ಹೊನ್ನಾವರ ಪಟ್ಟಣಕ್ಕೆ 6.60 ದಶಲಕ್ಷ ಲೀಟರ್ ನೀರಿನ ಅಗತ್ಯವಿದ್ದು, ಪಟ್ಟಣ ವಾಸಿಗಳ ಬಹುದಿನದ ಬೇಡಿಕೆಯಂತೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ರೂ.122.76 ಕೋಟಿ ವೆಚ್ಚದನೀರು ಸರಬರಾಜು ಯೋಜನೆಗೆ ಸಚಿವ ಸಂಪುಟದ ಅನುಮೋದನೆ ದೊರಕಿದೆ ಎಂದು ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಶಕಿ ಶಾರದಾ ಮೋಹನ ಶೆಟ್ಟಿ ಹೇಳಿದರು.
ಹೊನ್ನಾವರ ಪಟ್ಟಣದ್ಲ ಸಾಗರ ರೆಸಿಡೆನ್ಸಿ ಹೋಟೆಲ್ ಸಭಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು.
ಈವರೆಗೆ ಹೊನ್ನಾವರದಿಂದ ಸುಮಾರು 36 ಕಿ.ಮೀ ದೂರದ ಮರಾಕಲ್ನಿಂದ ಅಘನಾಷಿನಿ ನೀರನ್ನು ಕುಮಟಾ ಪುರಸಭೆ ಹಾಗೂ ಹೊನ್ನಾವರ ಪಟ್ಟಣ ಪಂಚಾಯಿತಿ ಜಂಟಿ ಯೋಜನೆಯಡಿ ಹೊನ್ನಾವರಕ್ಕೆ ನೀರು ಪೂರೈಸಲಾಗುತಿತ್ತು. ಹಲವು ತಾಂತ್ರಿಕ ಕಾರಣಗಳಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿತ್ತು. ಈ ಸಮಸ್ಯೆಯನ್ನು ನೀಗಿಸುವಲ್ಲಿ ಮೂರು ವರ್ಷಗಳ ಹಿಂದೆ ಹೊನ್ನಾವರದ ಶರಾವತಿ ನದಿ ನೀರನ್ನು ಎತ್ತಿ 9 ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಂತೆ ಹೊನ್ನಾವರಕ್ಕೆ 0.104 ಟಿಎಂಸಿ ನೀರನ್ನು ಪೂರೈಸುವ ನೀಲನಕ್ಷೆ ರೂಪಿಸಿ ಮಂಜೂರಿಗೆ ಯತ್ನ ನಡೆಸಲಾಗಿತ್ತು.
ಯೋಜನಾ ವೆಚ್ಚದ ಹೆಚ್ಚಳ ಹಾಗೂ ಕೆಲ ತಾಂತ್ರಿಕ ಕಾರಣಗಳಿಂದ ವಿಳಂಬವಾದರೂ ಸತತ ಪ್ರಯತ್ನದಿಂದ ಈ ಬಾರಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಅಂದಾಜು ಮೊತ್ತ ರೂ. 122.76 ಕೋಟಿ ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ದೊರಕಿದೆ ಎಂದರು.
ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ತೆಂಗೇರಿ ಮಾತಾಡಿ, ಶಾಶಕಿ ಶಾರದಾ ಶೆಟ್ಟಿ ಓರ್ವ ಮಹಿಳಾ ಶಾಶಕಿಯಾಗಿ ಸತತವಾಗಿ ಕ್ಷೇತ್ರದ ಅಭಿವೃದ್ದಿಯಲ್ಲಿ ಧ್ವನಿ ಎತ್ತಿದ್ದಾರೆ. ಅನೇಕ ಜನಪ್ರೀಯ ವಿವಿಧ ಯೋಜನೆಗಳನ್ನು ತಂದಿದ್ದಾರೆ. ಪರೇಶ್ ಮೇಸ್ತ ಪ್ರಕರಣ ಸಿಬಿಐಗೆ ವಹಿಸಿಲ್ಲ ಎಂದು ನ್ಯಾಯವಾದಿ ನಾಗರಾಜ ನಾಯ್ಕರವರು ಪತ್ರಿಕಾಗೋಷ್ಠಿಯಲ್ಲಿ ಸುಳ್ಳು ಹೇಳಿಕೆ ನೀಡಿದ್ದನ್ನು ಖಂಡಿಸುತ್ತೇವೆ. ನಾಗರಾಜ ನಾಯ್ಕರವರು ಇಲ್ಲ ಸಲ್ಲದ ಆರೋಪ ಮಾಡಿ ಜನರನ್ನು ದಿಕ್ಕು ತಪ್ಪಿಸಿ ಗಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಶರಾವತಿ ಮೇಸ್ತ,ಹೊನ್ನಾವರ ತಾಲೂಕು ಮಹಿಳಾ ಕಾಂಗ್ರೇಸ್ ಘಟಕದ ಅಧ್ಯಕ್ಷೆ ನೇತ್ರಾವತಿ ಹೆಗಡೆ, ಬಿಸಿಸಿ ಉಪಾಧ್ಯಕ್ಷ ವಿನಾಯಕ್ ಶೇಟ್, ಹುಸೇನ್ ಖಾದ್ರಿ, ಗಣೇಶ್ ನಾಯ್ಕ ಆರೊಳ್ಳಿ, ವಿನಾಯಕ ನಾಯ್ಕ, ಲಿಲ್ಲಿ ಫರ್ನಾಂಡೀಸ್, ಜಿಲ್ಲಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷೆ ತಾರಾ ಗೌಡ, ರಾಜಏಶ್ ಗುನಗಾ, ದಾಮೋದರ್ ನಾಯ್ಕ ಹಳದೀಪುರ, ಸುರೇಶ್ ಮೇಸ್ತ ತುಳಸಿನಗರ, ಮೋಹನ್ ಮೇಸ್ತ, ನಾರಣಪ್ಪ ಗೌಡ,ಸುರೇಶ್ ಮೇಸ್ತ ಕೆಳಗಿನಪಾಳ್ಯ ಮತ್ತಿತರರು ಉಪಸ್ಥಿತರಿದ್ದರು.
Leave a Comment