ಹೊನ್ನಾವರ . ಜಿಲ್ಲಾಡಳಿತ ಉತ್ತರ ಕನ್ನಡ, ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಾರವಾರ, ತಾಲೂಕಾ ಆಡಳಿತ ತಾಲೂಕಾ ಪಂಚಾಯತ ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ಹೊನ್ನಾವರ ಪಟ್ಟಣ ಪಂಚಾಯತದಿಂದ ಜಾಥಾವನ್ನು ಏರ್ಪಡಿಸಲಾಯಿತು. ಪಟ್ಟಣ ಪಂಚಾಯತ ಅಧ್ಯಕ್ಷರು, ತಹಶೀಲ್ದಾರರು, ಕಾರ್ಯನಿರ್ವಾಹಣಾಧಿಕಾರಿಗಳು, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಾಥಾಕ್ಕೆ ಚಾಲನೆ ನೀಡಿದರು. ವಿಕಲಚೇತನರು ಹಾಗೂ ಅವರ ತ್ರಿಚಕ್ರ ವಾಹನಗಳೊಂದಿಗೆ ವಿವಧ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ‘’ವಿಕಲಚೇತನರ ನಡೆ, ಮತದಾನ ಕೇಂದ್ರದ ಕಡೆ, ಹಾಗೂ ಎಲ್ಲರನ್ನೊಳಗೊಂಡ ಚುನಾವಣೆ (ಮತದಾನ) ನಡೆಸಲಾಯಿತು. ಧ್ವನಿ ವರ್ಧಕದ ಮೂಲಕ ಮತದಾನದ ಕುರಿತು ಮತದಾನದ ಘೋಷಣೆಗಳಾದ ನಿಮ್ಮ ಮತ ನಿಮ್ಮ ಧ್ವನಿ, ಭವ್ಯ ಭಾರತಕ್ಕಾಗಿ ಮತ ಚಲಾಯಿಸಿ, ಬುದ್ದಿವಂತರಾಗಿ ವಿಚಾರ ಮಾಡಿ ಮತ ಚಲಾಯಿಸಿ, ಎನ್ನುವ ಘೋಷಣೆಗಳನ್ನು ಕೂಗುತ್ತಾ ಜಾಗೃತಿ ಮೂಡಿಸಲಾಯಿತು.
ಹಾಗೂ ವಿಕಲಚೇತನರೇ ರಚಿಸಿದ ಮತದಾನ ಕುರಿತಾದ ಬೀದಿ ನಾಟಕವನ್ನು ನಡೆಸಲಾಯಿತು. ಸುಮಾರು ಪಟ್ಟಣ ಪಂಚಾಯತದಿಂದ ಬಜಾರ ರೋಡ ಮಾರ್ಗವಾಗಿ ತಹಶೀಲ್ದಾರರ ಕಛೇರಿಯನ್ನು ಹಾಯ್ದು ಪೇಟೆಯುದ್ದಕ್ಕೂ ಘೋಷಣೆಯನ್ನು ಕೂಗುತ್ತ ಪುನಃ ¥ಟ್ಟಣ ಪಂಚಾಯತಗೆ ತಲುಪಿ ಜಾಥಾವನ್ನು ಮುಕ್ತಾಯಗೊಳಿಸಲಾಯಿತು. ಜಾಥಾದಲ್ಲಿ ಪಾಲ್ಗೊಂಡ ಸುಮಾರು 200 ಜನರಿಗೆ ತಂಪು ಪಾನೀಯ ಹಾಗೂ ಟೀ, ಬಿಸ್ಕೇಟ್ ವಿತರಿಸಲಾಯಿತು.
ಹೈಯರ್ ಎಲಿಮಂಟರಿ ಶಾಲೆಯಲ್ಲಿ ಪ್ರತ್ಯೇಕವಾದ 2 ಕೊಠಡಿಯಲ್ಲಿ ವಿಕಲಚೇತನರಿಗೆ ರಂಗೋಲಿ ಹಾಗೂ ಚಿತ್ರಕಲೆ ಸ್ಪರ್ಧೆಗೆ ಸುಮಾರು ಎರಡು ಘಂಟೆಗಳ ಕಾಲ ಅವಕಾಶ ಕಲ್ಪಿಸಲಾಯಿತು. ನಂತರ ಎಲ್ಲಾ ಪಾಲ್ಗೊಂಡ ಸ್ಪರ್ಧಾಳುಗಳಿಗೆ ಹಾಗೂ ಅಲ್ಲಿ ಹಾಜರಿದ್ದ ಸರ್ವರಿಗೂ ಊಟದ ವ್ಯವಸ್ಥೆ ಮಾಡಲಾಯಿತು. ಊಟದ ನಂತರ ನಿರ್ಣಾಯಕರು ಸ್ಪರ್ಧೆಯ ನಿರ್ಣಯವನ್ನು ತಿಳಿಸಿದರು.
À ಸಭಾ ಕಾರ್ಯಕ್ರಮಕ್ಕೆ ಮಾರುತಿ ನಾಯ್ಕ, ಅಧ್ಯಕ್ಷೀಯ ಭಾಷಣದಲ್ಲಿ ವಿಕಲಚೇತನರು ಯಾವುದೇ ಕಾರಣಕ್ಕೂ ಮತದಾನದಿಂದ ವಂಚಿತರಾಗಬಾರದೆಂದು ಹಾಗೂ ಮತದನದ ಕುರಿತು ಅವರಲ್ಲಿ ಜಾಗೃತಿಗೊಳಿಸಬೇಕೆಂಬ ಸದುದ್ಧೇಶದಿಂದ ಸರ್ಕಾರ ಇಂತಹ ಒಂದು ಮಹತ್ವದ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಅಲ್ಲದೇ ವಿಕಲಚೇತನರಿಗೆ ಮತದಾನಕ್ಕೆ ಬರುವಲ್ಲಿ ತಾಲೂಕಾ ಆಡಳಿತ ಎಲ್ಲಾ ಸಹಕಾರವನ್ನು ನೀಡುವುದಾಗಿ ತಿಳಿಸುತ್ತಾ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಉಪ ತಹಶೀಲ್ದಾರರಾದ ಸತೀಶ ಗೌಡ ಮಾತನಾಡಿ ಮತದಾನ ನಮ್ಮ ನಿಮ್ಮೆಲ್ಲರ ಕರ್ತವ್ಯ ತಾವೂ ಈ ಹಿಂದೆ ಕೇವಲ ವಿಕಲ ಚೇತನರನ್ನೇ ಗುರಿಯನ್ನಾಗಿಸಿ ಮತದಾನದ ಕುರಿತು ಯಾವೂದೇ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇರುವುದಿಲ್ಲ. ಸುಮಾರು ಸಾವಿರದ ಎರಡು ನೂರಾಕ್ಕಿಂತ ಹೆಚ್ಚಿರುವ ತಮ್ಮ ತಾಲೂಕಿನ ವಿಕಲಚೇತರನರು ಮತದಾನದ ಮಹತ್ವವನ್ನು ಅರಿಯದೇ ಅಥವಾ ಇನ್ನಾವದೇ ಕಾರಣದಿಂದ ಮತದಾನದಿಂದ ವಂಚಿತರಾಗುತ್ತಿದ್ದರು. ಆದರೆ ಇಂದು ಜಿಲ್ಲಾಡಳಿತ ನಮ್ಮನ್ನೆಲ್ಲಾ ಜಾಗೃತಿಗೊಳಿಸಿ ಇಂತಹ ಉತ್ತಮ ಕಾರ್ಯಕ್ರಮವನ್ನು ವಿಕಲಚೇತನರಿಗಾಗಿಯೇ ಹಮ್ಮಿಕೊಂಡಿದ್ದು, ತಾವೆಲ್ಲರೂ ಕೂಡಿ ವಿಕಲಚೇತನರ ಮತದಾರರನ್ನು ಜಾಗೃತಗೊಳಿಸುವಂತೆ . ಎಲ್ಲಾ ವಿಕಲಚೇತನರಿಗೆ ಮತದಾನದ ಕಟ್ಟೆಗೆ ಬರುವಲ್ಲಿ ವಾಹನದ ಸೌಲಭ್ಯವನ್ನು ಒದಗಿಸುವುದಾಗಿ ತಿಳಿಸಿ ಕಾರ್ಯಕ್ರಮವನ್ನು ಶಿಶು ಅಭಿವೃದ್ಧಿ ಯೋಜನೆ ಎಲ್ಲರ ಸಹಕಾರದೊಂದಿಗೆ ಅಚ್ಚುಕಟ್ಟಾಗಿ ನಡೆಸಿದೆ ಎಂದರು ,
ಕಾರ್ಯಕ್ರಮದಲ್ಲಿ ಸುಧೀಶ ನಾಯ್ಕ, ಯುವಜನ ಕ್ರೀಢಾ ಅಧಿಕಾರಿ ಹಾಗೂ ಹೈಯರ್ ಎಲಿಮೆಂಟರಿ ಶಾಲೆಯ ಮುಖ್ಯೋಪಾದ್ಯಾಯ ಆನಂದು ಮಾಸ್ತಿಕಟ್ಟೆ ಉಪಸ್ಥಿತರಿದ್ದರು.
ಕವನ ವಾಚನ, ಬೀದಿನಾಟಕ, ರಂಗೋಲಿ , ಚಿತ್ರಕಲೆ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ, ತೃತಿಯ ಬಂದವರಿಗೆ ನಗದು ಬಹುಮಾನವನ್ನು ಅಧ್ಯಕ್ಷರು ಹಾಗೂ ಅತಿಥಿಗಳಿಂದ ವಿತರಿಸಲಾಯಿತು. ಹಾಗೂಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೂ ಪ್ರೋತ್ಸಾಹದಾಯಕ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ತ್ರಿವೇಣಿ ಯಾಜಿ ಮಾತನಾಡಿದರು ಜ್ಯೋತಿ ಪಟಗಾರ ವಂದಿಸಿದರು ,.
Leave a Comment