ಥಾನದಿಂದ ಮುಖ್ಯ ಬೀದಿಗಳ ಮುಖಾಂತರ ನಗಾರೆ ವಾದ್ಯವೃಂದದೊಂದಿಗೆ ಕುಸ್ತಿ ಕ್ರೀಡಾ ಜ್ಯೋತಿಯ ಭವ್ಯ ಮೆರವಣಗೆ ಮೂಲಕ ಅಖಾಡಕ್ಕೆ ತಂದು ಜ್ಯೋತಿ ಬೆಳಗಿಸಲಾಯಿತು. ದಿ.12 ರವರೆಗೆ ನಡೆಯುವ ಕುಸ್ತಿ ಪಂದ್ಯಾವಳಿಯಲ್ಲಿ 500ಕ್ಕೂ ಹೆಚ್ಚು ಪೈಲ್ವಾನರು ಭಾಗವಹಿಸಿದ್ದು ಪುರುಷರ ಹಾಗೂ ಮಹಿಳೆಯ ವಿಭಾಗವನ್ನು ಸೇರಿಸಿ ಒಟ್ಟೂ 24 ಪ್ರಶಸ್ತಿಗಾಗಿ ಕುಸ್ತಿಗಳು ನಡೆಯಲಿದ್ದು, ಕಳೆದ ಸಾಲಿಗಿಂತ ಈ ಬಾರಿ ಪ್ರಶಸ್ತಿಯ ಮೊತ್ತ ಹೆಚ್ಚಿಸಲಾಗಿದ್ದು, ಒಟ್ಟು ಅಂದಾಜು 13.80ಲಕ್ಷಕ್ಕೂ ಅಧಿಕ ಬಹುಮಾನ ನಿಗದಿಪಡಿಸಲಾಗಿದೆ. ಶನಿವಾರ ಪುರುಷರ ಹಾಗೂ ಮಹಿಳೆಯರ ವಿಭಾದಲ್ಲಿ 54 ಕೆ.ಜಿ. 50, 46, 42, 38, 35, 32, ಹಾಗೂ 39.ಕೆ.ಜಿ ವಿಭಾಗದಲ್ಲಿ ವಿಭಾಗದಲ್ಲಿ ಪ್ರಥಮ ಸುತ್ತಿನ ಕುಸ್ತಿಗಳನ್ನು ನಡೆಸಲಾಯಿತು. ಇದರಲ್ಲಿ ಬೆಳಗಾಂವಿ, ಮುಧೋಳ, ಧಾರವಾಡ, ಹುಬ್ಬಳ್ಳಿ, ಬಾಗಲಕೋಟ, ಅಳ್ವಾಸ್ ಮುಡಬಿದ್ರೆ, ಗದಗ, ಕುಸ್ತಿ ಕ್ರೀಡಾ ಪಟುಗಳ ಸೆಣಸಾಟ ನಡೆಯಿತು. ರಾಷ್ಟ್ರಮಟ್ಟದ ಹಿರಿಯ ವಿಭಾಗದಲ್ಲಿ ಪುರುಷ ಕುಸ್ತಿ ಪಟುಗಳು ತೂಕದಲ್ಲಿ 120 ಕುಸ್ತಿ ಪಟುಗಳು ಅರ್ಹತೆ ಪಡೆದಿದ್ದು ಮಹಾನ್ ಭಾರತ ಕೇಸರಿ 35 ಪುರುಷರು, ಮಹಿಳೆಯರ ವಿಭಾಗದಲ್ಲಿ ವೀರ ರಾಣಿ ಕಿತ್ತೂರ ಚೆನ್ನಮ್ಮ 18 ಮಹಿಳೆಯರು, ರಾಜ್ಯ ಮಟ್ಟದಲ್ಲಿ ಮಹಿಳೆಯರ ವಿಭಾಗದಲ್ಲಿ 70 ಮಹಿಳಾ ಪಟುಗಳು ಅರ್ಹತೆ ಪಡೆದಿದ್ದು ಬಿರುದು ಹಾಗೂ ನಗದು ಬಹುಮಾಗಳಿಗೆ ಸೆಣೆಸಾಟ ನಡೆಸಲಿದ್ದಾರೆ. ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ, ಯಶ್ವಂತ ಸ್ವಾಮಿ, ಪ್ರಕಾಶ ಕಮ್ಮಾರ, ಮಾನಗೆ ಇತರರು ಇದ್ದರು.
Leave a Comment