ಹಳಿಯಾಳ:
ರಾಜ್ಯ ಸರ್ಕಾರದ ಬಜೇಟ್ನಲ್ಲಿ ಕೃಷಿ ಕ್ಷೇತ್ರಕ್ಕೆ ಅತಿ ಹೆಚ್ಚು ಮಹತ್ವ ನೀಡಿದ ಕಾಂಗ್ರೇಸ್ ಸರ್ಕಾರವೂ ರೈತ ಬೆಳಕು ಎನ್ನುವ ಹೊಸ ಯೋಜನೆ ನೀಡಲು ಮುಂದಾಗಿದ್ದು ಸರ್ಕಾರದ ಎಲ್ಲ ಯೋಜನೆಗಳನ್ನು ಜನತೆಯ ಮನೆ ಬಾಗಿಲಿಗೆ ತಲುಪಿಸಿದ ಸರ್ಕಾರ ನಮ್ಮದಾಗಿದ್ದು ಅಭಿವೃದ್ದಿಗಾಗಿ ಮತ್ತೇ ಕಾಂಗ್ರೇಸ್ ಸರ್ಕಾರಕ್ಕೆ ಜನಮನ್ನಣೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಮನವಿ ಮಾಡಿದರು. ತಾಲೂಕಿನ ತೇರಗಾಂವ ಗ್ರಾಮದಲ್ಲಿ 13ನೇ ಹಣಕಾಸು ಯೋಜನೆಯಡಿಯಲ್ಲಿ ನೂತನವಾಗಿ ನಿರ್ಮಿಸಲಾದ ಪ್ರೌಢಶಾಲೆಗಳ ಕೊಠಡಿಗಳು, ಹಾಗೂ 2015-16ನೇ ಸಾಲಿನ ರಾಜ್ಯ ವಲಯ ಯೋಜನೆಯಡಿಯಲ್ಲಿ ಮಂಜೂರಾದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗಳ ನೂತನ ಕೊಠಡಿಗಳ ಉದ್ಘಾಟನೆ, ವ್ಯಾಯಮ ಶಾಲೆಯ ಭೂಮಿ ಪೂಜೆ, ಜಿಲ್ಲೆಯ ಪ್ರಥಮ 36 ಮಳಿಗೆಗಳ ಹಳ್ಳಿ ಸಂತೆ ಕಟ್ಟಡ, ಅಂದಾಜು 5ಲಕ್ಷದ ಮೀನು ಮಾರುಕಟ್ಟೆಯ ಉದ್ಘಾಟನೆ ನೆರವೆರಿಸಿ ಸಚಿವರು ಮಾತನಾಡಿದರು. ಕಳೆದ ನಾಲ್ಕು ವರ್ಷಗಳಲ್ಲಿ ಶಿಕ್ಷಣ, ಆರೋಗ್ಯ, ಹಾಗೂ ಜನಪರ ಯೋಜನೆಗಳಿಗೆ ಸರ್ಕಾರ ಅಪಾರ ಪ್ರಮಾಣದ ಮಹತ್ವ ನೀಡಿದೆ ಹಾಗೂ ಜನತೆಯ ಬೇಡಿಕೆಯ ಪ್ರಕಾರ ಸರ್ಕಾರದ ಯೋಜನೆಗಳು ಈ ಭಾಗದಲ್ಲಿ ಶೇ.95ರಷ್ಟು ಪೂರ್ಣಗೊಂಡಿದೆ, ಶಿಕ್ಷಣ ಕ್ಷೇತ್ರಕ್ಕೆ ಕಳೆದ ನಾಲ್ಕುವರೆ ವರ್ಷದಲ್ಲಿ ಈ ಭಾಗಕ್ಕೆ 21ಕೊಟಿ ನೀಡಲಾಗಿದೆ ಎಂದರು. 19ಲಕ್ಷ 60ಸಾವಿರ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ನೀಡಲಿದ್ದೆವೆ. ವಿದ್ಯಾರ್ಥಿನಿಯರಿಗೆ ಸ್ನಾತಕೊತ್ತರ ಪದವಿಯ ಉನ್ನತ ಶಿಕ್ಷಣದವರೆಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಹೇಳಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸಂತೋಷ ರೇಣಕೆ, ಗ್ರಾಮ ಪಂಚಾಯತ್ ಅಧ್ಯಕ್ಷ ಬಸವರಾಜ ಲಕ್ಕನಗೌಡ್ರು, ತಾ.ಪಂ ಆಧ್ಯಕ್ಷೆ ರೀಟಾ ಸಿದ್ದಿ, ಉಪಾಧ್ಯಕ್ಷೆ ನಿಲವ್ವಾ ಮಡಿವಾಳ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಸ ಕೊರ್ವೆಕರ, ಎಸ್ಡಿಎಮ್ಸಿ ಅಧ್ಯಕ್ಷ ಅರುಣ ಕಕ್ಕೇರಿ, ತಹಶೀಲ್ದಾರ ವಿದ್ಯಾಧರ ಗುಳುಗುಳಿ, ತಾ.ಪಂ ಇಒ ಲಕ್ಷ್ಮಣರಾವ್ ಯಕ್ಕುಂಡಿ, ಹೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿ ರವಿಂದ್ರ ಮೆಟಗುಡ್, ಕ್ಷೇತ್ರ ಶಿಕ್ಷಣಾಧಿಕಾರಿ ಇತರರು ಇದ್ದರು.
Leave a Comment