ಹಳಿಯಾಳ:
ತಾಲೂಕಿನ ಕೆಕೆ ಹಳ್ಳಿ, ಜಗತಾ-ಗೌಳಿವಾಡಾ ಹಾಗೂ ಬೆಳವಟಗಿ ಗ್ರಾಮಗಳಲ್ಲಿ ನಡೆದ ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿ ಪೂಜೆ, ನೂತನ ಕಟ್ಟಡಗಳ ಉಧ್ಘಾಟನೆ ನೆರವೆರಿಸಿದರು.
ಈ ಸಂದರ್ಭದಲ್ಲಿ ಸಚಿವರು ಮಾತನಾಡಿ ರಾಜ್ಯ ಕಾಂಗ್ರೇಸ್ ಸರ್ಕಾರ ನುಡಿದಂತೆ ನಡೆದಿದ್ದು ಹಲವಾರು ಭಾಗ್ಯಗಳನ್ನು ಜನರಿಗೆ ಕಲ್ಪಿಸಿ ಪ್ರತಿಯೊಬ್ಬ ಫಲಾನುಭವಿಗೂ ಸರ್ಕಾರದ ಯೋಜನೆ ತಲುಪುವ ನಿಟ್ಟಿನಲ್ಲಿ ಕಾರ್ಯ ಮಾಡಿದ್ದು ಜನರು ಎಂದಿಗೂ ಮರೆಯಬಾರದು ಎಂದ ಅವರು ಮುಂದೆಯೂ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರವೇ ಆಡಳಿತದ ಚುಕ್ಕಾಣ ಹಿಡಿಯಲಿದ್ದು ಮತ್ತುಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಲಾಗವುದು ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಮಾತನಾಡಿ ಬಿಜೆಪಿ ಸರ್ಕಾರ ಹಾಗೂ ರಾಜ್ಯ ಬಿಜೆಪಿ ನಾಯಕರು ಪೊಳ್ಳು ಭರವಸೆಗಳ ಸರದಾರರು ಎಂದು ಲೇವಡಿ ಮಾಡಿದರು.
ಕೆಕೆ ಹಳ್ಳಿ ಗ್ರಾಮದ ನಿತ್ಯಾನಂದ ಆಶ್ರಮದ ಶ್ರೀಸುಬ್ರಮಣ್ಯಂ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಸರ್ಕಾರದ ಅನಿಲ ಭಾಗ್ಯ ಯೋಜನೆಯಡಿಯಲ್ಲಿ 241 ಫಲಾನುಭವಿಗಳಿಗೆ ಗ್ಯಾಸ ಸಿಲೆಂಡರ್ ಹಾಗೂ ಒಲೆಯ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.
ಶ್ರೀ ಸತ್ಯಪುರುಷ ಸೇವಾ ಸಹಕಾರಿ ಸಂಘದ ನೂತನ ಕಟ್ಟಡದ ಕಾಮಗಾರಿಗೆ ಶಿಲಾನ್ಯಾಸ ನೇರವೆರಿಸಿದರು, ಸಚಿವರಿಂದ ಜತಗಾ ಗೌಳಿವಾಡಾದ ನೂತನವಾಗಿ ಮಂಜೂರಾದ ಸಮುದಾಯ ಭವನದ ಅಡಿಗಲ್ಲು ಹಾಗೂ ಗ್ರಾಮ ವಿಕಾಸ ಯೋಜನೆಯಡಿಯ ಕಾಮಗಾರಿಗಳಿಗೆ ಚಾಲನೆ, ಬೆಳವಟಗಿ ನೂತನ ಗ್ರಾಪಂ ಕಟ್ಟಡದ ಕಾಮಗಾರಿಗೆ ಶಿಲಾನ್ಯಾಸ ಹಾಗೂ ನೂತನವಾಗಿ ನಿರ್ಮಿಸಲಾದ ಅಂಗನವಾಡಿ ಕಟ್ಟಡದ ಉಧ್ಘಾಟನೆ ಹಾಗೂ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯೆ ಮಹೇಶ್ರಿ ಮಿಶ್ಯಾಳಿ, ಲಕ್ಷ್ಮೀ ಕೊರ್ವೆಕರ, ಸೊಸೈಟಿ ಅಧ್ಯಕ್ಷ ಬಸವರಾಜ ಮಾಳ್ವಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ, ಮುಖಂಡರಾದ ಅರುಣ ಕಲಾಲ, ಸಂಜು ಮಿಶ್ಯಾಳೆ, ಶೋಭಾ ರಾವಳ, ಪ್ರಮೋದ ಪಾಟೀಲ್ ಮೊದಲಾದವರು ಇದ್ದರು.
Leave a Comment