ಹಳೀಯಾಳ:-
ತಾಲೂಕಿನ ಚಿಬ್ಬಲಗೇರಿ ಗ್ರಾಮದ ಗ್ರಾಮದೇವಿ ದೇವಸ್ಥಾನದ ನೂತನ ಕಟ್ಟಡ ನಿರ್ಮಿಸುವ ಕಾರ್ಯಕ್ಕೆ ಸಚಿವ ಆರ್.ವಿ.ದೇಶಪಾಂಡೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಗ್ರಾಮದೇವಿ ದೇವಸ್ಥಾನವು 25-30 ವರ್ಷದ ಹಿಂದೆ ಕಟ್ಟಿದ್ದು, ಈ ದೇವಸ್ಥಾನಕ್ಕೆ ಶ್ರಮಿಸಿದ ಹಿರಿಯರನ್ನು ನೆನೆಸಿ ದೇವಸ್ಥಾನದ ಜೀರ್ಣೋಧ್ದಾರ ಮಾಡಿ ನೂತನ ದೇವಸ್ಥಾನ ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಗುತ್ತಿಗೆದಾರರು ದೇವಸ್ಥಾನವನ್ನು ಆದಷ್ಟೂ ಶೀಘ್ರವಾಗಿ ಕಟ್ಟಿಕೊಡಬೇಕು, ಸರ್ಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ನೀಡಲಾಗುವುದು ಹಾಗೂ ವೈಯಕ್ತಿಕವಾಗಿ 5 ಲಕ್ಷ ರೂ. ನೀಡುವುದಾಗಿ ಘೊಷಿಸಿದರು. ಸಚಿವರ ಪತ್ನಿ ರಾಧಾಬಾಯಿ ದೇಶಪಾಂಡೆ ಮಾತನಾಡಿ ಶ್ರೀದೇವಿ ಗ್ರಾಮದ ಜನರಿಗೆ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ನೀಡಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಮಹಿಳೆಯವರು ರಾಧಾ ದೇಶಪಾಂಡೆಯವರಿಗೆ ಸನ್ಮಾನಿಸಿದರು. ವೇದಿಕೆಯ ಮೇಲೆ ಸಂಭಾಜಿ ಎಚ್. ಹಳಿಯಾಳಕರ, ಪ್ರಕಾಶ ಪಾಕರೆ, ಅರ್ಜುನ ಗೌಡಾ, ತುಕಾರಾಮ ಬಾಳೇಕುಂದ್ರಿ, ಬಸವಂತ ಎಳಗುಕರ, ರಾಮಾ ಬುತ್ತೇವಾಡಕರ, ಚಂದ್ರಕಾಂತ ಮಿರಾಶಿ, ಪರಶುರಾಮ ರಾವುತ, ಲಕ್ಷ್ಮಣ ಹುಂದಳೇಕರ, ಚಂದ್ರಕಾಂತ ಮಾಚಕ, ಗಾವಡು ಗೌಡಾ, ಪಕೀರ ಶಿಂಧೆ, ಸಹದೇವ ಗೌಡಾ, ನಂದಾ ಬಾಳೇಕುಂದ್ರಿ, ನಾಗೇಂದ್ರ ಇದ್ದರು. ಕಾರ್ಯಕ್ರಮವನ್ನು ಬಾಳು ಮಿರಾಶಿ, ಅಶೋಕ ಶೀಂಧೆ ನಿರ್ವಹಿಸಿದರು.
Leave a Comment