ಹಳಿಯಾಳ : ಜೆಡಿಎಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೇ ಸರ್ಕಾರದ ಆಡಳಿತ, ಅಧಿಕಾರಿಗಳೊಂದಿಗೆ ಗ್ರಾಮ ವಾಸ್ತವ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಡೆಸಿ ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸಿ ಪರಿಹಾರ ಒದಗಿಸುವ ಮೂಲಕ ನಾಡಿನ ಜನರ ಸಂಕಷ್ಟಗಳನ್ನು ಪರಿಹರಿಸಿ ಪ್ರತಿಯೊಬ್ಬ ಪ್ರಜೆಯ ಶ್ರೇಯೋಭೀವೃದ್ದಿಗೆ ಶ್ರಮಿಸಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಹಳಿಯಾಳ ಪಟ್ಟಣದ ಯಲ್ಲಾಪೂರ ನಾಕಾ ಬಳಿಯ ಮೈದಾನದಲ್ಲಿ ನಡೆದ ಜೆಡಿಎಸ್ ಪಕ್ಷದ ವಿಕಾಸ ಪರ್ವ ಬೃಹತ್ ಸಮಾವೇಶ ಉಧ್ಘಾಟಿಸಿ ಮಾತನಾಡಿ ಕೇಂದ್ರ ಮತ್ತು ರಾಜ್ಯ 2 ಸರ್ಕಾರಗಳಿಗೆ ರೈತರ ಹಿತಾಸಕ್ತಿ ಬೇಡವಾಗಿದೆ ಒಬ್ಬರು ಸಾಲ ಮನ್ನಾ ಮಾಡುವುದು ಸಾಧ್ಯವಿಲ್ಲ ಎಂದರೇ ಇನ್ನೊಬ್ಬರು ಸಾಲ ಮನ್ನಾ ಘೊಷಿಸಿ ಈವರೆಗೆ ರೈತರ ಖಾತೆಗಳಿಗೆ ಹಣ ಜಮಾ ಮಾಡದೆ ಜೂನ್ ತಿಂಗಳಿನಲ್ಲಿ ಹಣ ಬಿಡುಗಡೆ ಮಾಡಲಾಗುವುದು ಎನ್ನುತ್ತಿರುವ ರಾಜ್ಯ ಕಾಂಗ್ರೇಸ್ ಸರ್ಕಾರಕ್ಕೆ ಜೂನ್ ತಿಂಗಳಿನಲ್ಲಿ ಅವರ ಸರ್ಕಾರ ರಾಜ್ಯದಲ್ಲಿ ಇರುವುದಿಲ್ಲ ಎನ್ನುವುದು ತಿಳಿದಿಲ್ಲವೇ ಸುಳ್ಳು ಹೇಳುವುದೇ ಇವರ ರೈತಪರ ಕಾಳಜಿಯೇ ಎಂದು ತರಾಟೆಗೆ ತೆಗೆದುಕೊಂಡರು. ಜೆಡಿಎಸ್ ಪಕ್ಷವನ್ನು ರಾಜ್ಯದ ಜನತೆ ಆಶೀರ್ವದಿಸಿ ಅಧಿಕಾರಕ್ಕೆ ತಂದರೇ ಅಧೀಕಾರಕ್ಕೆ ಬಂದ 24 ತಾಸೊಳಗೆ ರೈತರ, ಸ್ತ್ರೀ ಶಕ್ತಿ ಸಂಘಗಳ ಸಂಪೂರ್ಣ ಸಾಲಮನ್ನಾ ಮಾಡಲಾಗುವುದು, ವೃದ್ದರಿಗೆ ತಿಂಗಳಿಗೆ 5 ಸಾವಿರ ರೂ. ಮಸಾಶನ, ರೈತರು ಸಾಲಗಾರರಾಗದಿರುವ ರೀತಿಯಲ್ಲಿ ಕ್ರಮ ಕೈಗೊಳ್ಳಲು 2006- ರ ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹ, ಇಸ್ರೇಲ್ ದೇಶದಲ್ಲಿ ಮಾಡಿರುವ ಕೃಷಿ ಕ್ರಾಂತಿ ಮಾದರಿ ರಾಜ್ಯದಲ್ಲಿ ಅಳವಡಿಕೆ, ಹೆಣ್ಣು ಮಕ್ಕಳಿಗೆ ಸ್ವ ಉದ್ಯೋಗ, ಉತ್ತಮ ಮಾರುಕಟ್ಟೆ ವ್ಯವಸ್ಥೆ, ರೈತರ ಬೆಳೆಗಳಿಗೆ ಉತ್ತಮ ಬೆಂಬಲ ಬೆಲೆ, ಕೊರಿಯಾ-ಚೀನಾ ವಸ್ತುಗಳನ್ನು ರಾಜ್ಯದಲ್ಲಿ ನಿಷೇಧಿಸಿ ರಾಜ್ಯದಲ್ಲೇ ಅಂತಹ ಉತ್ಪನ್ನಗಳ ತಯಾರಿಕೆ ಘಟಕಗಳನ್ನು ಸ್ಥಾಪಿಸುವುದು ಸೇರಿದಂತೆ ಅನೇಕ ನೂತನ ಯೋಜನೆಗಳನ್ನು ಕುಮಾರಸ್ವಾಮಿ ಘೊಷಿಸಿದರು. ಜೆಡಿಎಸ್ ಪಕ್ಷದ ಹಳಿಯಾಳ ಕ್ಷೇತ್ರದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕರೆ ನೀಡಿ ಹಳಿಯಾಳ ವಿಧಾನ ಸಭಾ ಕ್ಷೇತ್ರದಲ್ಲಿ ಶಾಶ್ವತ ನೀರಾವರಿ ಯೋಜನೆ, ಅತಿಕ್ರಮಣ ಸಮಸ್ಯೆಗೆ ಶಾಶ್ವತ ಪರಿಹಾರ, ಉದ್ಯೋಗ ಸೃಷ್ಠಿಯನ್ನು ಕ್ಷೇತ್ರದಲ್ಲಿ ಮಾಡುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದರು. ಯುವ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ, ವಿಪ ಸದಸ್ಯ ಬಸವರಾಜ ಹೊರಟ್ಟಿ, ಮಾಜಿ ಸಚಿವ ಆನಂದ ಅಸ್ನೋಟಿಕರ್, ರಾಜ್ಯ ಮುಖಂq ಬಾಬುಗೌಡಾ ಪಾಟೀಲ್, ಮಾಜಿ ಉಪಸಭಾಪತಿ ಕೆ ಮರಿತಿಪ್ಪೇಗೌಡಾ ಮಾತನಾಡಿ ಸಚಿವ ಆರ್.ವಿ.ದೇಶಪಾಂಡೆ ಕಳೆದ 20 ವರ್ಷಗಳಿಂದ ಕೈಗಾರಿಕಾ ಮಂತ್ರಿಯಾಗಿ ಯಾವುದೇ ಕೈಗಾರಿಕಾ ಕ್ರಾಂತಿ ಮಾಡಿಲ್ಲ, ಉದ್ಯೋಗ ಸೃಷ್ಠಿ ಮಾಡಿಲ್ಲ ಎಂದು ಹರಿಹಾಯ್ದು ಜನಪರ, ರೈತಪರ ಇರುವ ಎಚ್ಡಿಕೆ ಅವರ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಕರೆ ನೀಡಿದರು. ಹಳಿಯಾಳ –ಜೋಯಿಡಾ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಕೆ.ಆರ್.ರಮೇಶ ಮಾತನಾಡಿ ಕ್ಷೇತ್ರದಲ್ಲಿ ಸಚಿವ ಆರ್.ವಿ.ದೇಶಪಾಂಡೆ ಅಭಿವೃದ್ದಿಯನ್ನು ನೀರ್ಲಕ್ಷಿಸಿದ್ದಾರೆ ಎಂದು ಟಿಕಿಸಿದರು. ಪ್ರಾದೇಶಿಕ ಪಕ್ಷದಿಂದÀ ಮಾತ್ರ ರಾಜ್ಯಕ್ಕೆ ಒಳಿತಿದ್ದು ಜೆಡಿಎಸ್ ಅನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಪಟ್ಟಣದ ಕಿಲ್ಲಾದಲ್ಲಿರುವ ದರ್ಗಾಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಬೈಕ್ ರ್ಯಾಲಿಯ ಮೂಲಕ ಜೆಡಿಎಸ್ ಕಾರ್ಯಕರ್ತರು ಅವರನ್ನು ಕಾರ್ಯಕ್ರಮ ವೇದಿಕೆಗೆ ಕರೆ ತಂದರು. ಈ ಸಂದರ್ಭದಲ್ಲಿ ರಾಜ್ಯ ನಾಯಕರೊಂದಿಗೆ, ಜಿಲ್ಲಾಧ್ಯಕ್ಷ ಬಿ.ಆರ್.ನಾಯ್ಕ, ಸುಭಾಶ ಗೌಡಾ, ಕೃಷ್ಣಾ ದುಗ್ಗಾಣಿ, ನಾರಾಯಣ ದಡ್ಡಿ, ರೋಶನ್ ಬಾವಾಜಿ, ನಂದಿನಿ ಲೋಟಲೆಕರ ಇದ್ದರು.
Leave a Comment