ಹಳಿಯಾಳ: ಹಳಿಯಾಳ ಕ್ಷೇತ್ರದಲ್ಲಿ ವಿ.ಪ.ಸದಸ್ಯರಾಗಿರುವ ಎಸ್.ಎಲ್.ಘೋಟ್ನೇಕರ ರವರು ಕಾಂಗ್ರೆಸ ಪಕ್ಷದಿಂದ ವಿಧಾನ ಸಭಾ ಚುನಾವಣೆಗೆ ಸ್ಫರ್ಧಿಸಿದರೆ ಖಂಡಿತವಾಗಿಯೂ ಹಳಿಯಾಳ ಬಿಜೆಪಿ ವತಿಯಿಂದ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆಯವರನ್ನು ಘೊಟ್ನೇಕರ ವಿರುದ್ಧ ಸ್ಪರ್ದೆಗೆ ನಿಲ್ಲಿಸಲು ತಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಘೊಟ್ನಕರ ಅವರ ಸವಾಲನ್ನು ಹಳಿಯಾಳ ಬಿಜೆಪಿ ಘಟಕ ಸ್ವಾಗತಿಸುತ್ತದೆ ಎಂದು ಹಳಿಯಾಳ ಬಿಜೆಪಿ ಪಕ್ಷ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ ತಿರುಗೇಟು ನೀಡಿದ್ದಾರೆ. ಪಟ್ಟಣದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಎಸ್.ಎಲ್. ಘೋಟ್ನೇಕರ ಕೇಂದ್ರ ಮಂತ್ರಿ ಅನಂತ ಕುಮಾರ ಹೆಗಡೆಯವರ ಬಗ್ಗೆ ಮಾಡಿದಂತಹ ಧಂ ಇದ್ರೆ ಹಳಿಯಾಳ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂಬ ಆಹ್ವಾನವನ್ನು ಸ್ವಾಗತಿಸುತ್ತೇವೆ ಎಂದಿರುವ ಅವರು ಘೋಟ್ನೇಕರ ಅವರು ಮೊದಲು ಸ್ಪರ್ಧೇ ಮಾಡುವುದರ ಬಗ್ಗೆ ಘೋಷಣೆ ಮಾಡಲಿ ಇಲ್ಲದೇ ಸುಖಾಸುಮ್ಮನೆ ಕೇಂದ್ರ ಮಂತ್ರಿಯವರ ವಿರುದ್ಧ ಆರೋಪಗಳನ್ನು ಮಾಡುವುದನ್ನು ಬಿಟ್ಟು, ತಮ್ಮ ಜವಾಬ್ದಾರಿಗಳನ್ನು ತಿಳಿದುಕೊಂಡು ಮಾತನಾಡಲಿ ಎಂದು ನರಸಾನಿ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದು, ಜಿಲ್ಲಾ ಉಸ್ತುವಾರಿ ಮಂತ್ರಿ ಆರ್. ವ್ಹಿ. ದೇಶಪಾಂಡೆಯವರು ಸ್ಥಳೀಯ ಎಮ್.ಎಲ್.ಎ ಅವರು ಇರುವುದರಿಂದ ಎಮ್.ಎಲ್.ಸಿ.ಯವರು ಆಡಳಿತ ಕಾಂಗ್ರೆಸ್ ಪಕ್ಷದ ಭಾಗವಾಗಿದ್ದು, ಹಳಿಯಾಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಂದಾಗ ಮರಾಠಾ ಸಮಾಜದ ಮೀಸಲಾತಿಯ ಬಗ್ಗೆ ಒಂದು ಶಬ್ದವೂ ಮಾತನಾಡದೇ ಇರುವುದರಿಂದ ಎಮ್.ಎಲ್.ಸಿಯವರು ಮರಾಠಾ ಸಮಾಜದ ಬಗ್ಗೆ ತಾಳಿದಂತಹ ಕಾಳಜಿ ತಿಳಿಯುತ್ತದೆ. ಅದೇ ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿಯವರಾದ ಯಡಿಯೂರಪ್ಪನವರು ನಾವು ಅಧೀಕಾರಕ್ಕೆ ಬಂದ 2 ತಿಂಗಳಲ್ಲಿ ಮಾರಾಠರಿಗೆ 3ಬಿ ಯಿಂದ 2ಎ ಗೆ ಮೀಸಲಾತಿ ನೀಡುತ್ತೇವೆ ಎಂದು ಭರವಸೆಯನ್ನು ನೀಡಿದ್ದಾರೆ ಹಾಗೂ ಬಿಜೆಪಿಯವರು ಮಾಡುತ್ತಿರುವ ಜನಸುರಕ್ಷಾ ಯಾತ್ರೆಯು ಜನರ ಸುಕ್ಷತೆಯ ಕಾಳಜಿಯಿಂದ ಮಾಡುತ್ತಿರುವ ಯಾತ್ರೆಯಾಗಿದೆ, ಇದು ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವ ಯಾತ್ರೆಯಲ್ಲ ಜನರು ಶಾಂತಿ, ಸೌಹಾರ್ಧತೆಯಿಂದ ಬಾಳಲು ಮಾಡುತ್ತಿರುವ ಯಾತ್ರೆಯಾಗಿದೆ ಎಂದಿದ್ದಾರೆ. ಎಮ್.ಎಲ್.ಸಿ.ಯವರು ಬಿಜೆಪಿಯವರ ಮೇಲೆ ಮೃತರ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಕುರಿತು ಮಾತನಾಡಿರುತ್ತಾರೆ. ಬಿಜೆಪಿ ಯಾವಾಗಲೂ ಮೃತರ ಹೆಸರಿನಲ್ಲಿ ರಾಜಕೀಯ ಮಾಡಿದ್ದು ಇತಿಹಾಸದಲ್ಲೇ ಇರುವುದಿಲ್ಲ. ಕಾಂಗ್ರೇಸ ಪಕ್ಷ ಮೃತರ ಹೆಸರಿನಲ್ಲಿ ರಾಜಕಾರಣ ಮಾಡಿದ್ದು ಬಹಳಷ್ಟು ಉದಾಹರಣೆಗಳಿವೆ. ಇಂತಹ ಎಲ್ಲ ವಿಷಯಗಳನ್ನು ಮಾತನಾಡುವ ಬದಲು ತಮ್ಮ ಪಕ್ಷದ ಬಗ್ಗೆ ತಿಳಿದುಕೊಂಡು ಮಾತನಾಡಲಿ ಎಂದು ತಿರುಗೆಟು ನೀಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ, ವಿಎಮ್ ಪಾಟೀಲ್ ಗಣಪತಿ ಕರಂಜೇಕರ, ಎಸ್ ಎಶೆಟವಣ್ಣವರ, ಸಂತಾನ ಸಾವಂತ, ವಿಜಯ ಬೋಬಾಟಿ ಮೊದಲಾದವರು ಇದ್ದರು.
Leave a Comment