ಹಳಿಯಾಳ :-
ಇತ್ತೀಚೆಗೆ ಮಹಾರಾಷ್ಟ್ರದ ಪೂನಾದಲ್ಲಿ ನಡೆದ ಸಬ್ ಜೂನಿಯರ್ ಕುಸ್ತಿ ಸ್ಪರ್ದೆಯಲ್ಲಿ 65 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಪಡೆದ ಹಳಿಯಾಳ ತಾಲೂಕಿನ ದುಸಗಿ ಗ್ರಾಮದ ಯುವ ಕುಸ್ತಿ ಪಟು ಮಂಜುನಾಥ ನಾಗೇಂದ್ರ ಗೌಡಪ್ಪನ್ನವರ ಮುಂದೆ ನಡೆಯಲಿರುವ ಏಷಿಯನ್ ಮತ್ತು ವಿಶ್ವ ಕುಸ್ತಿ, ರಾಷ್ಟ್ರೀಯ ಕುಸ್ತಿ ಶಿಬಿರಕ್ಕೆ ಆಯ್ಕೆ ಆಗಿದ್ದಾನೆ.
ಹಳಿಯಾಳ ತಾಲೂಕಿನ ದುಸಗಿ ಗ್ರಾಮದ ಮಂಜುನಾಥ ಗೌಡಪ್ಪನ್ನವರ ಪ್ರಸ್ತುತ ಬೆಳಗಾವಿಯ ಕ್ರೀಡಾಶಾಲೆಯಲ್ಲಿ ಹಿರಿಯ ಕುಸ್ತಿ ತರಬೇತುದಾರರಾದ ನಾಗರಾಜ ಮತ್ತು ಹನಮಂತರವರಲ್ಲಿ ತರಬೇತಿ ಪಡೆಯುತ್ತಿದ್ದು ಮಂಜುನಾಥನ ಸಾಧನೆಗೆ ದುಸಗಿ ಗ್ರಾಮಸ್ಥರು ಹಾಗೂ ಹಳಿಯಾಳದ ಗಣ್ಯರಿಂದ ಅಭಿನಂದನೆ ವ್ಯಕ್ತವಾಗಿದೆ.
Leave a Comment