ಹಳಿಯಾಳ:- ಮಾರ್ಚ.15 ರಂದು ಹಳಿಯಾಳದಲ್ಲಿ ನಡೆಯಲಿದೆ ಎನ್ನುತ್ತಿರುವ ಜೆಡಿಎಸ್ ಪಕ್ಷದ ವಿಕಾಸ ಪರ್ವ ಯಾತ್ರೆಗೂ ನಮಗೂ ಸಂಬಂಧವಿಲ್ಲ ನಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ನಾವು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಜೆಡಿಎಸ್ ಪಕ್ಷದ ಹಳಿಯಾಳ ತಾಲೂಕಾಧ್ಯಕ್ಷ ಕೈತಾನ ಬಾರಬೋಜಾ ಹೇಳಿದರು.
ಪಟ್ಟಣದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ನಾವು ಕುಮಾರಸ್ವಾಮಿ ಅಭಿಮಾನಿಗಳು ಅವರ ನಿರ್ಣಯಗಳಿಗೆ ನಾವು ಬದ್ದರಿದ್ದೇವೆ ಆದರೇ ಹಳಿಯಾಳ ಕ್ಷೇತ್ರದಲ್ಲಿ ಕಳೆದ 2 ವರ್ಷಗಳ ಹಿಂದೆ ತಮ್ಮ ಹಾಗೂ ಇತರ ಮುಖಂಡರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಉದ್ಯಮಿ ಕೆ.ಆರ್.ರಮೇಶ ಅಂದಿನಿಂದ ಇಂದಿನವರೆಗೆ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮಗೆ ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದು 4ಕ್ಕೂ ಹೆಚ್ಚು ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಬದಲಾವಣೆ ಮಾಡಿಸಿದ್ದಾರೆ ಅಲ್ಲದೇ ತಮಗೆ ಬೇಕಾದವರಿಗೆ ಹುದ್ದೇ ಕೊಡಿಸಿ ಪಕ್ಷ ಸಂಘಟನೆಗೆ ಹಾನಿ ಉಂಟುಮಾಡಿದ್ದಾರೆಂದು ಆರೋಪಿಸುವ ಮೂಲಕ ಹಳಿಯಾಳ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಲ್ಲಿ ಉಂಟಾಗಿರುವ ಆಂತರಿಕ ಭಿನ್ನಮತವನ್ನು ಬಹಿರಂಗಪಡಿಸಿದರು.
ತುಘಲಕ್ ದರ್ಬಾರ :- ತಾಲೂಕಾ ಕಮೀಟಿಗೆ ಮರ್ಯಾದೆ ನೀಡದೆ ತುಘಲಕ್ ದರ್ಬಾರ ನಡೆಸಿರುವ ಜೆಡಿಎಸ್ ಪಕ್ಷ ಹಳಿಯಾಳ ಕ್ಷೇತ್ರ ಘೊಷಿತ ಅಭ್ಯರ್ಥಿ ಕೆ.ಆರ್.ರಮೇಶನ ಹಿಟ್ಲರ್ ವರ್ತನೆಗೆ ಬೇಸತ್ತು ಈಗಾಗಲೇ ಹಿರಿಯ ಮುಖಂಡರಾದ ರವಿ ರೆಡಕರ, ಸುಭಾಷ ಕಾಣಕೊಣ, ಟಿ.ಆರ್.ಚಂದ್ರಶೇಖರ, ತಾಪಂ ಸದಸ್ಯರಾದ ಉಡಚಪ್ಪಾ ಬೋಬಾಟಿ, ದೇಮಾಣಿ ಶಿರೋಜಿ, ಪುರಸಭೆ ಸದಸ್ಯ ಎಸ್.ಎ.ಶೆಟವಣ್ಣವರ, ಗುಜ್ಜರ, ಕುಮಾರ ಬೋಬಾಟಿ ಸೇರಿದಂತೆ ಮೊದಲಾದ ಮುಖಂಡರು ಪಕ್ಷ ತೊರೆದಿದ್ದು ಈಗ ನಾವುಗಳು ಪಕ್ಷ ತೊರೆಯುವ ಸರದಿ ಬಂದಿದೆ ಎಂದು ಬೇಸರದಿಂದ ನುಡಿದರು.
ಖಂಡನೀಯ:- ಅಭ್ಯರ್ಥಿ ಘೊಷಣೆ ಆದ ಬಳಿಕ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಿತ್ತು ಆದರೇ ರಮೇಶ ಹಾಗೆ ಮಾಡದೆ ಮುಖಂಡರಿಗೆ ಮುರು ಕಾಸಿನ ಮರ್ಯಾದೆ ನೀಡದೆ ಅಗೌರವ ತೊರಿದ್ದು ಖಂಡನೀಯ ಎಂದು ಬಾರಬೋಜಾ ಕಿಡಿ ಕಾರಿದರು.
ಚಿಕನ್, ಮಟನ್, ಸಿರೆ ಹಂಚಿಕೆ
ರಾಜಕರಾಣ ಸರಿಯಲ್ಲ :- ಹಳಿಯಾಳದಲ್ಲಿ ಹಾಕಲಾಗಿರುವ ಬ್ಯಾನರ್ಗಳಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಚಿಕ್ಕ ಪೊಟೊ ಹಾಕಿ ಅವರಿಗೆ ಅಗೌರವ ತೊರಲಾಗಿದೆ ಎಂದು ಆಕ್ರೊಶ ವ್ಯಕ್ತಪಡಿಸಿದ ಬಾರಬೋಜಾ ಚಿಕನ್, ಮಟನ್, ಸಿರೆ ಹಂಚಿಕೆಯಿಂದ ಹಳಿಯಾಳದ ಮುಗ್ದ, ಪ್ರಾಮಾಣಿಕ, ಸ್ವಾಭಿಮಾನಿ ಜನ ಮರುಳಾಗಲ್ಲ ಇದರಿಂದ ಪಕ್ಷ ಕಟ್ಟಲು ಅಥವಾ ಗೆಲ್ಲಿಸಲು ಸಾಧ್ಯವಿಲ್ಲ ಜನರಿಗೆ ಆಸೆ ಆಮಿಷ ತೊರಿಸುವ ಕೀಳುಮಟ್ಟದ ರಾಜಕೀಯ ನೀತಿ ಸರಿಯಲ್ಲ ಎಂದು ಪರೋಕ್ಷವಾಗಿ ಕೆ.ಆರ್.ರಮೇಶ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷವನ್ನು ಸದ್ಯ ಹಳಿಯಾಳ ಕ್ಷೇತ್ರದಲ್ಲಿ ಸೀರೆ ಪಾರ್ಟಿ ಎಂದು ಜನ ಹಾಸ್ಯವಾಡುತ್ತಿದ್ದು ಇದನ್ನು ಹೈಕಮಾಂಡ ಗಮನಿಸಬೇಕು ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಕುಮಾರಸ್ವಾಮಿಯವರು ಗಮನ ಹರಿಸದೆ ಇದ್ದರೇ ಹಳಿಯಾಳ-ಜೋಯಿಡಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಹೆಸರು ಮಣ್ಣುಪಾಲಾಗಲಿದೆ ಹಾಗಾಗದೆ ಇರುವ ಹಾಗೆ ಹಿರಿಯ ಮುಖಂಡರು ಮುತುವರ್ಜಿ ವಹಿಸಬೇಕೆಂದರು.
ಸುದ್ದಿಗೊಷ್ಠಿಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಕೊಳದಾರ, ಹಿರಿಯ ಮುಖಂಡರಾದ ಶಾಂತಾರಾಮ ಜಾವಳೇಕರ, ದಾವಲಸಾಬ ಅಂಗಡಿ, ನಸ್ರುಲ್ಲಾಖಾನ್, ಆನಂದ ವಡ್ಡರ, ಪರಶುರಾಮ ಮೇತ್ರಿ ಇನ್ನಿತರ ಮುಖಂಡರು ಇದ್ದರು.
Leave a Comment