• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಶಾಲಾ ಬಾಲಕಿಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರನ್ನು ಬಿಡುಗಡೆಗೊಳಿಸುವಂತೆ ಮಾಗೋಡದ ಮಹಿಳಾ ವಾಹಿನಿಯ ನೂರಾರು ಮಹಿಳೆಯರ ಆಗ್ರಹ

March 14, 2018 by Gaju Gokarna Leave a Comment

ಹೊನ್ನಾವರ;`ಮೂರು ತಿಂಗಳುಗಳ ಹಿಂದೆ ತಾಲೂಕಿನ ಮಾಗೋಡನಲ್ಲಿ ನಡೆದ ಶಾಲಾ ಬಾಲಕಿಗೆ ಚಾಕು ಇರಿತದ ಪ್ರಕರಣಕ್ಕೆ ಸಂಬಂಧಿ ಪೊಲೀಸರು ಅಮಾಯಕರನ್ನು ಬಲಿಪಶು ಮಾಡಲಾಗುತ್ತಿದೆ.ಗಣೇಶ ನಾಯ್ಕ ಮೇಲೆ ಹಾಕಿದ ಪೋಕ್ಸೋ ಪ್ರಕರಣವನ್ನು ಕೈ ಬಿಟ್ಟು ಅವನನ್ನು ಬಂಧನ ಮುಕ್ತಗೊಳಿಸಬೇಕು.ಪ್ರಕರಣದಲ್ಲಿ ಅರೋಪಿಗಳಾದ ಐ.ವಿ. ಹೆಗಡೆ ಹಾಗೂ ಗಿರೀಶ ಬಾಗಿಲ ವೈದ್ಯ ಹಾಗೂ 70ಕ್ಕೂ ಹೆಚ್ಚು ಜನರ ಮೇಲೆ ದಾಖಲಿಸಿದ ಪ್ರಕರಣವನ್ನು ಹಿಂತೆಗೆದುಕೊಳ್ಳಬೇಕು. 10 ದಿನದಲ್ಲಿ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ಶಾಸಕರ, ಜಿಲ್ಲಾಡಳಿತದ ಹಾಗೂ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ,ಅನಿಧಿಷ್ಠಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಮಾಗೋಡದ ಮಹಿಳಾವಾಹಿನಿಯ ನೂರಾರು ಸದಸ್ಯರು ತಿಳಿಸಿದರು.    ಪಟ್ಟಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಹಿಳಾ ವಾಹಿನಿಯ ಅಧ್ಯಕ್ಷೆ ಕೀರ್ತಿ ನಾಯ್ಕ ಮಾತನಾಡಿ ಡಿ.14 ರಂದು ಮಾಗೋಡ ಕೊಡ್ಲಗದ್ದೆಯಿಂದ ಸಂಶಿಯ ಪ್ರೌಢ ಶಾಲೆಗೆ ವಿದ್ಯಾರ್ಥಿನಿ ನಡೆದು ಹೋಗುತ್ತಿರುವಾಗ ಅಪರಿಚಿತರಿಬ್ಬರು ವಿದ್ಯಾರ್ಥಿನಿ ಮೇಲೆ ಹಲ್ಲೆ ಮಾಡಿ ಅಪಹರಣಕ್ಕೆ ಯತ್ನಿಸಿದ ಪ್ರಕರಣವನ್ನು ಆಕೆಯೇ ಪೊಲೀಸರ ಹಾಗೂ ಊರಿನ ಜನರ ಮುಂದೆ ಹೇಳಿಕೊಂಡಿದ್ದಳು.ಈ ಪ್ರಕರಣದಲ್ಲಿ ಮಾಗೋಡದ ಗಣೇಶ ಈಶ್ವರ ನಾಯ್ಕ ಎಂಬಾತನನ್ನು ಪೊಲೀಸರು ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಆದರೆ ಇದರಲ್ಲಿ ಗಣೇಶ ನಾಯ್ಕ ನಿರಪರಾಧಿಯಾಗಿದ್ದಾನೆ. ಘಟನೆ ನಡೆದ ಸ್ಥಳದಲ್ಲಿ ಜನರೊಟ್ಟಿಗೆ ಇದ್ದವನಾಗಿದ್ದ. ಆತ ಯಾವುದೇ ಕೃತ್ಯವಾಗಲೀ ಅಥವಾ ಬಾಲಕಿಗೆ ತೊಂದರೆ ಕೊಡುವುದಾಗಲೀ ಮಾಡಿಲ್ಲ. ಹೀಗಿದ್ದರೂ ಅನಾವಶ್ಯಕವಾಗಿ ಗಣೇಶ ಎಂಬುವವನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಣೇಶ ನಾಯ್ಯ ಶಾಸಕ ಮಂಕಾಳು ವೈದ್ಯರವರು ನಡೆಸುವ ಶಾಲಾ ವಾಹನದ ಚಾಲನಾಗಿದ,ಅವನಿಗೆ ಒಂದು ತಿಂಗಳು ಸಂಬಳ ನೀಡಿ ಇನ್ನೂ ಎರಡು ತಿಂಗಳ ಸಂಬಳ ಸರಿಯಾಗಿ ನೀಡಿರಲಿಲ್ಲ ಅವರ ನಡುವೆ ಅಸಮಾಧಾನ ಉಂಟಾಗಿತು. ಹಾಗಾಗಿ ಅವನ ಮೇಲೆ ಪ್ರಕರಣ ದಾಖಲಿಸಲಾಗಿದೆ. ಘಟನೆ ನಡೆದ ದಿನ ಶಾಲಾ ಬಾಲಕಿ `ಇಬ್ಬರು ಯಾರೋ ಅಪರಿಚಿತರು ನಾನು ಶಾಲೆಗೆ ಹೋಗುವ ಸಂದರ್ಭದಲ್ಲಿ ನನ್ನನ್ನು ತಡೆದು ನಿಲ್ಲಿಸಿ, ತನ್ನ ಬಾಯಿಗೆ ಬಟ್ಟೆ ಕಟ್ಟಿ, ಚಾಕುವಿನಿಂದ ಹೆದರಿಸಿ ಹಲ್ಲೆ ನಡೆಸಿದ್ದಾರೆ. ಅವರು ಯಾರೆಂಬುದು ನನಗೆ ಊಹಿಸಲು ಸಾಧ್ಯವಿಲ್ಲ’ ಎಂದು  ಹೇಳಿದ್ದಳು. 