• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಶಿಕ್ಷಣದ ಮೌಲ್ಯಗಳನ್ನು ಸಮಾಜದಲ್ಲಿ ಅಳವಡಿಸಿ;ಶ್ರೀ ಮಾರುತಿ ಗುರೂಜಿ

February 17, 2018 by Gaju Gokarna Leave a Comment

 

“ಹೊನ್ನಾವರ ,ಶಿಬಿರದಲ್ಲಿ ಕಲಿತ ಮೌಲ್ಯಗಳನ್ನು ಸ್ವತಃ ಜೀವನದಲ್ಲಿ ತದನಂತರ ಸಮಾಜದಲ್ಲಿ ಅಳವಡಿಸಿದಾಗ ಮಾತ್ರ ಸ್ವಸ್ತ ಸಮಾಜ ನಿರ್ಮಿಸಲು ಸಾಧ್ಯ” ಎಂದು ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳಾದ ಪರಮ ಪೂಜ್ಯ ಶ್ರೀ ಮಾರುತಿ ಗುರೂಜಿಯವರು ಹೇಳಿದರು.
“ವಿದ್ಯಾಪೋಷಕ ಸಂಸ್ಥೆ(ರಿ.)” ಧಾರವಾಡ ಮತ್ತು “ಸಿಲೆಕ್ಟ್ ಫೌಂಡೇಶನ್(ರಿ.)” ಇವರ ಸಂಯುಕ್ತ ಆಶ್ರಯದಲ್ಲಿ ಎಂಡು ದಿನಗಳ ರಾಜ್ಯಮಟ್ಟದ ಕೌಶಲ್ಯಾಭಿವೃದ್ಧಿ ಕಾರ್ಯಗಾರ ((Residential Bridge Camp) ಶಿಬಿರವು ಹೊನ್ನಾವರದ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಸಂಪನ್ನಗೊಂಡಿತು.
ಕರ್ನಾಟಕದ ಆಯ್ದ ಜಿಲ್ಲೆಗಳಲ್ಲಿ ಪದವಿಯನ್ನು ವ್ಯಾಸಾಂಗ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನೀಯರಿಗೆ ಪದವಿಯ ಜೊತೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ದೃಷ್ಟಿಕೋನ ಇಟ್ಟುಕೊಂಡು ವಿವಿಧ ಕ್ಷೇತ್ರದಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿದ್ದ ಸಂಪನ್ಮೂಲ ವ್ಯಕ್ತಿಗಳಿಂದ ಅಭ್ಯಾಸ ಕ್ರಮ, ಸ್ಪರ್ಧಾತ್ಮಕ ಪರೀಕ್ಷೆ, ಸಂವಹನ ಕಲೆ, ವ್ಯಕ್ತಿತ್ವ ವಿಕಸನ, ಪ್ರಸ್ತುತಿ ಕೌಶಲ್ಯಗಳು, ಸೃಜನಶೀಲತೆ, ಭಾವನೆಗಳ ನಿರ್ವಹಣೆ, ಸಂದರ್ಶನ ಕೌಶಲ್ಯಗಳು, ವೃತ್ತಿ ಮಾರ್ಗದರ್ಶನ ಹಾಗೂ ಇನ್ನೀತರ ವಿಷಯಗಳ ಕುರಿತು ಕಾರ್ಯಗಾರಗಳು ನಡೆದವು.
ಎಂಟು ದಿನಗಳ ಕಾರ್ಯಗಾರಕ್ಕೆ ಆಗಮಿಸಿದ್ದ ಶಿಭಿರಾರ್ಥಿಗಳಿಗೆ ಉಳಿಯಲು ವಸತಿ, ಸಭಾಭವನ, ಊಟ, ಉಪಹಾರ, ಪಾನೀಯವನ್ನು ಸಿಲೆಕ್ಟ್ ಫೌಂಡೇಶನ್(ರಿ.) ಶ್ರೀಕ್ಷೇತ್ರ ಬಂಗಾರಮಕ್ಕಿ ಸಂಪೂರ್ಣ ಉಚಿತವಾಗಿ ಒದಗಿಸಿತ್ತು.
ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಲಾದ ಶ್ರೀ ಮಾರುತಿ ಗುರೂಜಿಯವರು ಆಶೀರ್ವಚನ ನೀಡಿ ಶಿಬಿರಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು:
ಆಸೆಗೆ ದಾಸರಾಗಬೇಡಿ. ಗುರಿಗಳಿಗೆ ದಾಸರಾಗಿ. ಗುರಿಯ ಹಿಂದೆ ಬಿದ್ದವರೆಲ್ಲ ಇವತ್ತು ಜೀವನದಲ್ಲಿ ಯಶಸ್ಸಿನ ಮೆಟ್ಟಿಲೇರಿ ನಿಂತಿದ್ದಾರೆ.
ಸಮದ್ರದ ಅಲೆಗಳು ಕಷ್ಟಗಳಿಗೆ ಉತ್ತಮ ಉದಾಹರಣೆ. ಅವು ಒಂದರ ಹಿಂದೆ ಒಂದು ಎಡೆಬಿಡದೆ ರಭಸವಾಗಿ ದಡಕ್ಕೆ ಅಪ್ಪಳಿಸುತ್ತಿರುತ್ತವೆ. ಅಲೆಗಳನ್ನು ಸಮರ್ಥವಾಗಿ ದಾಟಿ ಮುಂದೆ ಹೋದಾಗ ಸಿಗುವ ಸುಖವೇ ಶಾಂತ ಸಮುದ್ರ. ಅಲ್ಲಿ ಸಮುದ್ರ ನಿಶ್ಯಬ್ಧವಾಗಿ ಪ್ರಶಾಂತವಾಗಿ ಇರುತ್ತದೆ ನಿಮ್ಮೆಲ್ಲರ ಜೀವನ ಹಾಗೆಯೇ ಆಗಲಿ ಎಂದು ಹಾರೈಸಿದರು.
ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ “ನಾಗರೀಕ” ಪತ್ರಿಕೆಯ ಮುಖ್ಯ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್ ಹೊನ್ನಾವರ ಮತ್ತು ಸುಬ್ರಹ್ಮಣ್ಯ ಸಂಸ್ಕøತ ಪಾಠಶಾಲೆಯ ನಿವೃತ್ತ ಪ್ರಾಂಶುಪಾಲರಾದ ವಿ.ಜಿ.ಹೆಗಡೆ ಮುಗ್ವ ತಮ್ಮ ಪಾಂಡಿತ್ಯಪೂರ್ಣ ಅಧ್ಯಯನ ಮತ್ತು ಜೀವನಾನುಭವಗಳನ್ನು ಆಗಮಿಸಿದ್ದ 40ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ಧಾರೆ ಎರೆದು ಅವರ ಮುಂದಿನ ಜೀವನಕ್ಕೆ ಹುರಿಗೊಳಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News Tagged With: Residential Bridge Camp, ಅಭ್ಯಾಸ ಕ್ರಮ, ಧರ್ಮಾಧಿಕಾರಿಗಳಾದ, ಧಾರವಾಡ, ಪರಮ, ಪೂಜ್ಯ ಶ್ರೀ ಮಾರುತಿ ಗುರೂಜಿ, ಪ್ರಸ್ತುತಿ ಕೌಶಲ್ಯಗಳು, ಭಾವನೆ, ವಿದ್ಯಾಪೋಷಕ ಸಂಸ್ಥೆ, ವ್ಯಕ್ತಿತ್ವ ವಿಕಸನ, ಶಿಕ್ಷಣದ ಮೌಲ್ಯ, ಶ್ರೀ ಮಾರುತಿ ಗುರೂಜಿ, ಶ್ರೀಕ್ಷೇತ್ರ ಬಂಗಾರಮಕ್ಕಿ, ಸಮಾಜದಲ್ಲಿ ಅಳವಡಿಸಿ, ಸಂವಹನ ಕಲೆ, ಸಿಲೆಕ್ಟ್ ಫೌಂಡೇಶನ್, ಸೃಜನಶೀಲತೆ, ಸ್ಪರ್ಧಾತ್ಮಕ ಪರೀಕ್ಷೆ, ಸ್ವಸ್ತ ಸಮಾಜ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar