ಹಳಿಯಾಳ:
ಅಪ್ರತಿಮ ದೇಶಭಕ್ತ ಸಕಲ ಸಮಾಜದವರನ್ನು ಪ್ರೀತಿಸಿ ದೇಶ ಸೇವೆಗೆ ಅಣಿಗೊಳಿಸುತ್ತಿದ್ದ ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಮರಾಠ ಸಮಾಜಕ್ಕೆ ಸಿಮಿತವಾಗಿರಲಿಲ್ಲಾ ಪ್ರಸ್ತುತವಾಗಿಯೂ ಅವರು ಎಲ್ಲ ಸಮಾಜದವರಿಗೂ ಆದರ್ಶವಾಗಿರುವ ದೇಶಾಭಿಮಾನಿ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠ ಪರಿಷತ್ ಅಧ್ಯಕ್ಷರ ಎಸ್.ಎಲ್.ಘೋಟ್ನೇಕರ ಹೇಳಿದರು. ಪಟ್ಟಣದಲ್ಲಿ ಕ್ಷತ್ರೀಯ ಮರಾಠಾ ಪರಿಷತ್ನಿಂದ ನಡೆದ ಛತ್ರಪತಿ ಶಿವಾಜಿರಾವ್ ಶಹಾಜಿರಾವ್ ಬೋಸಲೆ ಮಹಾರಾಜರ 391 ನೇ ಜಯಂತ್ಯೋತ್ಸವ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ದೇಶದ್ರೋಹಿಗಳಿಗೆ ಸಿಂಹಸ್ವಪ್ನರಾಗಿದ್ದ ಶಿವಾಜಿ ಆದರ್ಶ, ದೇಶಾಭಿಮಾನ ಎಲ್ಲರೂ ಪಾಲಿಸಿದರೇ ಸದೃಢ ಭಾರತ ನಿರ್ಮಾಣ ಸಾಧ್ಯ ಅವರು ಅಭಿಪ್ರಾಯಿಸಿದರು. ತಾಲೂಕಿನ ಕೆ.ಕೆ ಹಳ್ಳಿ ಗ್ರಾಮ ನಿತ್ಯಾನಂದ ಆಶ್ರಮ ಶ್ರೀ ಸುಬ್ರಮಣ್ಯ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ ಯುವಕರು ಆದಷ್ಟು ದುಶ್ಚಟಗಳಿಂದ ದೂರವಿರಬೇಕೆಂದು ಕರೆ ನೀಡಿದರು. ದಾಂಡೇಲಿ ಆರ್ಎಸ್ಎಸ್ ಜಿಲ್ಲಾ ಸೇವಾ ಪ್ರಮುಖ ಅರ್ಜುನ ನಾಯ್ಕ ಹಲವಾರು ದೃಷ್ಟಾಂತಗಳ ಮೂಲಕ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆಯ ಬಗ್ಗೆ ಉಪನ್ಯಾಸ ನೀಡಿದರು. ಉತ್ಸವದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಯಲ್ಲಿ ವಾದ್ಯ ವೃಂದದೊಡನೆ ಅಶ್ವಾರೂಢ ಶಿವಾಜಿ ಪುತÀ್ಥಳಿಯ ಮೆರವಣಿಗೆ ನಡೆಸಲಾಯಿತು. ಶಿವಾಜಿ ವೃತ್ತದಲ್ಲಿರುವ ಶಿವಾಜಿ ಪುತ್ಥಳಿಗೆ ಹಾಗೂ ಗ್ರಾಮೀಣ ಭಾಗದಲ್ಲಿ ಪುರುಷರು, ಮಹಿಳೆಯರು, ಯುವಕ/ಯುವತಿಯರು, ಮಕ್ಕಳು ಸೇರಿಕೊಂಡು ಬಾಲಶಿವಾಜಿಯ ತೊಟ್ಟಿಲನ್ನು ತೂಗುವ ಮೂಲಕ ಹಾಗೂ ಪಟ್ಟಣದಲ್ಲಿರುವ ಶಿವಾಜಿ ಪುಥ್ಥಳಿಗೆ ಎಲ್ಲಾ ರಾಜಕೀಯ ಮುಖಂಡರು, ಸಂಘ ಸಂಸ್ಥೆಗಳ ಪ್ರಮುಖರು, ಪಧಾಧಿಕಾರಿಗಳು ಮಾಲಾರ್ಪನೆ ಮಾಡಿ ಗೌರವ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಎ.ಪಿ.ಎಂ.ಸಿ. ಅಧ್ಯಕ್ಷ ಶ್ರೀನಿವಾಸ ಘೋಟ್ನೆಕರ, ಪ್ರಮುಖರಾದ ಉಡಚಪ್ಪಾ ಬೋಬಾಟಿ, ಶಂಕರ ಬೆಳಗಾಂವಕರ, ಬಿ ಡಿ ಚೌಗಲೆ, ಎಲ್ .ಎಸ್ ಅರಿಶೀಣಗೇರಿ, ಜೀವಪ್ಪಾ ಭಂಡಾರಿ, ಮಂಗಲಾ ಕಶೀಲಕರ, ವಜ್ರೆಶ್ವರಿ ಶೇಟವಣ್ಣವರ, ಭಾರತಿ ಘೆವಡಿ, ರವಿದಾಸ, ಮಂಜುನಾಥ ಅಳ್ನಾವರಕರ, ಬಾಳಕೃಷ್ಣ ಶಹಾಪೂರಕರ, ಗೋವಿಂದ ದಲಾಲ, ಅನೀಲ ಚವ್ಹಾಣ, ಆರ್.ಎಸ್ ಅರಿಶೀಣಗೇರಿ, ದೇಮಾಣಿ ವಾಡಕರ, ಅಪ್ಪರಾವ ಪೂಜಾರಿ, ಯಲ್ಲಪ್ಪಾ ಮಾಲವಣ್ಣಕರ, ಗಣಪತಿ ಬೇಕಣಿ, ಭಾರತಿ ನಲವಡೆ ಇತರರು ಇದ್ದರು.
Leave a Comment