3ದಿನಗಳ ನಂತರ ಪೋಲಿಸರ ಬಳಿ ಬೇರೆ ಹೇಳಿಕೆ ನೀಡಿದ್ದಾಳೆ. ಇವಳ ಮೇಲು ಕಾನೂನು ಕ್ರಮಕೈಗೊಳ್ಳಬೇಕು. ಈ ವಿಚಾರವಾಗಿ ಕೇಳಲು ಊರಿನವರು ಬಾಲಕಿಯ ಮನೆಗೆ  ಹೋದರೆ ಪೋಲಿಸ್‍ರಿಗೆ ದೂರು ನೀಡುವದಾಗಿ ಅವಳ ತಂದೆ-ತಾಯಿ ಹೇಳುತ್ತಾರೆ. ಈಗಾಗಲೇ ಈ ಪ್ರಕರಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಮಾಗೋಡ ಭಾಗದ ಸುಮಾರು 70ಕ್ಕೂ ಹೆಚ್ಚು ಜನರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಅವರನ್ನು ಬಂಧಿಸುವ ಕಾರ್ಯಾಚರಣೆ ನಡೆದಿದೆ. ಇದು ನಿಲ್ಲಬೇಕು ಆಗ್ರಹಿಸಿದರು.  ಈ ಘಟನೆ ಸಂಬಂಧಿಸಿ ಮಾಗೋಡ ಗ್ರಾಮದಲ್ಲಿ ಕೆಲವು ಉದ್ರಿಕ್ತರಿಂದ ಅಹಿತಕರ ಘಟನೆಗಳು ನಡೆದಿದ್ದವು ಆದರೆ ಈ ಎರಡು ಘಟನೆಗಳನ್ನು ನೆಪವಾಗಿಟ್ಟುಕೊಂಡು ರಾಜಕೀಯ ಷಡ್ಯಂತ್ರ ನಡೆಸಿ ತಮಗೆ ಆಗದ ಹೆಸರುಗಳನ್ನು ಪ್ರಕರಣಗಳಲ್ಲಿ ಸೇರಿಸಿ ಅಮಾಯಕರನ್ನು ಬಲಿಪಶು ಮಾಡುತ್ತಿದ್ದಾರೆ. ಇದರಲ್ಲಿ ಶಾಸಕ ಮಂಕಾಳ ವೈದ್ಯ ಹಾಗೂ ಇತರ ರಾಜಕೀಯ ವ್ಯಕ್ತಿಗಳ ಕೈವಾಡವಿದೆ ಎಂದು ಆರೋಪಿಸಿದರು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಜನರನ್ನು ಬಂಧಿಸಲು ಮನೆಬಾಗಿಲಿಗೆ ಬಂದು ತೊಂದರೆ ಕೊಡುತ್ತಿದ್ದು, ಭಯದಲ್ಲಿ ಮನೆಬಿಟ್ಟಿದ್ದಾರೆ. ಪೊಲೀಸರು ಅಧಿಕಾರಸ್ಥರ ಕಾರಸ್ತಾನದಿಂದ ಕೆಲವರ ಮನೆಯಲ್ಲಿ ದುಡಿಯುವ ಗಂಡಸರಿಲ್ಲದೆ ಅನಾಥರಾಗಿದ್ದಾರೆ ಎಂದು ಅಳಲು ತೋಡಿಕೊಂಡರು.
ಗ್ರಾ. ಪಂ ಅಧ್ಯಕ್ಷೆ ವಿನೋದಾ ನಾಯ್ಕ, ಮಹಿಳಾ ವಹಿನಿಯ ಉಪಾಧ್ಯಕ್ಷೆ ಮಮತಾ ನಾಯ್ಕ, ಚಂದ್ರಕಲಾ ನಾಯ್ಕ, ನಾಗರತ್ನ, ಲಲಿತಾ ನಾಯ್ಕ, ಲಕ್ಷ್ಮೀ ನಾಯ್ಕ, ವಿನುತಾ ನಾಯ್ಕ, ನಾಗರತ್ನ ಇತರರು ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News Tagged With: ಐ.ವಿ. ಹೆಗಡೆ, ಗಿರೀಶ ಬಾಗಿಲ ವೈದ್ಯ, ಜಿಲ್ಲಾಡಳಿತ, ನೂರಾರು ಮಹಿಳೆಯರ ಆಗ್ರಹ, ಪೊಲೀಸರು ಪೋಕ್ಸೋ ಅಡಿ, ಪ್ರಕರಣ, ಬಂಧಿತರನ್ನು, ಬಿಡುಗಡೆಗೊಳಿಸುವಂತೆ, ಬೃಹತ್ ಸಂಖ್ಯೆಯಲ್ಲಿ ಶಾಸಕರ, ಮಾಗೋಡದ ಮಹಿಳಾ ವಾಹಿನಿ, ಶಾಲಾ ಬಾಲಕಿಗೆ ಚಾಕು ಇರಿತ, ಸಂಬಂಧಿಸಿ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar