ಹೊನ್ನಾವರ:
ರಾಜ್ಯಾದ್ಯಂತ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಕಗ್ಗೊಲೆಯನ್ನು ಖಂಡಿಸಿ ಜನಸುರಕ್ಷಾ ಯಾತ್ರೆ ಹಮ್ಮಿಕೊಳ್ಳಲಾಗಿದ್ದು ಮಾರ್ಚ 4 ರಂದು ತಾಲೂಕಿನಲ್ಲಿ ಪಾದಯಾತ್ರೆ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಸುಬ್ರಾಯ ನಾಯ್ಕ ಹೇಳಿದರು.ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳಿಗ್ಗೆ 10 ಗಂಟೆಗೆ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಪಟ್ಟಣದ ಶರಾವತಿ ಸರ್ಕಲ್ ಬ್ರಹತ್ ಶೋಭಾಯಾತ್ರೆ ಆರಂಭವಾಗಲಿದ್ದು, ದುರ್ಗಾಕೇರಿಯ ಶ್ರೀ ದಂಡಿನದುರ್ಗಾ ದೇವಸ್ಥಾನ ಮಾರ್ಗವಾಗಿ ಬಜಾರರಸ್ತೆ ಮೂಲಕ ಪರೇಶ ಮೇಸ್ತ ಸರ್ಕಲ್ ಮಾರ್ಗವಾಗಿ ತೆರಳಿ ಪ್ರಭಾತನಗರದ ಶ್ರೀ ಮೂಡಗಣಪತಿ ದೇವಸ್ಥಾನ ಸಭಾಭವನದಲ್ಲಿ ಸಭಾಕಾರ್ಯಕ್ರಮ ನಡೆಸಲಾಗುವುದು. ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯ ಉಸ್ತುವಾರಿ ಪ್ರಕಾಶ ಜಾವಡೇಕರ್, ಸಂಘಟನಾ ಕಾರ್ಯದರ್ಶಿ ಸಂತೋಷಜೀ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಹಾಗೂ ಪಕ್ಷದ ಮುಖಂಡರು ಈ ಕಾರ್ಯಕ್ರಮದ ನೇತೃತ್ವವ ವಹಿಸಲಿದ್ದಾರೆ ಎಂದರು. ಜಿಲ್ಲಾ ಹಿಂದುಳಿದ ಮೋರ್ಚಾದ ಕಾರ್ಯದರ್ಶೀ ವಿನೋದ ನಾಯ್ಕ ರಾಯಲಕೇರಿ ಮಾತನಾಡಿ ಈಗಿನ ಬ್ರಷ್ಟ ಕಾಂಗ್ರೆಸ ಸರ್ಕಾರದ ಮೇಲೆ ಸಾರ್ವಜನಿಕರಿಗೆ ನಂಬಿಕೆ ಇಲ್ಲದಂತಾಗಿದೆ. ರಾಜ್ಯದಲ್ಲಿ ಹಿಂದೂಗಳ ಮೇಲೆ ಸರ್ಕಾರ ದಬ್ಬಾಳಿಕೆ ನಡೆಸುತ್ತಿದ್ದು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಸಿದ್ದರಾಮಯ್ಯ ಸರ್ಕಾರದ ಕಾನೂನು ವ್ಯವಸ್ಥೆ ಸಂಪೂರ್ಣ ಹದಗ್ಗೆಟ್ಟಿದ್ದು, ಪರೇಶ ಮೇಸ್ತ ಸಾವಿಗೆ ಸ್ಥಳಿಯ ಶಾಸಕರಿಬ್ಬರು ನೇರ ಕಾರಣರಾಗಿದ್ದಾರೆ. ಕೊಲೆಗಡುಕರ ನಂಬರ್ 1 ರಾಜ್ಯ ಸರ್ಕಾರ ಇದಾಗಿದೆ. ನಮ್ಮನ್ನು ನಾವೂ ರಕ್ಷಣೆ ಮಾಡಿಕೋಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಲೋಕೇಶ ಮೇಸ್ತ ಮಾತನಾಡಿ ಈ ಜನಸುರಕ್ಷಾ ಯಾತ್ರೆ ಯಶಸ್ವಿಗೊಳಿಸಲು ಹಿಂದೂ ಬಂಧುಬಗಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ರಾಜಕೀಯ ಹೋರಾಟಕ್ಕಿಂತ ಇದು ಎಲ್ಲರ ಭಾವನಾತ್ಮಕ ಹೋರಾಟವಾಗಿದೆ ಎಂದರು ಮುಖಂಡರಾದ ವೆಂಕಟ್ರಮಣ ಹೆಗಡೆ, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ರಾಜು ಭಂಡಾರಿ, ಮಂಜುನಾಥ ನಾಯ್ಕ, ಖಜಾಂಚಿ ಗಣೇಶ ಪೈ, ಯುವ ಮೋರ್ಚಾ ಅಧ್ಯಕ್ಷ ದೀಪಕ ಶೇಟ್, ಎಪಿಎಂಸಿ ಸದಸ್ಯ ಪರಮೇಶ್ವರ ನಾಯ್ಕ, ಎಂ.ಎಸ್.ಹೆಗಡೆ ಕಣ್ಣಿ, ಸುಬ್ರಹ್ಮಣ್ಯ ಶಾಸ್ತ್ರಿ, ಸುರೇಶ ಸಾರಂಗ, ದತ್ತಾತ್ರೇಯ ಮೇಸ್ತ ಇತರರು ಉಪಸ್ಥಿತರಿದ್ದರು.
Leave a Comment