ಹಳಿಯಾಳ:-
ತಮ್ಮ ಕುಟುಂಬದ ಹಾಗೂ ವಿ.ಆರ್.ದೇಶಪಾಂಡೆ ಮೇಮೋರಿಯಲ್ ಟ್ರಸ್ಟ್-ಆರ್ಸೆಟಿ ವಿರುದ್ದ ಸತ್ಯಕ್ಕೆ ದೂರವಾದ ಸುಳ್ಳು ಆರೋಪಗಳನ್ನು ಮಾಡಿ ಪತ್ರಿಕಾ ಹೇಳಿಕೆ ನೀಡಿರುವ ಹಳಿಯಾಳದ ಮಾಜಿ ಶಾಸಕ ಸುನೀಲ್ ಹೆಗಡೆ ಹಾಗೂ ಬಿಜೆಪಿ ಪಕ್ಷ ಜಿಲ್ಲಾ ವಕ್ತಾರ ಪ್ರಮೋದ ಹೆಗಡೆ ವಿರುದ್ದ ಕಾನೂನು ಕಾಯ್ದೆ ನೋಟಿಸ್(ಲಿಗಲ್ ನೋಟಿಸ್) ನೀಡಲಾಗಿದೆ ಎಂದು ಟ್ರಸ್ಟ್ನ ಆಡಳಿತ ಮಂಡಳಿ ಸದಸ್ಯ ಹಾಗೂ ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ಹೇಳಿದರು. ಗುರುವಾರ ಪಟ್ಟಣದ ತಮ್ಮ ನಿವಾಸದಲ್ಲಿ ನಡೆಸಿದ ಮಹತ್ವಪೂರ್ಣ ಸುದ್ದಿಗೊಷ್ಠೀಯಲ್ಲಿ ಸುನೀಲ್ ಹಾಗೂ ಪ್ರಮೋದ ಅವರಿಗೆ ನೀಡಲಾದ ಲಿಗಲ್ ನೋಟಿಸ್ ಪ್ರತಿಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿ ಮಾತನಾಡಿದರು. 2004 ರಲ್ಲಿ ಕೆನರಾ ಬ್ಯಾಂಕ್ನ ಸಹಯೋಗದಲ್ಲಿ ದಿ.ವಿಶ್ವನಾಥರಾವ ದೇಶಪಾಂಡೆ ರವರ ಹೆಸರಿನಲ್ಲಿ ಆರಂಭಿಸಲಾಗಿರುವ ಸಂಸ್ಥೆಯಿಂದ ಈಗಾಗಲೇ 22ಸಾವಿರ ನಿರುದ್ಯೋಗಿ ಯುವಕ/ಯುವತಿಯರಿಗೆ ಸ್ವ ಉದ್ಯೋಗ-ಕೌಶಲ್ಯ ತರಬೇತಿ ನೀಡಲಾಗಿದ್ದು ಇವರಲ್ಲಿ 15ಸಾವಿರ ಜನರು ಸ್ವ ಉದ್ಯೋಗ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಅಲ್ಲದೇ ವಿವಿಧ ಜನಪರ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಆರ್ಸೆಟಿಗೆ 2009-10 ರಲ್ಲಿ ನಬಾರ್ಡನಿಂದ, 2012-13ರಲ್ಲಿ ಅತಿ ಶ್ರೇಷ್ಠ ‘ಎಎ’ ಪ್ರಶಸ್ತಿ, 2013-14ರಲ್ಲಿ ಈಡಿ ದೇಶದಲ್ಲಿ ಅತ್ಯುತ್ತಮ ಆರ್.ಸೆಟಿ ಬಹುಮಾನ ಹಿಗೆ ಪ್ರತಿ ಸಾಲಿನಲ್ಲಿ ಪ್ರಶಸ್ತಿಗಳನ್ನು ಪಡೆಯುತ್ತ ಸಾಗಿರುವ ಸಂಸ್ಥೆ ಸ್ವಾವಲಂಬಿ ಜೀವನ ನಡೆಸಲು ಯುವಕ-ಯುವತಿಯರಿಗೆ ಪ್ರೇರಣೆಯಾಗುತ್ತಿದೆ ಎಂದರು. ಜಿಲ್ಲಾಧಿಕಾರಿ, ಜಿಪಂ ಸಿಇಒ ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಆಡಳಿತ ಮಂಡಳಿ ಸದಸ್ಯರಾಗಿರುವ ಕಾನೂನು