ಹಳಿಯಾಳ :- ಫೆ.25 ರಂದು ರವಿವಾರ ರಾತ್ರಿ ಹಳಿಯಾಳ ಪಟ್ಟಣದ ಗ್ರಾಮದೇವಿ ಮೈದಾನದ ವೇದಿಕೆಯಲ್ಲಿ ರಾಷ್ಟ್ರಪುರುಷ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರ್ಯೆ ಆಧಾರಿತ ಐತಿಹಾಸಿಕ ಕನ್ನಡ ನಾಟಕ ಪ್ರದರ್ಶನ ನಡೆಯಲಿದೆ ಎಂದು ನಾಟಕ ಪ್ರದರ್ಶನ ಸಂಘದ ಅಧ್ಯಕ್ಷ ಹಾಗೂ ಶಿವಾಜಿ ಪಾತ್ರಧಾರಿ ಅರುಣ ಗೋಂಧಳೆ ತಿಳಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ಹಳಿಯಾಳದ ಸ್ನೇಹಾ ಮಧುರನಾದ ಹವ್ಯಾಸಿ ಸಂಗೀತ ಮತ್ತು ನಾಟಕ ಕಲಾವಿದರ ಸಂಘದಲ್ಲಿರುವ ತಾಲೂಕಿನ ಹವ್ಯಾಸಿ ಕಲಾವಿದರು ಛತ್ರಪತಿ ಶಿವಾಜಿ ಜೀವನ ಚರಿತ್ರ್ಯೆಯನ್ನು ರಂಗ ಸಜ್ಜಿಕೆಯಲ್ಲಿ ಪ್ರದರ್ಶಿಸಲಿದ್ದಾರೆ. ಶಿವಾಜಿ ಜೀವನ ಚರಿತ್ರ್ಯೆಯ ಐತಿಹಾಸಿಕ ಕ್ರಾಂತಿಕಾರಿ ಕನ್ನಡ ನಾಟಕವನ್ನು ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ವೀಕ್ಷಕರು ಆಗಮಿಸುವ ನೀರಿಕ್ಷೆಯಿದ್ದು ನಾಟಕ ನೋಡಲು ಪ್ರೇಕ್ಷಕರಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ ಎಂದರು. ಈ ನಾಟಕ ಪ್ರದರ್ಶಿಸುವ ಸಂಘಟನೆಯ ಅಧ್ಯಕ್ಷರು ಆಗಿರುವ ಅರುಣ ಗೋಂಧಳೆ ಶಿವಾಜಿ ಪಾತ್ರ ನಿರ್ವಹಿಸಲಿದ್ದಾರೆ. ಶಿವಾಜಿ ಜೀವನ ಚರಿತ್ರ್ಯೆಯನ್ನು ಕನ್ನಡದಲ್ಲಿ ನಾಟಕ ರೂಪದಲ್ಲಿ ಬರೆದಿರುವ ಪಾತ್ರಧಾರಿಯೂ ಆಗಿರುವ ಅನಿಲ ಭದ್ರಿ ತೇರಗಾಂವ ಹಾಗೂ ಪ್ರತಿಭಾವಂತ ಕಲಾವಿದರು ಭಾಗವಹಿಸಲಿದ್ದಾರೆ. ಸಚಿವ ಆರ್.ವಿ.ದೇಶಪಾಂಡೆ ನಾಟಕ ಸಮಾರಂಭವನ್ನು ಉಧ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅಧ್ಯಕ್ಷತೆ ವಹಿಸಲಿದ್ದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ, ವೇದಾಂತ ಆಚಾರ್ಯ ಮಂಜುನಾಥ ಮಹಾರಾಜ, ಜೀಜಾಮಾತಾ ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ಮಂಗಲಾ ಕಶೀಲಕರ, ಎಪಿಎಮ್ಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ ಮೊದಲಾದ ಗಣ್ಯರು ಕಾರ್ಯಕ್ರಮ ಉಧ್ಘಾಟನೆಯಲ್ಲಿ ಉಪಸ್ಥಿತರಿರುವರು.
Leave a Comment