ಹೊನ್ನಾವರ, ಪಾರೆಸ್ಟ ಕಾಲೋನಿಯಲ್ಲಿರುವ ಲಾಯನ್ಸ ಸಭಾ ಭವನದಲ್ಲಿ ರೀಜನ್ನಿನ 10 ಲಾಯನ್ಸ ಕ್ಲಬ್ ಒಳಗೊಂಡ ರೀಜನ್ ಮೀಟ್ ಸಮಾರಂಭ ನಡೆಯಿತು. ಹೊನ್ನಾವರ, ಪಾರೆಸ್ಟ ಕಾಲೋನಿಯಲ್ಲಿರುವ ಲಾಯನ್ಸ ಸಭಾ ಭವನದಲ್ಲಿ ರೀಜನ್ನಿನ 10 ಲಾಯನ್ಸ ಕ್ಲಬ್ ಒಳಗೊಂಡ ರೀಜನ್ ಮೀಟ್ ಸಮಾರಂಭ ನಡೆಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಹಾಸನದ ಹಿಂದಿನ ಗವರ್ನರ್ À ಅಡ್ವೊಕೇಟ್ ಲಾ. ಎಚ್. ಎಸ್. ಮಂಜುನಾಥ ಮೂರ್ತಿ ಮಾತನಾಡಿ ಜೀವಿಗಳಿಗೆ ಶುದ್ಧ ಗಾಳಿ ಅತಿಮುಖ್ಯ. ಗಿಡಗಳಿಂದ ತುಂಬಿದ ವಾತಾವರಣದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಸೇವೆಯ ಸಂತೋಷ ಬೇರೆ ಯಾವುದರಿಂದಲೂ ಸಿಗುವುದಿಲ್ಲ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ À ಗವರ್ನರ್ ಲಯನ್. ಡಾ.ರವಿ ಹೆಗಡೆ ಮಾತನಾಡಿ ಫಲಾಪೇಕ್ಷೆ ಇಲ್ಲದ ಸೇವೆಯೇ ನಿಜವಾದ ಸೇವೆ. ¯ಯನ್ ಅಂತರ ರಾಷ್ಟ್ರೀಯ ಸಂಸ್ಥೆ ನಡೆಸುತ್ತಿರುವ ಸೇವಾ ಚಟುವಟಿಕೆಗಳಿಗೆ ಜಾಗತಿಕ ಮನ್ನಣೆ ಇದೆ ಎಂದು ಹೇಳಿದರು. ಅತಿಥಿಗಳಾಗಿ À ಗವರ್ನರ್ ಲಯನ್. ಗಣಪತಿ ನಾಯಕ ಮಾತನಾಡಿ ಶುಭಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರೀಜನ್ ಚೇರ್ಪರ್ಸನ್ ಲಯನ್ ಗೋಪಾಲಕೃಷ್ಣ ಬಿಂದಗಿ ಮಾತನಾಡಿ ಲಯನ್ ಸಂಸ್ಥೆಯು ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿ ಸಮುದಾಯದ ಅಭಿವೃದ್ಧಿಯಲ್ಲಿ ಸಹಕರಿಸುವುದಾಗಿ ಕಾರ್ಯಕ್ರಮದಲ್ಲಿ ಸಹಕರಿಸಿದ ಎಲ್ಲರಿಗೆ ಧನ್ಯವಾದ ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸಿರ್ಸಿ,ಅಂಕೋಲಾ, ಗೋಕರ್ಣ ಮತ್ತು ಹೊನ್ನಾವರದ 7 ಹಿರಿಯ ಸದಸ್ಯರಿಗೆ ಅವರ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಲಾ. ಎಸ್. ಜೆ.ಕೈರನ್ನ, ಲಾ. ವಸಂತ ಪ್ರಭು, ಲಾ. ಶಾಂತರಾಮ ನಾಯ್ಕ ಬೇರೆ ಕ್ಲಬ್ಗಳ ಅಧ್ಯಕ್ಷರುಗಳಾದ ಲಾ.ಶಶಿಧರ ಶೇಣ್ವಿ, ಲಾ.ಗಣೇಶ ಶೇಖ, ಲಾ.ಮೀರಾ ನಾಯಕ, ಲಾ. ಮಂಜುನಾಥ ನಾಯ್ಕ, ಲಾ. ಜ್ಯೋತಿ ಭಟ್, ಲಾ.ಬಿಂದು ಹೆಗಡೆ, ಲಾ.ಪ್ರಭಾಶಂಕರ ಹೆಗಡೆ, ಲಾ.ರೋಷನ್ ರೇವಣಕರ, ಲಾ.ಅಲ್ತಾಪ್ ಶೇಖ್ ಇದ್ದರು. ಹೊನ್ನಾವರ ಲಾಯನ್ಸ ಕ್ಲಬ್ ಅಧ್ಯಕ್ಷರಾದ ಲಾ.ದೇವಿದಾಸ ಮಡಿವಾಳ ಸ್ವಾಗತಿಸಿದರು. ಕಾರ್ಯದರ್ಶಿ ಲಾ. ಪ್ರದೀಪ ಶೆಟ್ಟಿ ವಂದಿಸಿದರು. ಲಾ. ಡಿ.ಎಲ್.ಹೆಬ್ಬಾರ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಬೆಂಗಳೂರು, ರಾಮದುರ್ಗ, ಹಾವೇರಿ, ಗೋವಾದಿಂದ ಬಂದ ಸದಸ್ಯರು ಹೊನ್ನಾವರ ಲಾಯನ್ಸ ಸದಸ್ಯರು ಕುಟುಂಬ ವರ್ಗದವರು ಹಾಜರಿದ್ದರು.
Leave a Comment