ಬದ್ದವಾಗಿ, ನಿಯಮಗಳನ್ನು ಚಾಚು ತಪ್ಪದೆ ಪಾಲಿಸಿಕೊಂಡು ಯಾವುದೇ ರಾಜಕೀಯ, ತಕರಾರು, ಆರೋಪಗಳಿಲ್ಲದೇ ನಡೆಯುತ್ತಿರುವ ಆರ್ಸೆಟಿ ವಿರುದ್ದ ಸತ್ಯಕ್ಕೆ ದೂರವಾದ ಸುಳ್ಳು ಹೇಳಿಕೆ ನೀಡಿ ಸಂಸ್ಥೆಯ ಹೆಸರಿಗೆ ಚ್ಯುತಿ ತರಲು ಹೊರಟಿರುವ ಮಾಜಿ ಶಾಸಕ ಸುನೀಲ್ ಹೆಗಡೆ ಹಾಗೂ ಬಿಜೆಪಿ ಮುಖಂಡ ಪ್ರಮೋದ ಹೆಗಡೆ ವಿರುದ್ದ ಆರ್ಸೆಟಿಯ ಆಡಳಿತ ಮಂಡಳಿ ಸದಸ್ಯರಾಗಿರುವ ತಾವು ಲಿಗಲ್ ನೋಟಿಸ್ ನೀಡಿದ್ದು ಒಂದು ವಾರದ ಒಳಗೆ ನೋಟಿಸ್ಗೆ ಉತ್ತರಿಸಿ ಮಾಡಿದ ಆರೋಪಗಳಿಗೆ ದಾಖಲೆ ಒದಗಿಸಬೇಕು ಇಲ್ಲವೇ ಕ್ಷಮೇ ಕೋರಬೇಕು ಇಲ್ಲದಿದ್ದರೇ ಅವರಿಬ್ಬರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ಮಾನಹಾನಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಪ್ರಶಾಂತ ದೇಶಪಾಂಡೆ ಖಡಕ್ ಎಚ್ಚರಿಕೆ ನೀಡಿದರು. ಸಚಿವ ಆರ್.ವಿ. ದೇಶಪಾಂಡೆ ಹಾಗೂ ತಮ್ಮ ಕುಟುಂಬದ ವಿರುದ್ದ ಎಲ್ಲಿಯಾದರೂ ಪ್ರಕರಣಗಳಿವೇ, ದೂರುಗಳಿವೆ ಎಂದು ಸುನೀಲ್ ಹೆಗಡೆ ತೊರಿಸಿ ಕೊಡಲಿ ಎಂದು ಸವಾಲ್ ಎಸೆದ ಪ್ರಶಾಂತ ಕಳೆದ 10-12 ವರ್ಷಗಳಿಂದ ಸುನೀಲ್ ಹೆಗಡೆ ಅವರು ದೇಶಪಾಂಡೆ ಕುಟುಂಬದ ವಿರುದ್ದ ಇಲ್ಲಸಲ್ಲದ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದರು ಸಹಿತ ಸುಮ್ಮನಿದ್ದೇವು ಆದರೇ ಈಗ ಜನಪರ ಸಂಸ್ಥೆಯ ವಿರುದ್ದ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ತುಂಬಾ ನೊವನ್ನುಂಟು ಮಾಡಿರುವ ಕಾರಣ ಇನ್ನೂ ಮೇಲೆ ಸುಮ್ಮನೇ ಕುಳಲು ಸಾಧ್ಯವಿಲ್ಲ ಹೀಗಾಗಿ ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದ್ದಾಗಿ ಅವರು ಸ್ಪಷ್ಟಪಡಿಸಿದರು. ಪತ್ರಿಕಾಗೊಷ್ಠಿಯಲ್ಲಿ ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯ ಕೃಷ್ಣಾ ಪಾಟೀಲ್, ಕಾಂಗ್ರೇಸ್ ಮುಂಡರಾದ ಐಸಿ ಕಾಮಕರ, ಸತ್ಯಜೀತ ಗಿರಿ, ಉಮೇಶ ಬೊಳಶೆಟ್ಟಿ ಇದ್ದರು.
Leave a Comment