ಹಳಿಯಾಳ ; ಕೆನರಾ ಸಂಸದ, ಸಚಿವ ಅನಂತಕುಮಾ ಹೆಗಡೆಗೆ ತಾಕತ್ತಿದ್ದರೇ ಹಳಿಯಾಳ-ವಿಧಾನಸಭಾ ಕ್ಷೇತ್ರದಲ್ಲಿ ಬಂದು ಸ್ಪರ್ಧಿಸಿ ಗೆದ್ದು ತೋರಿಸಲಿ ಒಂದಾನುವೇಳೆ ಅವರು ಗೆದ್ದರೇ ತಾವು ತಮ್ಮ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಅವರು ಸೋತರೇ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಬಹಿರಂಗ ಸವಾಲ್ ಹಾಕಿದ್ದಾರೆ. ಪಟ್ಟಣದ ತಮ್ಮ ಎಮ್.ಎಲ್.ಸಿ. ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಬರಿ ಪತ್ರಿಕಾ, ಪೇಪರ್ ರಾಜಕಾರಣ ಹಾಗೂ ಪೊಳ್ಳು ಭರವಸೆಗಳ ಸರದಾರರಾಗಿರುವ ಅನಂತಕುಮಾರ 25 ವರ್ಷ ಸಂಸದರಾಗಿ ಜಿಲ್ಲೆಗೆ ಯಾವ ಕೊಡುಗೆ ನೀಡಿದ್ದಾರೆ ಅವರು ಮಾಡಿರುವ ಅಭಿವೃದ್ದಿ ಆದರೂ ಎನು ಎಂದು ಬಹಿರಂಗ ಪಡಿಸಲಿ ಎಂದರು. ರಾಜ್ಯದಲ್ಲಿ ಮತ್ತೇ ಕಾಂಗ್ರೇಸ್ ಆಡಳಿತ ನಡೆಸಲಿದ್ದು ಕಾಂಗ್ರೇಸ್ನ ಅಭಿವೃದ್ದಿ ಕಾರ್ಯಗಳು ಜನರಲ್ಲಿ ಸಂತೃಪ್ತಿ ತಂದಿದ್ದು ರಾಜ್ಯದಲ್ಲಿ ಮತ್ತೇ ಕಾಂಗ್ರೇಸ್ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದರು. ರಾಜ್ಯದ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಹೇಳಿಕೆ ನೀಡುವುದರ ಮೂಲಕ ಅವರನ್ನು ರಾಷ್ಟ್ರ ನಾಯಕರನ್ನಾಗಿ ಮಾಡಿದ್ದಾರೆ. ಬಿಜೆಪಿ ಮತ್ತು ಕೇಂದ್ರ ಸಚಿವ ಅನಂತಕುಮಾರ ಅವರು ಸತ್ತವರ ಮೇಲೆ ರಾಜಕಾರಣ ಮಾಡುತ್ತಿದ್ದಾರೆ ಹೊರತು ಅಭಿವೃದ್ದಿ ಮಾತಿಲ್ಲ ಎಂದು ಆಪಾದಿಸಿದ ಅವರು ಅನಂತಕುಮಾರ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಪ್ರತಿ ಬಾರಿ ಹಗುರವಾಗಿ ಮಾತನಾಡುತ್ತಿರುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ ಮೊದಲು ನಮ್ಮ ಸವಾಲನ್ನು ಸ್ವೀಕರಿಸಿ ಬಳಿಕ ಸಿಎಂ ಅವರ ಬಗ್ಗೆ ಮಾತನಾಡಲಿ ಎಂದು ಆಕ್ರೊಶದಿಂದ ನುಡಿದರು. ಬಿಜೆಪಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವೇ ಇಲ್ಲ. ದಿನದಿಂದ ದಿನಕ್ಕೆ ಚುನಾವಣೆಯ ಕಾವು ಎರುತ್ತಿದೆ. ಬಿಜೆಪಿ ಜನರಕ್ಷಾ ಯಾತ್ರೆ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಆದರೆ ಜನರು ಇದನ್ನು ಸೂಕ್ಷ್ಮವಾಗಿ ಅರಿತಿದ್ದು ಅವರಿಗೆ ಚುನಾವಣೆಯ ಸಮಯದಲ್ಲಿ ತಕ್ಕ ಉತ್ತರವನ್ನು ನೀಡಲಿದ್ದಾರೆ. ಅಧಿಕಾರದ ಆಶೆಗಾಗಿ ಅವರು ಯಾತ್ರೆಯನ್ನು ಮಾಡುತ್ತಿದ್ದಾರೆಯೇ ಹೊರತು ಜನರು ಕುರಿತು ಅವರಿಗೆ ನಿಜವಾದ ಕಾಳಜಿ ಇಲ್ಲವೆಂದರು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವಾರು ಜನಪ್ರಿಯ ಯೋಜನೆಗಳ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ.ಸಚಿವ ಅನಂತಕುಮಾರ ಅವರು ಜನರ ಮನಸ್ಸಿನ ನಡುವ ಸಂಘರ್ಷ ಎರ್ಪಡಿಸುವುದರ ಮೂಲಕ ದ್ವೇಷ ಭಾವನೆಗಳನ್ನು ಕೆರಳಿಸಲು ಯತ್ನಿಸುತ್ತಿದ್ದಾರೆ. ಪೊಳ್ಳು ಘೋಷಣೆ, ಭಾಷಣ ಮತ್ತು ಹೇಳಿಕೆಗಳಲ್ಲಿಯೇ ಅನಂತಕುಮಾರ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೆಕರ, ಜಿಲ್ಲಾ ವಕ್ರ್ಷ್ ಬೋರ್ಡನ ಅಧ್ಯಕ್ಷ ಖಯ್ಯಾಂ ಮುಗದ, ಪುರಸಭೆ ಸದಸ್ಯೆ ಮಾಲಾ ಬ್ರಿಗಾಂಜಾ ಇದ್ದರು.
Leave a Comment