ಹೊನ್ನಾವರ: ತಾಲೂಕಿನ ಕಾವೂರ ಶ್ರೀ ಕಾಂಚಿ ಕಾಮಾಕ್ಷಿ ಗೆಳೆಯರ ಬಳಗ ಹಾಗೂ ತಾಲೂಕಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇವರ ಆಶ್ರಯದಲ್ಲಿ ಫೇ 15 ರಂದು ಗುರುವಾರ ಸಂಜೆ 6 ಘಂಟೆಗೆ ತೃತೀಯ ವರ್ಷದ ತಾಲೂಕಾ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ನಡೆಯಲಿದೆ.
ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಯಕ್ಷಿ ಚೌಡೇಶ್ವರಿ ನೀಲಗೋಡ ಪ್ರಧಾನ ಅರ್ಚಕರಾದ ಮಾದೇವ ಸ್ವಾಮಿ ಉದ್ಘಾಟಿಸುವರು. ಹಡಿನಬಾಳ ಗ್ರಾ.ಪಂ ಅಧ್ಯಕ್ಷ ಚಂದ್ರಹಾಸ ಟಿ. ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ರೀಡಾಂಗಣದ ಉದ್ಘಾಟನೆಯನ್ನು ಕಬಡ್ಡಿ ಅಸೋಸಿಯೇಶನ್ ರಾಜ್ಯ ಉಪಾಧ್ಯಕ್ಷರಾದ ಸೂರಜ ನಾಯ್ಕ ಸೋನಿ, ಬಿಜೆಪಿ ಮುಖಂಡ ವೆಂಕಟ್ರಮಣ ಹೆಗಡೆ ನೇರವೇರಿಸಲಿದ್ದಾರೆ. ಟ್ರೋಫಿ ಉದ್ಘಾಟನೆಯನ್ನು ಮಾಜಿ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಶಂಭು ಗೌಡ ನೇರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿಜೆಪಿ ಮುಖಂಡ ಸುನೀಲ ನಾಯ್ಕ ಶಿರಾಲಿ, ಖ್ಯಾತ ವೈದ್ಯರಾದ ಆಶಿಕ್ಕುಮಾರ ಹೆಗಡೆ, ತಾ.ಪಂ. ಸದಸ್ಯ ಆರ್.ಪಿ. ನಾಯ್ಕ, ಪತ್ರಕರ್ತ ಗೋಪಾಲಕೃಷ್ಣ ಭಟ್, ಬಿಜೆಪಿ ತಾಲೂಕಾ ಅಧ್ಯಕ್ಷ ಸುಬ್ರಾಯ ನಾಯ್ಕ, ಗುತ್ತಿಗೆದಾರ ಕೃಷ್ಣ ಗೌಡ, ಸತ್ಯಾಜಾವಗಲ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಶ್ರೀ ಕಾಂಚಿ ಕಾಮಾಕ್ಷಿ ಗೆಳೆಯರ ಬಳಗದ ಅಧ್ಯಕ್ಷ ಸಂತೋಷ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment